ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದ ತರಾಟೆ
Team Udayavani, May 3, 2018, 7:40 AM IST
ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮತ ಯಾಚಿಸಲು ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಯನ್ನು ಮರಾಠಿ ಭಾಷಿಕರೇ ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಬುಧವಾರ ನಡೆದಿದೆ.
ಉತ್ತರ ಕ್ಷೇತ್ರದ ಶಿವಾಜಿ ನಗರದಲ್ಲಿ ಬುಧವಾರ ಮಧ್ಯಾಹ್ನ ಮತ ಕೇಳಲು ಬಂದ ಎಂಇಎಸ್ ಅಭ್ಯರ್ಥಿ ಬಾಳಾ ಸಾಹೇಬ ಕಾಕತಕರಗೆ ಭಾರೀ ಮುಖ ಭಂಗವಾಗಿದೆ. ಮರಾಠಿ ಭಾಷಿಕರೇ ಹೆಚ್ಚಾಗಿ ಇರುವ ಶಿವಾಜಿ ನಗರಕ್ಕೆ ಬಂದ ಅಭ್ಯರ್ಥಿಯನ್ನು ಜನ ತಡೆದು ಪ್ರಚಾರಕ್ಕೆ ಬರದಂತೆ ತರಾಟೆಗೆ ತೆಗೆದುಕೊಂಡು ಅಲ್ಲಿಂದ ಚಲೇಜಾವ್, ಚಲೇಜಾವ್ ಎಂದು ಘೋಷಣೆ ಕೂಗಿ ವಾಪಸ್ ಕಳುಹಿಸಿದರು.
ಎಂಇಎಸ್ ಅಭ್ಯರ್ಥಿ ಎಂದು ಗಡಿ ವಿಷಯ ತೆಗೆದುಕೊಂಡು ಬಂದು ಜನ ರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ಬೆಳಗಾವಿ ನಗರದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಾಗ ನೀವು ಮಲಗಿಕೊಂಡಿ ದ್ದೀರಾ? ಆ ಶಾಸಕ ಸಂಭಾಜಿ ಪಾಟೀಲ ಒಂದು ಸಲವೂ ಹಿಂದೂ ಯುವಕರ ಪರ ಬಂದು ನಿಂತಿಲ್ಲ. ಈಗ ಓಟ್ ಕೇಳ್ಳೋಕೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯ ಶಿವಾಜಿ ನಗರಕ್ಕೆ ಮತಯಾಚಿಸಲು ಬಂದ ಎಂಇಎಸ್ ಅಭ್ಯರ್ಥಿಯನ್ನು ಮರಾಠಿ ಭಾಷಿಕರು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ