ಮೈತ್ರಿ ಸರ್ಕಾರ ಸುಭದ್ರ
Team Udayavani, Dec 30, 2018, 12:30 AM IST
ಬಳ್ಳಾರಿ: “ಅನಿವಾರ್ಯ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸುಭದ್ರವಾಗಿದೆ. ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನಿಭಾಯಿಸಲಿದ್ದಾರೆ’ ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.
ಹೊಸಪೇಟೆಯ ಹಂಪಿ ಕನ್ನಡ ವಿವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ. ಬೇರೆ ಬೇರೆಯಲ್ಲ. ಹಿಂದೆ ಸಿದ್ದರಾಮಯ್ಯನವರೇ ರಮೇಶ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಿದ್ದರು. ಇದೀಗ ಅವರನ್ನು ತೆಗೆದು ಸತೀಶ್ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಜಾರಕಿಹೊಳಿ ಸಹೋದರರು ಸಿದ್ದರಾ
ಮಯ್ಯ ಹೇಳಿದಂತೆ ಕೇಳುತ್ತಾರೆ. ರಮೇಶ ಜಾರಕಿಹೊಳಿಯವರಿಗೆ ಸಿಟ್ಟಿದೆ. ಅದನ್ನು ಶಮನ ಮಾಡುವುದಾಗಿ ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದರು.