ತಡೆಹಿಡಿದ ಮನೆಗಳ ನಿರ್ಮಾಣಕ್ಕೆ ಅಸ್ತು

14ರೊಳಗೆ ತಳಪಾಯ ಹಂತದ ಜಿಪಿಎಸ್‌ ಕಡ್ದಾಯ ವಸತಿ ಯೋಜನೆಯಲ್ಲಿ ಅಕ್ರಮವಾಗದಂತೆ ಸದಸ್ಯರ ಪಟ್ಟು

Team Udayavani, Feb 27, 2020, 12:57 PM IST

27-Feburary-06

ಹುಮನಾಬಾದ: ಬಸವ ವಸತಿ, ಪ್ರಧಾನಮಂತ್ರಿ ಆವಾಸ್‌, ಡಾ| ಬಿ.ಆರ್‌. ಅಂಬೇಡ್ಕರ್‌ ಸೇರಿದಂತೆ ವಿವಿಧ ಯೋಜನೆಗಳಡಿ ತಾಲೂಕಿನ 34 ಗ್ರಾ.ಪಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯಬೇಕಾದ 754 ಮನೆಗಳ ನಿರ್ಮಾಣಕ್ಕೆ ತಡೆ ನೀಡಿದ ಸರ್ಕಾರ ಇದೀಗ ಮನೆಗಳ ನಿರ್ಮಾಣಕ್ಕೆ ಆದೇಶ ನೀಡಿದೆ. ಈ ಕುರಿತು ಕಳೆದ ಜನವರಿ 7ರಂದು “ಉದಯವಾಣಿ’ಯಲ್ಲಿ “ವಸತಿ ಯೋಜನೆ 754 ಮನೆ ನಿರ್ಮಾಣಕ್ಕೆ ಗ್ರಹಣ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಈ ಕುರಿತು ತಾ.ಪಂ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆದಿತ್ತು. ಅಲ್ಲದೇ, ಮನೆಗಳ ನಿರ್ಮಾಣಕ್ಕೆ ಮರು ಆದೇಶ ನೀಡಬೇಕೆಂದು ಸದಸ್ಯರು ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಡ ಹೇರಿದ್ದರು. ಇದೀಗ ರಾಜೀವ್‌ ಗಾಂಧಿ  ಗ್ರಾಮೀಣ ವಸತಿ ಯೋಜನೆ ವ್ಯವಸ್ಥಾಪಕರು ಮನೆ ನಿರ್ಮಾಣಕ್ಕೆ ಆನ್‌ ಲೈನ್‌ ವ್ಯವಸ್ಥೆ ಶುರು ಮಾಡಿದ್ದು, ಮಾ.14ರ ವರೆಗೆ ವಸತಿ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಕನಿಷ್ಟ ತಳಪಾಯ ಹಂತದ ಜಿಪಿಎಸ್‌ ಮಾಡಿಕೊಳ್ಳಬೇಕೆಂದು ಆದೇಶಿಸಿದ್ದಾರೆ.

ಯಾವ ಗ್ರಾಪಂಗೆ ಎಷ್ಟು?: ಬೇಮಳಖೇಡಾ ಗ್ರಾಪಂ-10 ಮನೆಗಳು, ಉಡಮನಳ್ಳಿ ಗ್ರಾಪಂ-15, ಚಾಂಗಲೇರಾ ಗ್ರಾಪಂ-13, ಮೀನಕೇರಾ ಗ್ರಾಪಂ-66, ಧುಮ್ಮನಸೂರ ಗ್ರಾಪಂ-28, ಮನ್ನಾಎಖೇಳ್ಳಿ ಗ್ರಾಪಂ-15, ನಿರ್ಣಾ ಗ್ರಾಪಂ-4, ಮುತ್ತಂಗಿ ಗ್ರಾಪಂ-5, ಮಂಗಲಗಿ ಗ್ರಾಪಂ-39, ತಾಳಮಡಗಿ ಗ್ರಾಪಂ-49, ಸಿತಾಳಗೇರಾ ಗ್ರಾಪಂ-12, ಡಾಕುಳಗಿ ಗ್ರಾಪಂ-8, ಬೇನಚಿಂಚೋಳಿ ಗ್ರಾಪಂ-18, ಮದರಗಾಂವ ಗ್ರಾಪಂ-33, ನಂದಗಾಂವ ಗ್ರಾಪಂ-29, ಹುಡಗಿ ಗ್ರಾಪಂ-25, ದುಬಲಗುಂಡಿ ಗ್ರಾಪಂ-79, ಸುಲ್ತಾನಬಾದ ಗ್ರಾಪಂ-5, ಘೋಡವಾಡಿ ಗ್ರಾಪಂ-25, ಘಾಟಬೋರಳ ಗ್ರಾಪಂ-10, ಚಂದನಹಳ್ಳಿ ಗ್ರಾಪಂ-1, ಸೆಡೋಳ ಗ್ರಾಪಂ-18, ಕನಕಟ್ಟಾ ಗ್ರಾಪಂ-21, ಮಾಣಿಕನಗರ ಗ್ರಾಪಂ-12, ಸಿಂದನಕೇರಾ ಗ್ರಾಪಂ-40, ಇಟಗಾ-12, ಕೋಡಂಬಲ್‌ ಗ್ರಾಪಂ-32, ಕಲ್ಲೂರ ಗ್ರಾಪಂ-15, ಹಳ್ಳಿಖೇಡ ಕೆ ಗ್ರಾಪಂ-33, ಮುಸ್ತರಿ ಗ್ರಾಪಂ-23, ಉಡಬಾಳ ಗ್ರಾಪಂ-11, ಜಲಸಂಗಿ ಗ್ರಾಪಂ-10 ಮನೆಗಳ ನಿರ್ಮಾಣಕ್ಕೆ ಈ ಹಿಂದೆ ತಡೆಯುಂಟಾಗಿತ್ತು. ಇದೀಗ ಈ ಎಲ್ಲ ಗ್ರಾಪಂಗಳಲ್ಲಿನ ಮನೆಗಳ ನಿರ್ಮಾಣಕ್ಕೆ ನಿಗದಿತ ಅವ ಧಿಯ ಕಾಲಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಪಾರದರ್ಶಕತೆ ಕಾಪಾಡಿ: ವಸತಿ ಯೋಜನೆಯಲ್ಲಿ ಅ ಧಿಕಾರಿಗಳು ಅಕ್ರಮ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಜಿಪಿಎಸ್‌ ಮಾಡಬೇಕಾದರು ಕೂಡ ಹಣ ನೀಡಬೇಕೆಂದು ಜನರು ದೂರುತ್ತಿದ್ದಾರೆ ಎಂದು ಈ ಹಿಂದಿನ ತಾಪಂ ಸಭೆಯಲ್ಲಿ ಸದಸ್ಯ ಪರಮೇಶ್ವರ ಕಾಳಮದರಗಿ ದೂರಿದ್ದರು. ಇದೀಗ ಎಲ್ಲ ಗ್ರಾಪಂಗಳಲ್ಲಿನ ಮನೆಗಳ ನಿರ್ಮಾಣಕ್ಕೆ ಸರ್ಕಾರ ಮರು ಆದೇಶ ನೀಡಿ ಅವಕಾಶ ನೀಡಿದ್ದು, ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು. ಬಡವರಿಂದ ಯಾವುದೇ ಹಣಕ್ಕೆ ಬೇಡಿಕೆ ಇಡಬಾರದು. ಈ ನಿಟ್ಟಿನಲ್ಲಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಗಾ ವಹಿಸಬೇಕು ಎಂದು ತಾಪಂ ಸದಸ್ಯ ನಾಗೇಶ ಕಲ್ಲೂರ, ಪರಮೇಶ್ವರ ಕಾಳಮದರಿ ಹಾಗೂ ಇತರೆ ಸದಸ್ಯರು ಒತ್ತಾಯಿಸಿದ್ದಾರೆ.

ಮನೆ ನಿರ್ಮಾಣಕ್ಕೆ ಜನರ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿಂದೆ ಬಂದಿರುವ ಮನೆಗಳ ನಿರ್ಮಾಣಕ್ಕೆ ತಡೆಯಾಗಿದ್ದು, ಅನೇಕರಿಗೆ ಸಮಸ್ಯೆಯುಂಟಾಗಿತ್ತು. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಂತರ ಹೊಸ ಮನೆಗಳ ಹಂಚಿಕೆ ಮಾಡಿಲ್ಲ. ಅರ್ಹ ಫಲಾನುಭವಿಗಳಿಂದ ಮನೆ ಬೇಡಿಕೆ ಬರುತ್ತಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ವಿಧಾನಸಭಾ ಕಲಾಪದಲ್ಲಿ ಸರ್ಕಾರಕ್ಕೆ ಪ್ರಶ್ನಿಸಲಾಗುವುದು.
ರಾಜಶೇಖರ ಪಾಟೀಲ, ಶಾಸಕರು

ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಫಲಾನುಭವಿಗಳು ಬಳಸಿಕೊಳ್ಳಬೇಕು. ಈ ವರೆಗೆ ಯಾರು ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿಲ್ಲ. ಕೂಡಲೇ ಕೆಲಸ ಆರಂಭಿಸಬೇಕು. ಎಲ್ಲ ಪಿಡಿಒಗಳು ಸ್ಥಳೀಯರಿಗೆ ಮಾರ್ಗದರ್ಶನ ನೀಡಿ ಮನೆ ನಿರ್ಮಾಣದ ಕಾರ್ಯಕ್ಕೆ ಪ್ರೋತ್ಸಾಹ ನೀಡುವಂತಾಗಬೇಕು.
ಶ್ರೀಮಂತ ಪಾಟೀಲ,
ತಾಪಂ ಸದಸ್ಯ

ತಡೆಹಿಡಿದ ವಸತಿಗಳ ಕುರಿತು ರಾಜ್ಯ ಮಟ್ಟದ ವಿಡಿಯೋ ಸಂವಾದದಲ್ಲಿ ಚರ್ಚೆಯಾಗಿದ್ದು, ನಿಗದಿತ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳದೇ ಇರುವುದರಿಂದ ಬ್ಲಾಕ್‌ ಮಾಡಲಾಗಿತ್ತು. ಇದೀಗ ಆನ್‌ಲೈನ್‌ ಶುರುವಾಗಿದ್ದು, ಜಿಪಿಎಸ್‌ ಮಾಡುವ ಕಾರ್ಯ ನಡೆದಿದೆ. ಮಾ.14ರೊಳಗಾಗಿ ತಳಪಾಯ ಹಂತದ ಜಿಪಿಎಸ್‌ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ವೈಜಿನಾಥ ಫುಲೆ,
ತಾಪಂ, ಇಒ

„ದುರ್ಯೋಧನ ಹೂಗಾರ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.