ಚೆಕ್ ಡ್ಯಾಂ ನಿರ್ಮಿಸದೆ ಹಣ ದುರ್ಬಳಕೆ
ಖುದಾವನಪೂರ ಗ್ರಾಮಸ್ಥರಿಂದ ಜಿಪಂ ಸಿಇಒಗೆ ಮನವಿ
Team Udayavani, Jul 27, 2019, 10:21 AM IST
ಭಾಲ್ಕಿ: ಖುದಾವನಪೂರ ಗ್ರಾಮದ ಹೊಲವೊಂದರ ಹತ್ತಿರ ಚೆಕ್ ಡ್ಯಾಂ ನಿರ್ಮಿಸುವ ಹೆಸರಿನಲ್ಲಿ ಜೆಸಿಬಿಯಿಂದ ಗಾರಿ ಕೆದರಿರುವುದನ್ನು ತಾಪಂ ಕಚೇರಿಯ ಅಧಿಕಾರಿಗಳು ವೀಕ್ಷಿಸಿದರು.
ಭಾಲ್ಕಿ: ಇಂಚೂರ ಗ್ರಾಪಂ ವ್ಯಾಪ್ತಿಯ ಖುದಾವನಪೂರ ಗ್ರಾಮದಲ್ಲಿ ಚೆಕ್ಡ್ಯಾಂ ನಿರ್ಮಿಸದೇ ಲಕ್ಷಗಟ್ಟಲೇ ಹಣ ಗುಳುಂ ಮಾಡಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಖುದಾವನಪೂರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಖುದಾವನಪೂರ ಗ್ರಾಮಸ್ಥರಾದ ತಾನಾಜಿ ತುಳಸಿರಾಮ ಹುಪಳೆ, ಕರುಣಾಬಾಯಿ ಮುರಾರಿ, ಅಶೀಶಕುಮಾರ ಬಾಬುರಾವ್ ಮತ್ತು ನಾಗನಾಥ ರಾಚಪ್ಪಾ ಅವರು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇಂಚೂರ ಗ್ರಾಪಂ ಅಧಿನದಲ್ಲಿರುವ ಖುದಾವನಪೂರ ಗ್ರಾಮದ ಜ್ಯೋತಿಬಾ ನಾಮದೇವರಾವ್ ಮಾನೆ ಅವರ ಹೊಲದ ಹತ್ತಿರ 2018-19ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್ಡ್ಯಾಂ ಕಾಮಗಾರಿ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿ ನಡೆಸದೇ ಹಣ ಪಡೆದಿದ್ದಾರೆ. ಮೇ 28ರಂದು ಚೆಕ್ಡ್ಯಾಂ ಕಾಮಗಾರಿಗೆ ಕೂಲಿ ಮತ್ತು ಸಾಮಗ್ರಿಯ ಒಟ್ಟು ಮೊತ್ತ ರೂ.22,9,524 ಪಡೆಯಲಾಗಿದೆ. ಆ ಸ್ಥಳದಲ್ಲಿ ಹೋಗಿ ನೋಡಿದರೆ ಚೆಕ್ ಡ್ಯಾಂ ನಿರ್ಮಾಣವೇ ಆಗಿಲ್ಲ. ಬರಿ ಜೆಸಿಬಿಯಿಂದ ಗಾರಿ ಕೆದರಿರುವುದು ಮಾತ್ರ ಕಾಣುತ್ತದೆ. ಕಾರಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ