ಮುಂದಿನ ಸಲವೂ ರಾಹುಕಾಲದಲ್ಲೇ ನಾಮಪತ್ರ: ಜಾರಕಿಹೊಳಿ
Team Udayavani, Dec 7, 2018, 6:50 AM IST
ಬೆಳಗಾವಿ: ಕಳೆದ ವರ್ಷ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಕ್ಕೆ ಗೆಲುವಿನ ಅಂತರ ಕಡಿಮೆ ಆಯಿತು ಎಂದು ಕೆಲವರು ವ್ಯಾಖ್ಯಾನ ಮಾಡಿದ್ದಾರೆ. ಮುಂದಿನ ಸಲ ಮತ್ತೆ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿ, ಅತ್ಯಧಿಕ ಅಂತರದಿಂದ ಗೆಲ್ಲುತ್ತೇನೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಗುರುವಾರ ಡಾ| ಬಾಬಾಸಾಹೇಬ ಅಂಬೇಡ್ಕರ ಮಹಾಪರಿನಿರ್ವಾಣ ದಿನ ನಿಮಿತ್ತ ನಡೆದ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಮಮಾರ್ಗದಲ್ಲಿ ಚುನಾವಣೆ ಮಾಡಬಾರದು ಎಂದು ಹಣ-ಹೆಂಡ ಹಂಚಿಲ್ಲ. ಇದೊಂದು ಪ್ರಯೋಗ ಮಾಡಿ ಜನರ ಪ್ರತಿಕ್ರಿಯೆ ಅರಿಯುವ ಪ್ರಯತ್ನ ಮಾಡಲಾಯಿತು. ಅಂತರ ಹೆಚ್ಚಿಗೆ ಬೇಕಾದರೆ ನಾವೂ ಏನು ಬೇಕಾದರೂ ಮಾಡಬಹುದು. ಇದನ್ನು ಮುಂದಿನ ಚುನಾವಣೆಯಲ್ಲಿ ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.