ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಕಬ್ಬಿನ ಲಾರಿ ಡಿಕ್ಕಿ… 13 ಕಾರ್ಮಿಕರಿಗೆ ಗಾಯ
Team Udayavani, Feb 28, 2024, 9:11 AM IST
ಬೀದರ್: ಭಾಲ್ಕಿ ಸಮೀಪದ ಸೇವಾನಗರ ತಾಂಡಾ ಸಮೀಪ ಬುಧವಾರ ನಸುಕಿನ ಜಾವಾ ನಡೆದ ರಸ್ತೆ ಅಪಘಾತದಲ್ಲಿ 13 ಜನ ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಗೂಡ್ಸ್ ವಾಹನಕ್ಕೆ ಕಬ್ಬಿನ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿ ಕಾರ್ಮಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳೆಲ್ಲರು ಮಹಾರಾಷ್ಟ್ರದ ಉದಗೀರದವರು ಎನ್ನಲಾಗಿದೆ.
ಉದಗೀರದಿಂದ ಹೈದ್ರಾಬಾದ್ ಗೆ ಕೂಲಿ ಕೆಲಸಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಆಸ್ಪತ್ರೆಗೆ ಎಸ್ ಪಿ ಚನ್ನಬಸವ ಲಂಗೋಟೆ ಸೇರಿದಂತೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಭೇಟಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: Pro Kabaddi: ಪ್ರೊ ಕಬಡ್ಡಿ ಸೆಮಿಫೈನಲ್ ಫೈಟ್: ಪುನೇರಿ-ಪಾಟ್ನಾ , ಜೈಪುರ್-ಹರ್ಯಾಣ