ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿ
ಧರ್ಮ ನಿರಪೇಕ್ಷತೆ ರಾಷ್ಟ್ರ ನಿರ್ಮಾಣಕ್ಕೆ ಸ್ವಾತಂತ್ರ್ಯ ಸೇನಾನಿ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ
Team Udayavani, Jan 24, 2020, 3:32 PM IST
ಸಂಡೂರು: ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿ ನೇತಾಜಿ ಸುಭಾಷ್ಚಂದ್ರ ಬೋಸರು ಈ ದೇಶಕ್ಕಾಗಿತಮ್ಮ ತನು, ಮನ ಧನವನ್ನು ಅರ್ಪಿಸುವುದಲ್ಲದೇ ಐಎನ್ಎ ಸೈನ್ಯವನ್ನು ಕಟ್ಟಿದ ಮಹಾನ್ ಯೋಧ ಎಂದು ಎಐಡಿಎಸ್ಓದ ಉಪಾಧ್ಯಕ್ಷ ಡಾ| ಪ್ರಮೋದ್ ಅಭಿಪ್ರಾಯಿಸಿದರು.
ಅವರು ಗುರುವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿಯವರ 123ನೇ ಜನ್ಮದಿನದ ಅಂಗವಾಗಿ ಧರ್ಮನಿರಪೇಕ್ಷತೆ- ಪ್ರಜಾಪ್ರಭುತ್ವವನ್ನು ತಿಳಿಸಿ ಎಂಬ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ದೇಶ ಬೋಸರ ಧರ್ಮ ನಿರಪೇಕ್ಷತೆಯ ಜಾತ್ಯತೀತ ರಾಷ್ಟ್ರವಾಗಿ ಜೈಹಿಂದ್ ಘೋಷಣೆಯನ್ನು ಹೊಂದುವ ಮೂಲಕ ಕಟ್ಟಲಾಗಿದೆ. ನಾಡಿನ ಯುವ ಶಕ್ತಿಯೇ ಅಗಿದ್ದ ಸ್ವಾಮಿ ವಿವೇಕಾನಂದರ ಸ್ಫೂರ್ತಿಯನ್ನು ಪಡೆದು ಚಳವಳಿಯನ್ನು ಪ್ರಾರಂಭಿಸಿದ ಕಾಲದಲ್ಲಿ ಬ್ರಿಟಿಷರಿಂದ ಧರ್ಮ, ಜಾತಿ, ಭಾಷೆ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ವಿಭಜನೆ, ಕೋಮು ಕಲಹಗಳು ಹಾಗೂ ಜಾತಿ ತುಳಿತ ಇವೆಲ್ಲವೂಗಳಿಂದ ಸ್ವಾತಂತ್ರ್ಯವನ್ನು ಪಡೆಯುವ ಹೋರಾಟವನ್ನು ಮಾಡಿದವರು ಸುಭಾಷ್ಚಂದ್ರಬೋಸರು. ಆದರೆ ಇಂದು ನಾವು ಹಿಂದೂ, ಮುಸ್ಲಿಂರ ನಡುವಿನ ವ್ಯತ್ಯಾಸ ನಿರ್ಮಾಣ ಮಾಡುವ ಮೂಲಕ ಆಳ್ವಿಕೆ ನಡೆಸುವವರು ಸಹ ಬ್ರಿಟಿಷ್ ಮಾದರಿಯಲ್ಲಿ ದೇಶವನ್ನು ಒಡೆಯುವ, ಅಳುವ ತಂತ್ರಗಾರಿಕೆಯನ್ನು ಮಾಡುತ್ತಿರುವುದು ದೇಶಕ್ಕೆ ಮಾಡುತ್ತಿರುವ ಅಪಮಾನವಾಗುತ್ತಿದೆ, ಆದ್ದರಿಂದ ಈ ದೇಶದ ಸೇನಾನಿಯವರನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಧರ್ಮ ನಿರಪೇಕ್ಷತೆಯ ರಾಷ್ಟ್ರ ನಿರ್ಮಾಣ ಮಾಡೋಣ ಎಂದರು.
ಮುಖಂಡ ಗೋವಿಂದ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬೋಸ್ರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಕರೆನೀಡಿದರು. ಕಾಲೇಜಿನ ಉಪನ್ಯಾಸಕರಾದ ಸಿದ್ದೇಶ, ಪ್ರಿಯಾದರ್ಶಿನಿ, ಎಐಡಿಎಸ್ಓ ಮುಖಂಡ ಮಂಜುನಾಥ, ಪ್ರಮೋದ್, ಗೋವಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ