ಪೊಲೀಸ್ ಠಾಣೆ ಆವರಣದಲ್ಲಿ ಮಾದರಿ ಉದ್ಯಾನವನ
Team Udayavani, Sep 9, 2020, 4:24 PM IST
ಭಾಲ್ಕಿ: ಪಟ್ಟಣದ ಪೊಲೀಸ್ ಉಪಾಧೀಕ್ಷಕರ ಉಪ ವಿಭಾಗ (ಡಿವೈಎಸ್ಪಿ) ಕಚೇರಿಗೆ ಸೋಮವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಆವರಣದಲ್ಲಿ ತಲೆಯೆತ್ತುತ್ತಿರುವ ಔಷಧೀಯ ಸಸ್ಯಗಳ ಉದ್ಯಾನವನ, ಪೊಲೀಸ್ ಬೃಂದಾವನ ಹಾಗೂ ಕೃಷಿ ಹೊಂಡ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಡಿವೈಎಸ್ಪಿ ಡಾ|ದೇವರಾಜ್ ಕ್ರಿಯಾಶೀಲರಾಗಿದ್ದು, ಅಧಿ ಕಾರ ವಹಿಸಿ ಕೊಂಡು ಕೆಲವೇ ತಿಂಗಳಾದರೂ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ರೂಪಿಸಿ ಇತರೆ ಪೊಲೀಸ್ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಪೊಲೀಸ್ ಆವರಣದಲ್ಲಿ ಡಿವೈಎಸ್ಪಿ ನೇತೃತ್ವದ ತಂಡ ಔಷಧೀಯ ಸಸ್ಯಗಳ ಹಾಗೂ ಉದ್ಯಾನವನ ಅಭಿವೃದ್ಧಿಪಡಿಸುತ್ತಿರುವುದು ಮಾದರಿ. ಮಾವು, ತೆಂಗು ಸೇರಿದಂತೆ ವಿವಿಧ ತಳಿಯ ಸುಮಾರು 3 ಸಾವಿರ ಸಸಿ ನೆಡುವ ಜತೆಗೆ 78 ವಿವಿಧ ಬಗೆಯ 700ಕ್ಕೂ ಅಧಿಕ ಔಷ ಧೀಯ ಗುಣ ಹೊಂದಿರುವ ಸಸಿ ಬೆಳೆಸುತ್ತಿರುವುದು ಪ್ರಯೋಜನಕಾರಿ. ಸಸಿಗಳ ನಿರ್ವಹಣೆಗೆ ನೀರಿನ ಕೊರತೆಯಾಗದಂತೆ ಕೃಷಿ ಹೊಂಡ, ಕೊಳವೆಬಾವಿ ಬಳಿ ಇಂಗು ಗುಂಡಿ, ಕಾಂಪೌಂಡ್ ನಿರ್ಮಿಸಿರುವುದು ಸಂತಸ ತಂದಿದೆ ಎಂದರು.
ಡಿವೈಎಸ್ಪಿ ಡಾ| ದೇವರಾಜ್.ಬಿ ಮಾತನಾಡಿ, ಪೊಲೀಸ್ ಆವರಣದ ಖಾಲಿ ಪ್ರದೇಶದಲ್ಲಿ ಬೆಳೆದಿದ್ದ ಪಾರ್ಥೇನಿಯಂ, ಕಸ, ಕಡ್ಡಿ ಬೇರ್ಪಡಿಸಿ ದಾನಿಗಳ ಸಹಾಯದಿಂದ ಉದ್ಯಾನವನ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಲಾಗಿದೆ ಎಂದರು. ಈ ವೇಳೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಶಶಿಧರ ಕೋಸಂಬೆ, ಕೆ.ಡಿ. ಗಣೇಶ, ರೋಹಿತ ವೈರಾಗ್ಯ, ಕಪಿಲ್ ಕಲ್ಯಾಣೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?