ಒಂದೇ ತಿಂಗಳಲ್ಲಿ ರಾಮುಲು ಏನೆಂಬುದು ತೋರಿಸುತ್ತೇನೆ
Team Udayavani, Sep 26, 2022, 9:54 PM IST
ಕೂಡ್ಲಿಗಿ: ಎಸ್ಟಿ ಮೀಸಲಾತಿ ತರುತ್ತೇನೆಂದು ರಕ್ತದಲ್ಲಿ ಬರೆದುಕೊಡುತ್ತೇನೆಂದು ಸುಳ್ಳು ಆಶ್ವಾಸನೆ ನೀಡಿ, ನಮ್ಮ ಜನಾಂಗಕ್ಕೆ ಮೋಸ ಮಾಡುತ್ತಿದ್ದಾನೆಂದು ಹೇಳುವವರಿಗೆ ಈ ರಾಮುಲು ಏನು ಎಂಬುದನ್ನು ಒಂದೇ ತಿಂಗಳಲ್ಲಿ ತೋರಿಸುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ತೋರಿಸಲು ದಿನಗಳು ಹತ್ತಿರವಾಗುತ್ತಿವೆ. ಆಗ ಶ್ರೀರಾಮುಲು ಯಾರು ಎಂದು ತಿಳಿಯುತ್ತದೆ.
ಮೀಸಲಾತಿ ವಿಚಾರದಲ್ಲಿ ಜನಾಂಗಕ್ಕೆ ಅವಮಾನ ಮಾಡಲ್ಲ. ಸಮುದಾಯಕ್ಕೆ ನ್ಯಾಯ ದೊರಕುವ ಪ್ರಾಮಾಣಿಕ ಪ್ರಯತ್ನದ ಮೂಲಕ ಮೀಸಲಾತಿ ಜಾರಿಗೊಳಿಸುತ್ತೇನೆ. ಜನರು ತಾಳ್ಮೆಯಿಂದ ಇರಬೇಕು. ಮೀಸಲಾತಿ ವಿಚಾರವಾಗಿ ಸಮುದಾಯದ ಜನ ಅವಮಾನ ಮಾಡುತ್ತಿದ್ದಾರೆ ಬೇಸರವಾಗುತ್ತಿದೆ. ಸತೀಶ ಜಾರಕಿಹೊಳಿ ಮೀಸಲಾತಿ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡಬಾರದು. ಮುಂದಿನ ತಿಂಗಳು ಎಸ್-ಎಸ್ಟಿ ಮೀಸಲಾತಿ ಸಂಬಂಧ ಸರ್ವಪಕ್ಷಗಳ ಸಭೆ ಮೂಲಕ ಮೀಸಲಾತಿ ಕೊಡಿಸಲಿಕ್ಕೆ ಬದ್ಧ ಎಂದರು.