ಜಿಗಜಿಣಗಿ ವಿರುದ್ಧಬಂಜಾರಾ ಆಕ್ರೋಶ
Team Udayavani, Nov 25, 2018, 11:48 AM IST
ವಿಜಯಪುರ: ಜಿಲ್ಲೆಯಿಂದ ದುಡಿಯಲು ಬೇರೆ ಕಡೆಗೆ ಹೋಗಿರುವ ಬಡ ಪರಿಶಿಷ್ಟ ಜಾತಿ ಮತದಾರರನ್ನು ಆಯಾ ಗ್ರಾಮಗಳ ಮತಗಟ್ಟೆಯಿಂದ ಕೈ ಬಿಡುವಂತೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಪತ್ರ ಬರೆದಿರುವ ಕ್ರಮ ಖಂಡಿಸಿ ಜಿಲ್ಲಾ ಬಂಜಾರಾ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಅರ್ಜು ರಾಠೊಡ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಬರಗಾಲ ತಾಂಡವವಾಡುತ್ತಿದೆ. ಈ ಕಾರಣಕ್ಕಾಗಿ ಬಡ ಜನರು ಅದರಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ, ಬಂಜಾರಾ ಹಾಗೂ ಅಲ್ಪಸಂಖ್ಯಾತ ಸಮುದಾಯವರು ಹೊರ ರಾಜ್ಯಗಳಿಗೆ ಗುಳೆ ಹೋಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ. ನಂತರ ಮಳೆಗಾಲದ ಸಂದರ್ಭದಲ್ಲಿ ಅಥವಾ ಕೆಲಸವಿರದ ಸಂದರ್ಭದಲ್ಲಿ (ಬಿನ್ ಸೀಸನ್) ಮರಳಿ ತಮ್ಮ ಸ್ವಗ್ರಾಮಕ್ಕೆ ಬರುವುದು ವಾಡಿಕೆಯಾಗಿದೆ. ಈ ಬಗ್ಗೆ ಎಲ್ಲವೂ ಗೊತ್ತಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಚುನಾವಣಾ ಆಯೋಗಕ್ಕೆ ಪತ್ರ ನೀಡಿ ದುಡಿಯಲು ಹೋಗಿರುವ ಕಡು ಬಡವರ, ಪರಿಶಿಷ್ಟ ಜಾತಿಯವರ ಮತದಾತನದ ಹಕ್ಕನ್ನು ಕಸಿದುಕೊಳ್ಳುವಂತೆ ಪತ್ರ ಬರೆದು
ಸಂವಿಧಾನ ಮೂಲ ಆಶಯಕ್ಕೆ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದು ನಮ್ಮ ಜಿಲ್ಲೆಯ ನಮ್ಮ ಜನರನ್ನು ಕಳ್ಳರಂತೆ ನೋಡುವ ಹಾಗೂ ನಮ್ಮ ಬಡತನವನ್ನು ಅವಮಾನಿಸುವ ಪ್ರಕ್ರಿಯೆಯಾಗಿದೆ. ನಾವು ಈ ಜಿಲ್ಲೆಯ ಮೂಲ ನಿವಾಸಿಗಳಾಗಿದ್ದು, ನಮ್ಮ ಮತದಾನದ ಹಕ್ಕನ್ನು ಇಲ್ಲಿಯೇ ಹೊಂದಿರುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಮತದಾನದ ಹಕ್ಕನ್ನೂ ಮೊಟಕುಗೊಳಿಸಿದರೆ ಅಥವಾ ಪಟ್ಟಿಯಿಂದ ಕೈ ಬಿಟ್ಟರೆ, ಸಚಿವರ ವಿರುದ್ಧ ನಾವು ನಮ್ಮ ಜನಾಂಗದ ಪರವಾಗಿ ಹಾಗೂ ಸಮಸ್ತ ಬಡವರ ಪರವಾಗಿ ಹಾಗೂ ದುಡಿಯುವವರ ಪರವಾಗಿ ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕೇಂದ್ರ ಸಚಿವರಾಗಿ ನಮ್ಮ ಜಿಲ್ಲೆಯಿಂದ 50 ವರ್ಷ ರಾಜಕಾರಣದಲ್ಲಿ ಸುಖ ಅನುಭವಿಸಿರುವ ರಮೇಶ ಜಿಗಜಿಣಗಿ ಅವರು ಈ ಹಿಂದೆ ರಾಜ್ಯದ ಸಚಿವರಾಗಿ, ಸದ್ಯ ಕೇಂದ್ರದ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿ ಮಾಡದೇ ಇರುವುದರಿಂದ ನಾವು ಬೇರೆ ಕಡೆ ದುಡಿಯಲು ಹೋಗುವ ಅನಿವಾರ್ಯ ಪ್ರಸಂಗ ಬಂದಿದೆ. ಇದಕ್ಕೆ ಕಾರಣವಾಗಿರುವ ಇವರು ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಡುವಂತೆ ಪತ್ರದ ಮೂಲಕ ಒತ್ತಾಯಿಸಿರುವುದು ವಿಪರ್ಯಾಸ ಎಂದರು.
ಜಗನು ಮಹಾರಾಜ, ರಾಜಪಾಲ ಚವ್ಹಾಣ, ಬಿ.ಬಿ. ನಾಯಿಕ, ಇಂದುಮತಿ ಲಮಾಣಿ, ಡಿ.ಎಚ್. ಜಾಧವ, ರಾಮು ಚವ್ಹಾಣ, ಅಶೋಕ ರಾಠೊಡ, ರಘುವೀರ ನಾಯಿಕ, ಮಲ್ಲಿಕಾರ್ಜುನ ನಾಯಿಕ, ಸಂತೋಷ ರಾಠೊಡ, ಪಿಂಟು ರಾಠೊಡ, ಅರವಿಂದ ರಾಠೊಡ, ಅಶೋಕ ರಾಠೊಡ, ಶಾರದಾ ಚವ್ಹಾಣ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ