ತ್ರಿವೇಣಿಗೆ ಬಾಳು ನೀಡಿದ ಬಾಲಾಜಿ
Team Udayavani, Aug 9, 2018, 11:16 AM IST
ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸುದೈವಿ(ಅನಾಥ) ಹೆಣ್ಣುಮಗಳ ಕಲ್ಯಾಣ ಮಹೋತ್ಸವವನ್ನು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ನಡೆಸಿಕೊಟ್ಟರು. ಸುದೈವಿ ಹೆಣ್ಣು ಮಗಳಾದ ತ್ರಿವೇಣಿ ಐದು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಳು.
ನಂತರ ತಂದೆಗೆ ಹೆಣ್ಣುಮಕ್ಕಳು ಬೇಡವಾದ ಕಾರಣ ಅವಳನ್ನು ಶ್ರೀಮಠದಲ್ಲಿ ತಂದುಬಿಟ್ಟಾಗ ಪೂಜ್ಯರು ಆ ಮಗುವನ್ನು ಅತ್ಯಂತ ಸಂತೋಷದಿಂದ ತೆಗೆದುಕೊಂಡು ಶ್ರೀಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ ಆವರಣದಲ್ಲಿ ನಡೆಯುತ್ತಿರುವ ಸುದೈವಿ(ಅನಾಥ) ಮಕ್ಕಳ ಕೇಂದ್ರದಲ್ಲಿ ಪಾಲನೆ-ಪೋಷಣೆ ಜತೆಗೆ ವಿದ್ಯಾಭ್ಯಾಸ ಮಾಡಿಸಿದರು. ಈಗ ತ್ರಿವೇಣಿಗೆ 20 ವರ್ಷವಾಗಿದೆ. ಪೂಜ್ಯರೆ ವರ ನೋಡಿ ಒಳ್ಳೆಯ ಮನೆತನದ ವರನೊಂದಿಗೆ ಮದುವೆ ಮಾಡಿಸಿದ್ದಾರೆ.
ಪೂಜ್ಯರ ಸನ್ನಿಧಾನದಲ್ಲಿ ಮಹಾರಾಷ್ಟ್ರದ ನಾಂದೇಡ ಜಿಲ್ಲೆ ಉಮರಿ ತಾಲೂಕಿನ ಪ್ರತಿಷ್ಠಿತ ಮನೆತನದ ರಾಮಕೀಶನ ಹಾಗೂ ವಿಮಲಾಬಾಯಿ ದಮಕೊಂಡವಾರ ಅವರ ಪುತ್ರ ಬಾಲಾಜಿ ಅವರೊಂದಿಗೆ ತ್ರಿವೇಣಿ ಅವರ ಕಲ್ಯಾಣ ಮಹೋತ್ಸವ ಬಸವತತ್ವದ ಪ್ರಕಾರ ಶ್ರೀಮಠದಲ್ಲಿ ಅದ್ಧೂರಿಯಾಗಿ ನಡೆಯಿತು. ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಬಸವಲಿಂಗ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಕಲ್ಯಾಣ ಮಹೋತ್ಸವಕ್ಕೆ ದಮಕೊಂಡವಾರ ಪರಿವಾರದವರು ಹಾಗೂ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಮೋಹನ ರೆಡ್ಡಿ, ಜಯಕ್ಕ ಎಂ. ಗಾಂವಕರ, ಅನೀಲಕುಮಾರ ಹಾಲಕುಡೆ, ಮಠದ ಭಕ್ತರಾದ ಚಂದ್ರಕಾಂತ ಬಿರಾದಾರ, ವೈಜಿನಾಥ ಸಿಸಿ, ಶರಣಪ್ಪ ಬಿರಾದಾರ, ಸೂರ್ಯಕಾಂತ ಪಾಟೀಲ, ಅಕ್ಕನಬಳಗದ ಮುಕ್ತಾಬಾಯಿ ಖಂಡ್ರೆ, ಮಹಾನಂದಾ ಮಾಶೆಟ್ಟೆ, ಪ್ರೇಮಲಾ ತೊಂಡಾರೆ ಭಾಗವಹಿಸಿ ನವದಂಪತಿಗೆ ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ