ಆಹಾರ ಹಾಳು ಮಾಡದೇ ಹಿತಮಿತವಾಗಿ ಬಳಸಿ-ಸೋಂದಾದ ಶ್ರೀ ಭಟ್ಟಾಕಲಂಕ ಭಟ್ಟಾರಕ
ಎಲ್ಲಿ ಅಹಿಂಸೆ ಇರುತ್ತದೆಯೋ ಅಲ್ಲಿ ಸುಖ, ಶಾಂತಿ ಪ್ರಾಪ್ತಿ
Team Udayavani, Feb 17, 2024, 4:59 PM IST
ಉದಯವಾಣಿ ಸಮಾಚಾರ
ಅಡಹಳ್ಳಿ: ಹಸಿದ ಹೊಟ್ಟೆ ತುಂಬಿಸುವ ಅನ್ನಕ್ಕಿಂತ ಮತ್ತೂಂದು ದೇವರಿಲ್ಲ. ಅಸಂಖ್ಯಾತ ಪಶು, ಪಕ್ಷಿ ಹಾಗೂ ಪ್ರಾಣಿಗಳಿಗೆ ಆಹಾರವಾಗಿ, ಜೀವವಾಗಿ ಅನ್ನ ಒಡಲು ತುಂಬುತ್ತದೆ. ಈ ಪ್ರಪಂಚದಲ್ಲಿ ಅದೆಷ್ಟೋ ಜೀವಿಗಳು ಆಹಾರವಿಲ್ಲದೇ ಸಾಯುತ್ತಿರುವಾಗ ಅನ್ನವನ್ನು ಹಾಳು ಮಾಡದೆ ಹಿತಮಿತವಾಗಿ ಬಳಸಬೇಕು ಎಂದು ಸೋಂದಾದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ನಂದಗಾಂವ ಗ್ರಾಮದಲ್ಲಿ ಶುಕ್ರವಾರ ಜರುಗಿದ ಪಂಚಕಲ್ಯಾಣ ಮಹೋತ್ಸವದ ಗರ್ಭಕಲ್ಯಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಜೀವನ ಸಂಸ್ಕಾರದಲ್ಲಿ ಗರ್ಭ ಸಂಸ್ಕಾರಕ್ಕೆ ಪ್ರಮುಖ ಸ್ಥಾನವಿದೆ.
ಗರ್ಭವತಿಯಾದ ಹೆಣ್ಣುಮಗಳು 24 ತೀರ್ಥಂಕರರ ಮಾತಾಪಿತರನ್ನು ಸ್ಮರಿಸಿಕೊಂಡು ನಮಿಸಿದರೆ ಲೋಕಕಲ್ಯಾಣ ಮಾಡುವ ಸಂಸ್ಕಾರವಂತ ಮಕ್ಕಳು ಜನಿಸುತ್ತಾರೆ. ನೀವು ಕೂಡಾ ಲೋಕ ಮಾತೆ ಎನಿಸಿಕೊಳ್ಳುತ್ತೀರಿ ಎಂದರು.
ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಪಂಚಕಲ್ಯಾಣ ಪೂಜೆಯಿಂದ ಇಡೀ ಮಾನವ ಕುಲಕ್ಕೆ ಒಳಿತಾಗುತ್ತದೆ. ಎಲ್ಲಿ ಅಹಿಂಸೆ ಇರುತ್ತದೆಯೋ ಅಲ್ಲಿ ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ. ನಾನು ಅಲ್ಪಸಂಖ್ಯಾತರ ಸಚಿವನಿದ್ಧಾಗ ಜೈನ ಧರ್ಮದ ಕುರಿತು ಅಧ್ಯಯನ ಮಾಡಿ ಬಸದಿಗಳಿಗೆ ಸಾಕಷ್ಟು ಅನುದಾನ ನೀಡಿದ್ಧೇನೆ. ಶ್ರವಣ ಬೆಳಗೋಳ ಮಹಾಮಸ್ತಕಾಭಿಷೇಕ ಮಾಡಲು ಬಜೆಟ್ನಲ್ಲಿ 50 ಕೋಟಿ ಮೀಸಲಿಟ್ಟಿದ್ಧೆ, ಜೈನ ಸಮಾಜದ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಈ ಶುಭಸ್ಥಾನದಲ್ಲಿ ಸಮಸ್ತ ಮುನಿ, ಆಯ್ನಿಕ ಹಾಗೂ ಭಟ್ಟಾರಕರ ಸಾನ್ನಿಧ್ಯದಲ್ಲಿ ಪಾಲ್ಗೊಳ್ಳುವುದೇ ಪರಮ ಪುಣ್ಯವಾಗಿದೆ ಎಂದರು.
ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು, ಸಾಧನರತ್ನ ಅಮಿತಸೇನ ಮುನಿಮಹಾರಾಜರು ಆಶೀರ್ವಚನ ನೀಡಿದರು.
ಧನ್ಯಕುಮಾರ ಗುಂಡೆ, ಸುರೇಶ ತಂಗಾ, ಬಾಬಾಸಾಹೇಬ ಪಾಟೀಲ, ಕೆಎಂಎಫ್ ಮಾಜಿ ಜಿಲ್ಲಾಧ್ಯಕ್ಷ ಬಾಬು ಗಲಗಲಿ, ಅಧಿಕಾರಿ ಶ್ರೀಕಾಂತ ಮಾಕಾಣಿ, ಶ್ರೀ ಕಜ್ಜಂಪಾಡಿಸುಭ್ರಮಣ್ಯಂ ಭಟ್, ಅಭಯಕುಮಾರ ಅಕಿವಾಟೆ, ದಾದಾ ಪಾಟೀಲ, ರಾವಸಾಬ ಬಿರಾದಾರಪಾಟೀಲ, ಮುತ್ತಪ್ಪ ಕಾತ್ರಾಳ, ಪುಷ್ಪಕುಮಾರ ಪಾಟೀಲ, ಭರಮು ಬಳ್ಳೋಜ, ಗೋಪು ಸಪ್ತಸಾಗರ, ಧನಪಾಲ ಕುಸನಾಳ, ಜಿನ್ನಪ್ಪ ಕಾಗವಾಡ, ಶಿವಕುಮಾರ ಪಡಸಲಗಿ, ರಾಯಪ್ಪ ಗುಡ್ಡೊಡಗಿ, ಬಸಪ್ಪ ಗುಮಟಿ, ವಜ್ರಕುಮಾರ ಮಗದುಮ್ಮ, ಜಯಪಾಲ ನಂದೇಶ್ವರ ಸೇರಿದಂತೆ ಹಲವರು ಇದ್ದರು.
ಜೈನ ಸಮಾಜದ ಜೊತೆ ನನ್ನ ಅವಿನಾಭಾವ ಸಂಬಂಧವಿದೆ. ನನ್ನ ಬಹುತೇಕ ಗೆಳೆಯರು ಇದೇ ಸಮುದಾಯದವರಾಗಿದ್ದರಿಂದ ನಾನು ಮರಾಠಾ ಸಮಾಜದವನಾದರೂ ಕೂಡ ಇಂದಿಗೂ ಮಾಂಸಾಹಾರ ಸೇವನೆ ಮಾಡಿಲ್ಲ. ನನಗೆ ಜೈನ ಸಮಾಜದ ಸಸ್ಯಾಹಾರ ಮತ್ತು ಸಾತ್ವಿಕ ಜೀವನ ಪ್ರೇರಣೆಯಾಗಿದೆ.
ಶ್ರೀಮಂತ ಪಾಟೀಲ, ಮಾಜಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ