ಸೋಯಾ ಬೀಜಕ್ಕೆ ಅನ್ನದಾತರ ಅಲೆದಾಟ!


Team Udayavani, Jun 19, 2021, 9:01 PM IST

zxdcfghgfdsdfgh

ಬೀದರ: ಕೋವಿಡ್‌ ಸಂಕಷ್ಟದ ನಡುವೆಯೂ ಉತ್ತಮ ಮಳೆಯಿಂದಾಗಿ ಸೋಯಾಬಿನ್‌ ಬಿತ್ತನೆ ಮಾಡಿ ಹಣ ಗಳಿಸಬೇಕೆಂಬ ಜಿಲ್ಲೆಯ ಅನ್ನದಾತರಿಗೆ “ಬೀಜ ನೋ ಸ್ಟಾಕ್‌’ ತಣ್ಣೀರೆರಚಿದೆ. ಸೋಯಾಬಿನ್‌ ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುತ್ತಿದ್ದು, ಅಧಿ ಕಾರಿಗಳಿಗೆ ದಿಗ½ಂಧನ ಹಾಕಿ ಬಿಸಿ ಮುಟ್ಟಿಸಿದ್ದಾರೆ.

ಇನ್ನೊಂದೆಡೆ ಕೃಷಿ ಇಲಾಖೆ ಬೀಜದ ಕೊರತೆ ಇದೆ ಎಂದು ಕೈಚಲ್ಲಿ ಕುಳಿತಿದೆ. ಸೋಯಾಬಿನ್‌ ಮಳೆ ಹೆಚ್ಚಾದರೂ ಇಲ್ಲ ಕಡಿಮೆಯಾದರೂ ಉತ್ತಮ ಇಳುವರಿ ನೀಡುವ ಕಾರಣ ರೈತರಿಗೆ “ಭರವಸೆ’ಯ ಬೆಳೆ ಎಂದೆನಿಸಿಕೊಂಡಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಸೋಯಾ ಕ್ಷೇತ್ರ ಗಣನೀಯವಾಗಿ ಹೆಚ್ಚಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶ (3.60 ಲಕ್ಷ ಹೆಕ್ಟೇರ್‌) ಪೈಕಿ ಅರ್ಧದಷ್ಟು (1.80 ಲಕ್ಷ ಹೆಕ್ಟೇರ್‌) ಪ್ರದೇಶದಲ್ಲಿ ಸೋಯಾ ಆವರಿಸಿಕೊಂಡಿದೆ.

ಇಂದು ಬೀದರ ರಾಜ್ಯದಲ್ಲೇ ಅತಿ ಹೆಚ್ಚು ಸೋಯಾಬಿನ್‌ ಬೆಳೆಯುವ ಜಿಲ್ಲೆಯಾಗಿದೆ. ಪ್ರತಿ ಹೆಕ್ಟೇರ್‌ಗೆ 75 ಕೆ.ಜಿಯಂತೆ ಜಿಲ್ಲೆಯಲ್ಲಿ 1.80 ಲಕ್ಷ ಹೆಕ್ಟೇರ್‌ ಭೂಮಿಗೆ 1.15 ಲಕ್ಷ ಕ್ವಿಂಟಲ್‌ ಸೋಯಾ ಬೀಜದ ಅವಶ್ಯಕತೆ ಇದೆ. ಪ್ರತಿ ವರ್ಷ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬೆಳೆಯುವ ಮಧ್ಯಪ್ರದೇಶದಿಂದ ರಾಜ್ಯಕ್ಕೆ ಸುಧಾರಿತ ಬೀಜ ತರಿಸಿಕೊಳ್ಳಲಾಗುತ್ತದೆ. ಆದರೆ, ಅಲ್ಲಿಯೂ ಉತ್ಪಾದನೆ ಕುಸಿತವಾಗಿರುವುದು ನಿರೀಕ್ಷಿತ ಪ್ರಮಾಣದಲ್ಲಿ ದಾಸ್ತಾನು ಸಾಧ್ಯವಾಗಿಲ್ಲ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ವರ್ಷ ಕರ್ನಾಟಕಕ್ಕೆ 1.50 ಲಕ್ಷ ಕ್ವಿಂಟಲ್‌ ಸೋಯಾ ಬೀಜ ಖರೀದಿಸಿದ್ದು, ಅದರಲ್ಲಿ 91 ಸಾವಿರ ಕ್ವಿಂಟಲ್‌ ಬೀಜ ಬೀದರ ಜಿಲ್ಲೆಗೆ ಪೂರೈಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಸೋಯಾ ಬಿತ್ತನೆ ಪ್ರದೇಶ ಹೆಚ್ಚಿರುವುದರಿಂದ ಬೇಡಿಕೆಯಷ್ಟು ಬೀಜ ಪೂರೈಕೆ ಆಗಿಲ್ಲ. ಈವರೆಗೆ 91 ಸಾವಿರ ಕ್ವಿಂಟಲ್‌ ಬೀಜ ರೈತರಿಗೆ ವಿತರಿಸಲಾಗಿದೆ.

ಬೇಡಿಕೆ ಹಿನ್ನೆಲೆ ಕೊಳಾರ ಕೈಗಾರಿಕಾ ವಲಯದ ಖಾಸಗಿ ಕಂಪನಿಯಿಂದ 14850 ಕ್ವಿಂಟಲ್‌ ದೃಢೀಕೃತ ಬೀಜ ಖರೀದಿಸಿದ್ದು, ಶನಿವಾರದವರೆಗೆ ವಿವಿಧ ತಾಲೂಕುಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಈಗ ಒಟ್ಟು 93 ಸಾವಿರ ಕ್ವಿಂಟಲ್‌ ಸೋಯಾ ಬೀಜ ನೀಡಿದಂತಾಗಿದೆ. ಜಿಲ್ಲೆಯಲ್ಲಿ ಶನಿವಾರದ ಬಳಿಕ ಸೋಯಾಬಿನ್‌ ಬೀಜದ ದಾಸ್ತಾನು ಸಂಪೂರ್ಣ ಖಾಲಿ ಆಗಲಿದೆ.

ಸರ್ಕಾರಕ್ಕೆ ಸಲ್ಲಿಸಿದ್ದ 1 ಲಕ್ಷ ಕ್ವಿಂಟಲ್‌ ಬೇಡಿಕೆಗಿಂತ ಕಡಿಮೆ ಹಂಚಿಕೆ ಆಗಿದೆ. ಇನ್ನೂ ಅಂದಾಜು 10 ಸಾವಿರಕ್ಕೂ ಹೆಚ್ಚು ಕ್ವಿಂಟಲ್‌ ಬೀಜದ ಕೊರತೆ ಎದುರಾಗಿದೆ. ಸುಧಾರಿತ ಬೀಜ ಸದ್ಯ ಯಾವುದೇ ಕಂಪನಿಗಳಲ್ಲಿ ಲಭ್ಯವಿಲ್ಲದ ಕಾರಣ, ಹೆಚ್ಚುವರಿ ಬೇಡಿಕೆ ಬೀಜ ಬರುವ ಗ್ಯಾರಂಟಿ ಇಲ್ಲ. ಹೀಗಾಗಿ ಪರ್ಯಾಯ ತೊಗರಿ, ಉದ್ದು, ಹೆಸರು ಬೆಳೆ ಬೆಳೆಯುವತ್ತ ಮುಂದಾಗಬೇಕು ಎಂದು ಕೃಷಿ ಅ ಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.