Interstate ಕಳ್ಳರ ಬಂಧನ; 61ಲಕ್ಷ ರೂ. ಮೌಲ್ಯದ ಸಿಗರೇಟ್ ವಶಕ್ಕೆ
Team Udayavani, Aug 9, 2023, 8:53 PM IST
ವಿಜಯಪುರ : ನಗರದಲ್ಲಿ ಈಚೆಗೆ ಸಂಭವಿಸುತ್ತಿದ್ದ ಕಳ್ಳತನ ಪ್ರಕರಣದ ತನಿಖೆಯಲ್ಲಿದ್ದ ಪೊಲೀಸರಿಗೆ ಅಂತರಾಜ್ಯ ಸಿಗರೇಟ್-ವಾಹನ ಕಳ್ಳರು ಸೆರೆ ಸಿಕ್ಕಿದ್ದಾರೆ. 8 ಆರೋಪಿಗಳಲ್ಲಿ ಸೆರೆ ಸಿಕ್ಕಿರುವ ಐವರಿಂದ 61.49 ಲಕ್ಷ ರೂ. ಮೌಲ್ಯದ ಸಿಗರೇಟ್-ಕಾರು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಮಹಾರಾಷ್ಟ್ರದ ನವಿಮುಂಬೈನ ಶಿವಾಜಿನಗರದ ಡ್ರೈವರ್ ಮಹ್ಮದ್ ರೆಹಾನೆ ಶೇಖ್(45), ಪುಣೆಯ ಹಳೆಸಾಂಗ್ಲಿ ಕಿರಾಣಿ ವ್ಯಾಪಾರಿ ರಾಮಪಾಲ್ ಹರಿರಾಮ ಚೌಧರಿ( 31), ಪುಣೆಯ ರಾವೇತ್ ನಿವಾಸಿ ಹೊಟೇಲ್ ಕಾರ್ಮಿಕ ತೇಜರಾಮ ಚಂಪಾಲಾಲ್ ಉನೇಚ್( 39), ಪುಣೆಯ ಸಾಸವಾಡದ ಕಿರಾಣಿ ವ್ಯಾಪಾರಿ ರಾಜಸ್ಥಾನ ಮೂಲದ ಚೈನಾರಮ್ ಮಿಶ್ರೀಲಾಲ್ ಜಾಟ(36), ರಾಜಸ್ಥಾನ ಮೂಲದ ಇನ್ನೋರ್ವ ಆರೋಪಿ ಪುಣೆಯ ಸಾಸವಾಡದ ಕಿರಾಣಿ ವ್ಯಾಪಾರಿ ದೀಪಾರಾಮ ಜಾಟ್ (32 )ಬಂಧಿತ ಆರೋಪಿಗಳು. ಪ್ರಕರಣದ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಬಂಧಿತರಿಂದ 37,49,514 ಲಕ್ಷ ರೂ. ಮೌಲ್ಯದ ಐಟಿಸಿ ಕಂಪನಿಯ ಸಿಗರೇಟ್ ಹಾಗೂ ಒಂದು ಗೂಡ್ಸ್ ವಾಹನ, ಫೋರ್ಡ್ ಕಾರು, ಮಹಿಂದ್ರಾ ಕಾರು ಸೇರಿದಂತೆ 61,49,514 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಎಚ್.ಡಿ.ಆನಂದಕುಮಾರ, ಎಎಸ್ಪಿ ಎಸ್.ಕೆ.ಮಾರಿಹಾಳ, ಡಿಎಸ್ಪಿ ಬಸವರಾಜ ಯಲಿಗಾರ, ಸಿದ್ದೇಶ್ವರ ಕೃಷ್ಣಾಪೂರ, ಪೊಲೀಸ್ ಉಪ-ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಗೋಲಗುಂಬಜ ಸಿಪಿಯ ವಿಜಯಮಾಹಾಂತೇಶ ಮಠಪತಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಐಗಳಾದ ಐ.ಎಂ.ದುಂಡಸಿ, ಎಸ್.ಸಿ.ಗುರುಬೇಟ್ಟಿ ಜ್ಯೋತಿ ವಾಲಿಕಾರ, ಸಚಿನ ಆಲಮೇಲಕರ ತನಿಖಾ ತಂಡದಲ್ಲಿದ್ದರು.
ಸಿಬ್ಬಂದಿಗಳಾದ ಎಸ್.ಎಸ್.ಮಾಳೆಗಾಂವ್ ಹಬಿ.ಎಂ.ಪವಾರ್, ವೈ.ಪಿ.ಕಬಾಡೆ, ಐ.ಆರ್.ಮಂಕಣಿ, ಎಸ್.ಜಿ.ಗಾಯನ್ನವರ, ಸಂಜು ಬನಪಟ್ಟಿ, ಪುಂಡಲಿಕ ಬಿರಾದಾರ, ಮಹೇಶ ಸಾಲಿಕೇರಿ, ಜೆ.ಎಸ್.ವನಂಜಕರ, ಈರಪ್ಪ ಸೋಡ್ಡಿ, ಆನಂದ ಕಂಬಾರ, ಮೌನೇಶ ಬಡಿಗೇರ, ನಿಂಗಣ್ಣ ವಟಾರ, ಸುನೀಲ ಗೌಳಿ, ಗುಂಡು ಗಿರಣೀವಡ್ಡರ, ಮತೀನ ಬಾಗವಾನ ಇವರಿದ್ದ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್