ಪಿಡಿಒ-ಅಧ್ಯಕ್ಷ-ಸದಸ್ಯರೊಂದಿಗೆ ಮಾಮನಿ ವಿಡಿಯೋ ಸಂವಾದ
Team Udayavani, Apr 12, 2020, 5:30 PM IST
ಸವದತ್ತಿ: ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ತಾಪಂ ಸಭಾಭವನದಲ್ಲಿ ಎಲ್ಲ ಪಿಡಿಒಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು
ಸವದತ್ತಿ: ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ಇಲ್ಲಿನ ತಾಪಂ ಸಭಾಭವನದಲ್ಲಿ ಶನಿವಾರ ಗ್ರಾಪಂ ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿದ ಅವರು, ಕೋವಿಡ್ ಸೋಂಕು ತಡೆಗೆ ಆರೋಗ್ಯ, ಪೊಲೀಸ್ ಮತ್ತು ಇತರೆ ಇಲಾಖೆಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಎಲ್ಲ ಪಂಚಾಯತಗಳ ಆಹಾರ, ಪಡಿತರ, ನೀರು ಮತ್ತು ಇನ್ನಿತರೆ ಸೌಲಭ್ಯಗಳ ಕುರಿತು ಚರ್ಚಿಸಿತು. ಕೆಲವೆಡೆ ಸೋಂಕಿತ ವ್ಯಕ್ತಿಗಳು ಕ್ವಾರಂಟೇನ್ ಹಾಗೂ ಮನೆಗಳಲ್ಲಿರದೇ ಗ್ರಾಮಗಳಲ್ಲಿ ಸುತ್ತಾಡಿಕೊಂಡಿದ್ದಾರೆ. ಯಾರ ಮಾತೂ ಕೇಳುತ್ತಿಲ್ಲವೆಂದು ಶಿರಸಂಗಿ ಮತ್ತು ಹೂಲಿ ಗ್ರಾಮಗಳ ಪಿಡಿಒಗಳು ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪೊಲೀಸ್ ರಿಂದ ಅವರನ್ನು ಕರೆ ತಂದು ನೇರವಾಗಿ ಮೊರಾರ್ಜಿ ಶಾಲೆಯಲ್ಲಿ ಇರಿಸಿ. ಹೆಚ್ಚಿನ ಅನಾಹುತ ತಪ್ಪಿಸಿ ಎಂದರು.
ಹೀರೆಕುಂಬಿ ಪಿಡಿಒ ಆನೂರಗೆ ಗ್ರಾಮದಲ್ಲಿದ್ದುಕೊಂಡೆ ನಿರ್ವಹಿಸಬೇಕು. ನಿಮ್ಮಿಂದ ಸ್ವತ್ಛತಾ ಕಾರ್ಯ ನಡೆಯದಿದ್ದಲ್ಲಿ ತಾಲೂಕಾಡಳಿತವೇ ಬಂದು ಸ್ವತ್ಛಗೊಳಿಸುತ್ತದೆ ಎಂದರು. ತಹಶೀಲ್ದಾರ್ ಪ್ರಶಾಂತ ಪಾಟೀಲ ಮಾತನಾಡಿ, ತಾಲೂಕಿನಾದ್ಯಂತ ಪಡಿತರ ಸರಿಯಾಗಿ ವಿತರಣೆಯಾಗುತ್ತಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗುವುದು ಕಂಡು ಬರುತ್ತಿದೆ. ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಪಡಿತರ ವಿತರಿಸಬೇಕಿದೆ. ಸಮಯಕ್ಕೆ ಸರಿಯಾಗಿ ಕೊಡದೇ ಇದ್ದಲ್ಲಿ ಆ ಕೇಂದ್ರಗಳ ಪರವಾನಗಿ ರದ್ದುಪಡಿಸಲಾಗುವುದು. ಇಲ್ಲಿಯವರೆಗೆ ಕೇವಲ 65 ಪಡಿತರ ಹಂಚಿಕೆಯಾಗಿದೆ. ಉಳಿದದ್ದು ಸರಳವಾಗಿ ಹಂಚಿಕೆಯಾಗಬೇಕು. ಇಲ್ಲದಿದ್ದಲ್ಲಿ ಕ್ರಮ ಅನಿವಾರ್ಯ ಎಂದರು.
ಸಿಪಿಐ ಮಂಜುನಾಥ ನಡುವಿನಮನಿ ಮುರಗೋಡ, ಸವದತ್ತಿ, ಯರಗಟ್ಟಿ ಭಾಗಗಳ ಪೊಲೀಸ್ ಅ ಧಿಕಾರಿಗಳ ದೂರವಾಣಿ ಸಂಖ್ಯೆ ನೀಡಿದರಲ್ಲದೇ ಅವಶ್ಯವಿದ್ದಲ್ಲಿ ನೇರವಾಗಿ ಸಂಪರ್ಕಿಸಿ, ಇಲಾಖೆ ನಿಮ್ಮೊಂದಿಗಿದೆ ಎಂದರು. ಕೋವಿಡ್ ಟಾಸ್ಕ್ಪೋರ್ಸ್ ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿ ವರ್ಗ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ