ಉದ್ಯೋಗ ಸಾಲ ಸಬ್ಸಿಡಿ ಬಿಡುಗಡೆಗೆ ಮನವಿ
Team Udayavani, Jun 16, 2020, 5:03 PM IST
ಬೈಲಹೊಂಗಲ: ಎಸ್.ಸಿ, ಎಸ್.ಟಿ ಜನಾಂಗದ ಸ್ವಯಂ ಉದ್ಯೋಗ ಕೈಗೊಳ್ಳುವ ಫಲಾನುಭವಿಗಳ 2019-20 ನೇ ಸಾಲಿನ ಸಬ್ಸಿಡಿ ಹಣ ರಾಜ್ಯದ ಆಯಾ ಜಿಲ್ಲೆಗಳ ನಿಗಮಕ್ಕೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ಪದಾಧಿಕಾರಿಗಳು ಸೋಮವಾರ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಸ್.ಸಿ,ಎಸ್.ಟಿ ಜನಾಂಗದವರು 2019-20 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಪಡೆಯಲು ಅಂಬೇಡ್ಕರ್ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ, ಫಲಾನುಭವಿಗಳ ಅರ್ಜಿಯು ನಿಗಮದಿಂದ ಮಂಜೂರಾಗಿ ಬ್ಯಾಂಕಿಗೆ ಬಂದಿವೆ. ಸಬ್ಸಿಡಿ ಹಣಕ್ಕಾಗಿ ಬ್ಯಾಂಕಿನವರು ಹಣ ಮಂಜೂರಾತಿಗೆ ಜಿಲ್ಲಾ ನಿಗಮಕ್ಕೆ ಕಳಿಸಿದರೂ ಈ ವರೆಗೆ ಬ್ಯಾಂಕಿಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಇದರಿಂದ ಬಡ ಕುಟುಂಬದಿಂದ ಬಂದಿರುವ ಫಲಾನುಭವಿಗಳಿಗೆ ತೊಂದರೆಯಾಗಿದೆ. ಕೂಡಲೇ ನಿರ್ದೇಶನ ನೀಡಿ ಸಬ್ಸಿಡಿ ಮಂಜೂರಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಪರಶುರಾಮ ರಾಯಬಾಗ, ವಿನೋದ ಸವದತ್ತಿ, ರಾಜೇಶ ತೊರಗಲ್ಲ, ಉಮೇಶ ದೊಡಮನಿ, ರಾಜು ರಾಯಬಾಗ, ವಿಶಾಲ ಸವದತ್ತಿ, ಪರಶುರಾಮ ಬನ್ನಿಗಿಡದ, ನಾಗರಾಜ ಅಗಾಸಿ, ಬಸವರಾಜ ಕಿತ್ತೂರ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು
Belagavi; ಭಿಕ್ಷೆ ರೀತಿಯಲ್ಲಿ ಸಿಎಂ ಬರ ಪರಿಹಾರ ನೀಡಿದ್ದಾರೆ: ವಿಜಯೇಂದ್ರ ಆಕ್ರೋಶ
ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ
Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ