ಅಂಧ-ಅನಾಥರ ಹೊಟ್ಟೆ ತಣಿಸುವ “ರೀಶೈನ್‌’

ಯುವ ಸಮಾನ ಮನಸ್ಕರು ಸೇರಿ ಹುಟ್ಟು ಹಾಕಿರುವ ಸಂಸ್ಥೆಬಿಡುವಿನ ವೇಳೆ ಬಡವರ ಹಸಿವು ನೀಗಿಸುವ ಕಾರ್ಯ

Team Udayavani, Dec 13, 2019, 10:41 AM IST

13-December-1

ಶಶಿಕಾಂತ ಬಂಬುಳಗೆ
ಬೀದರ:
ಸಭೆ-ಸಮಾರಂಭಗಳಲ್ಲಿ ಯಥೇತ್ಛವಾಗಿ ವ್ಯರ್ಥವಾಗುವ ಆಹಾರ ಪದಾರ್ಥಕ್ಕೆ ಪಾತ್ರೆ ಒಡ್ಡುವ ಬೀದರನ “ರೀಶೈನ್‌’ ಸಂಸ್ಥೆ ಅನಾಥ ಮತ್ತು ಅಲೆಮಾರಿ ಜನರಿಗೆ ಹಂಚುವ ಮೂಲಕ ಹಸಿದ ಹೊಟ್ಟೆಗಳನ್ನು ತಣಿಸುತ್ತಿದೆ. ಯುವ ಸಮಾನ ಮನಸ್ಕರು ಸೇರಿಕೊಂಡು ಸಂಸ್ಥೆ ಹುಟ್ಟು ಹಾಕಿದ್ದು, ಹಸಿದವರಿಗೆ ಅನ್ನ ತಲುಪಿಸಿ ಸಾರ್ಥಕತೆ ಮೆರೆಯುತ್ತಿದ್ದಾರೆ.

ಶ್ರೀಮಂತಿಕೆ ಪ್ರದರ್ಶನದ ಸೋಗಿನಲ್ಲಿ ಅಗತ್ಯವಿಲ್ಲದಿದ್ದರೂ ಮದುವೆ ಸೇರಿದಂತೆ ಸಭೆ-ಸಮಾರಂಭಗಳಲ್ಲಿ ಅಡುಗೆ ಮಾಡಿ ಮಾಡಿಸಿ ಉಳಿದ ಆಹಾರ ಬೀದಿಗೆ ಚೆಲ್ಲುತ್ತಾರೆ. ಅನ್ನದ ಬೆಲೆ ಗೊತ್ತಿಲ್ಲದೇ ಅರ್ಧಂಬರ್ಧ ತಿಂದು ಎಸೆಯುತ್ತಾರೆ. ಹೀಗೆ ಹೆಚ್ಚಾಗಿ ಉಳಿಯುವ ಆಹಾರವನ್ನು ರೀಶೈನ್‌ ಸಂಸ್ಥೆಯವರು ಸಂಗ್ರಹಿಸಿ ಹಸಿವಿನಿಂದ ಬಳಲಿದವರಿಗೆ ಅನ್ನ ಕೊಟ್ಟು ಸಂಭ್ರಮ ಪಡುತ್ತಾರೆ.

ರೋಹನ್‌ ರವಿಕುಮಾರ ರೀಶೈನ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದು, 8-10 ಜನ ಪದವೀಧರ ಯುವಕರಿದ್ದಾರೆ. ಅವರೆಲ್ಲರೂ ಉದ್ಯೋಗ-ವ್ಯಾಪಾರ ಮಾಡಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ರೋಹನ್‌, ಪುಟ್ಟರಾಜ ಯೇಶೆಪ್ಪ, ಕಾರ್ತಿಕ ಆಲೂರ್‌ ಮತ್ತು ಸ್ಪೀಫನ್‌ ಪೌಲ್‌ ಸೇರಿದಂತೆ ಸಂಸ್ಥೆ ಸದಸ್ಯರು ಬಿಡುವಿನ ಸಮಯದಲ್ಲಿ ಬಡವರ ಹೊಟ್ಟೆ ತುಂಬಿಸುವ ಮಹಾನ್‌ ಕಾರ್ಯದಲ್ಲಿ ತೊಡಗಿದ್ದಾರೆ. ತಿಂಗಳಲ್ಲಿ 15-20 ಬಾರಿ ಆಹಾರ ಸಂಗ್ರಹಿಸಿ ಹಂಚುತ್ತಾರೆ.

ಎಲ್ಲೆಲ್ಲಿ ಆಹಾರ ಸಂಗ್ರಹ?:ಮದುವೆ, ಜನ್ಮದಿನಾಚರಣೆ, ತೊಟ್ಟಿಲು, ವಿವಾಹ ವಾರ್ಷಿಕೋತ್ಸವ ಹೀಗೆ ಕಲ್ಯಾಣ ಮಂಟಪಗಳಲ್ಲಿ ನಡೆಯುವ ವಿವಿಧ ಸಮಾರಂಭಗಳಲ್ಲಿ ಆಹಾರ ಉಳಿದರೆ ಅಂಥವರು ರೀಶೈನ್‌ ಸಂಸ್ಥೆಗೆ ಸಂಪರ್ಕಿಸುತ್ತಾರೆ. ಮನೆಗಳಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಕೆಲ ಹೋಟೆಲ್‌ ಮಾಲೀಕರು ಸಹ ಮಾಹಿತಿ ನೀಡುತ್ತಾರೆ. ಸಂಸ್ಥೆ ಸದಸ್ಯರು ಅಲ್ಲಿಂದ ಆಟೋ ಮೂಲಕ ದೊಡ್ಡ ಪಾತ್ರೆಗಳಲ್ಲಿ ಆಹಾರ ತೆಗೆದುಕೊಂಡು ಹೋಗುತ್ತಾರೆ. ನಂತರ ಜನರಿಗೆ ಅನುಕೂಲವಾಗುವಂತೆ ಪ್ಯಾಕೆಟ್‌ಗಳನ್ನಾಗಿ ಮಾಡಿ, ಬಸ್‌-ರೈಲು ನಿಲ್ದಾಣದಲ್ಲಿನ ನಿರ್ಗತಿಕರು ಮತ್ತು ಅಲೆಮಾರಿ ಜನಾಂಗದವರಿಗೆ ಹಂಚುತ್ತಾರೆ.

ಆಸಕ್ತ ದಾನಿಗಳು ಮುಂದಾಗಲಿ:ರೀಶೈನ್‌ ಸಂಸ್ಥೆಗೆ ಸಂಗ್ರಹಿಸಿದ ಆಹಾರ ಹಸಿದವರಿಗೆ ಪೂರೈಸಲು ವಾಹನ ಕೊರತೆ ಇದೆ. ಕೈಯಿಂದ 300-500 ರೂ. ಖರ್ಚು ಮಾಡಿ ಆಟೋ, ಟ್ರಾಲಿ ಮೂಲಕ ಸಾಗಿಸುತ್ತಿದ್ದಾರೆ. ಸಂಸ್ಥೆ ಈ ಕುರಿತ ಮನವಿಗೆ ಯಾರೊಬ್ಬ ಶಾಸಕರು ಮತ್ತು ಸಂಸದರಿಂದ ಸ್ಪಂದನೆ ಸಿಕ್ಕಿಲ್ಲ. ಸಂಸ್ಥೆಯ ವಾಹನ ಇದ್ದಲ್ಲಿ ಇನ್ನೂ ಹೆಚ್ಚು ನಿರ್ಗತಿಕರಿಗೆ ಅನ್ನ ಉಣಿಸುವ ಸತ್ಕಾರ್ಯ ಆಗಬಹುದೆಂಬುದು ಸಂಸ್ಥೆಯ ಉದ್ದೇಶ. ಉಳಿದ ಅನ್ನ ಕೊಡಲು ಮತ್ತು ಸಹಾಯ ಹಸ್ತ ಮಾಡಲು ಇಚ್ಚಿಸುವ ಆಸಕ್ತ ದಾನಿಗಳು ರೋಹನ್‌ ರವಿಕುಮಾರ ಮೊ. 9066616858 ಅವರನ್ನು
ಸಂಪರ್ಕಿಸಬಹುದು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.