ಮೆರೆದ ಭಕ್ತಿ: ಸುರಿದ ಬಣ್ಣ
Team Udayavani, Mar 22, 2019, 9:39 AM IST
ಸವದತ್ತಿ: ಪಟ್ಟಣದ ಪದಕಿ ಗಲ್ಲಿ, ಆನಿ ಅಗಸಿ, ಗಾಂಧಿ ಚೌಕ, ಹಳೇ ಬಸ್ ನಿಲ್ದಾಣ ಹಾಗೂ ಗುರ್ಲಹೊಸೂರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಯುವಕರು, ಮಕ್ಕಳು ಬಣ್ಣ ಎರಚುತ್ತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಆಯಾ ಗಲ್ಲಿಯ ಹಿರಿಯರೆಲ್ಲರೂ ಒಂದು ಬಾರಿ ಕಾಮನ ಮೂರ್ತಿಯನ್ನು ಹಲಗಿ ಬಾರಿಸುತ್ತ ತಂದು ಕಟ್ಟಿಗೆಯ ಮೇಲಿರಿಸಿ ಇನ್ನೊಂದು ಬಾರಿ ದೇವಸ್ಥಾನಗಳಲ್ಲಿನ ದೀಪವನ್ನು ಮೇವಿನ ದೀವಿಗೆ ಹಚ್ಚಿಕೊಂಡು ಹಾಡುತ್ತ ಕೂಗುತ್ತ ತಂದು ಕಾಮ ದಹನ ಮಾಡಿ ಲಬೋ ಲಬೋ ಎನ್ನುತ್ತ ಸಂಭ್ರಮಿಸಿದರು. ಪೊಲೀಸ್ ಇಲಾಖೆ ಬಂದೋಬಸ್ತ್ಏ ರ್ಪಡಿಸಿತ್ತು. ಮುಂಜಾನೆಯಿಂದ ಕಾಮದಹನ ಮುಕ್ತಾಯವಾಗುವರೆಗೂ ಪೊಲೀಸ್ ಸಿಬ್ಬಂದಿ ಸ್ಥಳೀಯವಾಗಿ ಸುತ್ತುವ ಕಾರ್ಯ ಚುರುಕಾಗಿತ್ತು.
ಪರೀಕ್ಷಾ ದಿನದಂದೇ ಹೋಳಿ ಹಬ್ಬ: ಹೋಳಿ ಹಬ್ಬದಂದೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಅಡ್ಡಿ ಆತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ನಂತರ ವಿದ್ಯಾರ್ಥಿಗಳು ಕೂಡ ಕಾಮದಹನದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇನ್ನು ಇತರ ಗ್ರಾಮಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ಪಾಲಕರು ಕರೆದೊಯ್ಯುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ