ದೇವಿಯರ ಜಾತ್ರೋತ್ಸವಕ್ಕೆ ವಿಜೃಂಭಣೆಯ ಚಾಲನೆ


Team Udayavani, Feb 1, 2020, 5:35 PM IST

Feburary-29

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಊರಮ್ಮ ಮತ್ತು ದ್ಯಾಮಮ್ಮ ದೇವಿಯರ ಜಾತ್ರೋತ್ಸವಕ್ಕೆ ಶುಕ್ರವಾರ ವಿಜೃಂಭಣೆಯ ಚಾಲನೆ ನೀಡಲಾಯಿತು. ಈ ಕುರಿತು ಗ್ರಾಮದ ಮುಖಂಡ ಗಂಗಾಧರಗೌಡ ಮಾತನಾಡಿ, ಆರಂಭದಲ್ಲಿ ದೇವಿಯರ ದೇವಸ್ಥಾನದ ಮುಂಭಾಗ
ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿಯಿಂದ ಧರ್ಮ ದ್ವಜಾರೋಹಣದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

ನಂತರ ಎರಡು ಚೌಕಿ ಮನೆಗಳಿಗೆ ದೇವಸ್ಥಾನ ಸಮಿತಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಣಕಾರ ಅನ್ನಪೂರ್ಣಮ್ಮ ಕೊಟ್ರಪ್ಪನವರ ಮನೆಯವರಿಂದ ಕಳಸ ತೆಗೆದುಕೊಂಡು ಕುಂಬಾರ ನಾಗಪ್ಪ ಮನೆಯಿಂದ ಗಟ್ಟಿಗಡಿಗೆಗಳನ್ನು ಬಣಕಾರ ಕೊಟ್ರಪ್ಪನವರ ಮನೆಗೆ ವಿಜೃಂಭಣೆ ಮೆರವಣಿಗೆ ಮೂಲಕ ತರಲಾಯಿತು. ಗಟ್ಟಿಗಡಿಗೆಗಳಿಗೆ ಪೂಜೆ ಸಲ್ಲಿಸಿ ಗ್ರಾಮದ ಮೇಟಿಗಳಾದ ಆನೇಕಲ್‌ ಕೊಟ್ರಪ್ಪ ದೇವಪ್ಪ ಮನೆಯಲ್ಲಿ, ಶ್ಯಾನಭೋಗರ ಟಿ. ಉದಯಭಾಸ್ಕರ್‌, ದೇವೆಂದ್ರಗೌಡ್ರು, ತಳವಾರ ಯಂಕಣ್ಣ, ಹರಿಜನ ಮೂಕಬಸಪ್ಪ ಇವರ ಮನೆಗಳಲ್ಲಿ ಗಟ್ಟಿಗಡಿಗಿ ಸ್ಥಾಪಿಸಲಾಯಿತು. ಇದರ ಜೊತೆಗೆ ಉಲುಪಿ ನೀಡಲಾಯಿತು. ಬಳಿಕ ಪಟ್ಟದ ಕೋಣಕ್ಕೆ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು.

ಜಾತ್ರೆ ಹಿನ್ನೆಲೆಯಲ್ಲಿ ಇಡೀ ಗ್ರಾಮದ ಸುತ್ತಲೂ ಬೇಲಿ ಹಾಕಲಾಗಿದೆ. ಗ್ರಾಮದ
ಹುಲುಸನ್ನು ಬೇರೆಯವರು ಒಯ್ಯಬಾರದೆಂಬ ಸಾಂಪ್ರಾದಾಯಿಕ ನಂಬಿಕೆಯಿಂದ ಬೇಲಿ
ಹಾಕಿದ್ದಾರೆ. 9 ವರ್ಷದ ನಂತರ ಜರುಗುವ ಈ ಜಾತ್ರೆಯಿಂದಾಗಿ ಗ್ರಾಮದಲ್ಲಿ ಉಲ್ಲಾಸದ ವಾತಾವರಣ ನಿರ್ಮಾಣವಾಗಿದೆ. ದೇವಿಯರ ಜಾತ್ರೆಯಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬುದು ಹಿರಿಯರ ಬಲವಾದ ನಂಬಿಕೆಯಾಗಿದೆ. ಗ್ರಾಮಸ್ಥರು ಮನೆಗಳನ್ನು ವಿವಿಧ ಅಲಂಕಾರಿಕ ಬಣ್ಣಗಳಿಂದ ಶೃಂಗರಿಸಿಕೊಂಡಿದ್ದಾರೆ. ದೇವಸ್ಥಾನ ಸಮಿತಿಯವರು ಮತ್ತು ಗ್ರಾಮಸ್ಥರು ಇಡೀ ಗ್ರಾಮವನ್ನೇ ನಿರಂತರವಾಗಿ 15ದಿನಗಳಿಂದ ಸ್ವಚ್ಛಗೊಳಿಸಿ ಜಾತ್ರೋತ್ಸವಕ್ಕೆ ಮೆರಗು ತಂದಿದ್ದಾರೆ.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಚ್‌.ಬಿ. ನಾಗನಗೌಡ್ರು, ಧರ್ಮಕರ್ತ ಟಿ.
ಉದಯಭಾಸ್ಕರ್‌ರಾವ್‌, ಮುಖಂಡರಾದ ಗೌರಜ್ಜನವರ ಬಸವರಾಜಪ್ಪ, ಕಡ್ಡಿ ಚನ್ನಬಸಪ್ಪ, ಟಿ. ಯಂಕಣ್ಣ, ಬಾಳಿಕಾಯಿ ಚಿದಾನಂದಪ್ಪ, ಅಕ್ಕಿ ದೊಡ್ಡಕೊಟ್ರೇಶ್‌, ಬಣಕಾರ ತೋಟಪ್ಪ,
ಮ್ಯಗಳಮನಿ ಬಸವರಾಜಪ್ಪ, ಆನೇಕಲ್‌ ಶಾಂತಪ್ಪ, ಡಂಬ್ರಳ್ಳಿ ಪರುಸಪ್ಪ, ಪಂಚಯ್ಯ, ಬಸರಕೋಡು ಲಕ್ಷ್ಮಣ, ಬಾಚಿನಳ್ಳಿ ಮಹೇಶ, ಶ್ರೀನಿವಾಸ, ಬಿ. ಕೊಟ್ರೇಶ, ಸುಣಗಾರ ರಾಮು,
ತಳವಾರ ಪರುಸಪ್ಪ, ಹಾಲಪ್ಪ, ಸೊಬಟಿ ಹರೀಶ್‌, ತಳವಾರ ಪಾಂಡುರಂಗ, ಬಣಕಾರ ಸುಭಾಷ್‌, ಈರಪ್ಪಚಾರಿ, ಹೊಟ್ಟಿ ವೀರಣ್ಣ, ಜೀರ್‌ ಗವಿಸಿದ್ದೇಶ, ಸಕ್ರಗೌಡ, ಲೇಪಾಕ್ಷಿ ಇತರರಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.