ಎತ್ತುಗಳಿಗೆ ಸ್ನಾನ ಮಾಡಿಸಲು ಹೋದ ವಿದ್ಯಾರ್ಥಿ ನೀರು ಪಾಲು
Team Udayavani, Oct 29, 2019, 11:23 AM IST
ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಲಿಂಗನಾಯಕನ ಹಳ್ಳಿಯಲ್ಲಿ ಜೋಡೆತ್ತುಗಳಿಗೆ ಸ್ನಾನ ಮಾಡಿಸಲು ಹೋದ ವಿದ್ಯಾರ್ಥಿ ನೀರು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಲಿಂಗನಾಯಕನಹಳ್ಳಿ ಗ್ರಾಮದ ವಿದ್ಯಾರ್ಥಿ ಅಭಿಲಾಷ್ (16) ನೀರು ಪಾಲಾದ ಯುವಕ ಎಂದು ತಿಳಿದುಬಂದಿದೆ. ಈ ದಿನ ಬೆಳಿಗ್ಗೆ ಜೋಡೆತ್ತುಗಳನ್ನು ಕೊಂಡ್ಯೊಯ್ದು ಲಿಂಗನಾಯಕನಹಳ್ಳಿ ಗ್ರಾಮ ಹೊರವಲಯದ ನದಿಯಲ್ಲಿ ಸ್ನಾನ ಮಾಡಿಸುತ್ತಿರುವಾಗ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಆ ವಿದ್ಯಾರ್ಥಿಯ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.