ಹಂಪಿಗೆ ಎಸ್ಪಿ ಚೆನ್ನಣ್ಣನವರ್ ಭೇಟಿ
Team Udayavani, Feb 28, 2021, 4:07 PM IST
ಹೊಸಪೇಟೆ: ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಅವರು ಶನಿವಾರ ಹಂಪಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ, ರಥಬೀದಿ, ಎದುರು ಬಸವಣ್ಣ ಮಂಟಪ, ಸಾಲು ಮಂಟಪ ಸೇರಿದಂತೆ ನಾನಾ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಹಂಪಿಯ ಹೇಮಕೂಟ ಪ್ರದೇಶದಲ್ಲಿ ಸೂರ್ಯಾಸ್ತಮಾನ ವೀಕ್ಷಿಸಿದರು.
ತಮ್ಮೊಂದಿಗೆ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾದ ಪ್ರವಾಸಿಗರೊಂದಿಗೆ ಸೆಲ್ಫಿ ನೀಡಿದರು. ಯುವಕರಿಗೆ ಸಮಾಜದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಸಲಹೆ ಕೂಡ ನೀಡಿದರು.
ಇದಕ್ಕೂ ಮುನ್ನ ಕೂಡ್ಲಿಗಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ನಂತರ ಹಂಪಿಗೆ ಭೇಟಿ ನೀಡಿದ್ದರು.