”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ
Team Udayavani, Oct 23, 2021, 12:15 PM IST
ವಿಜಯಪುರ: “ಮುತ್ಯಾ ಆರಾಮ ಅದಾನೂ… ಕೇಳಿದೆ ಅಂತಾ ಹೇಳ್ರಿ…” ಬಿ.ವೈ.ವಿಜಯೇಂದ್ರ ಅವರು ಸಿಂದಗಿ ಉಪ ಚುನಾವಣೆ ಪ್ರಚಾರಕ್ಕೆ ಬಂದಾಗ ಮಗುವೊಂದು ಅವರನ್ನು ತಬ್ಬಿಕೊಂಡು ಬಿ.ಎಸ್.ಯಡಿಯೂರಪ್ಪ ಅವರ ಯೋಗಕ್ಷೇಮ ವುಚಾರಿಸಿದ ಪರಿ ಇದು.
ಶನಿವಾರ ವಿಜಯೇಂದ್ರ ಅವರು ಕೃಷ್ಣಾ ಕಾಡಾ ನಿರ್ದೇಶಕ ರವಿ ಖಾನಾಪುರ ಅವರ ಮನೆಗೆ ಭೇಟಿ ನೀಡಿದ್ದರು.
ಈ ಹಂತದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೇಂದ್ರ ಅವರ ಕೈ ಕುಲುಕಿ, ಹಾರ ತುರಾಯಿ ನೀಡಿ ಸನ್ಮಾನಿಸಿ, ತಮ್ಮ ಮೊಬೈಲ್ ನಲ್ಲಿ ಸೆಲ್ಪಿ ತೆಗೆದು ಕೊಳ್ಳುವಲ್ಲಿ ನಿರತರಾಗಿದ್ದರು.
ಆಗ ಗದ್ದಲವನ್ನೆಲ್ಲ ಸೀಳಿಕೊಂಡು ವಿಜಯೇಂದ್ರ ಬಳಿ ಬಂದ ರವಿ ಖಾನಾಪುರ ಅವರ ಆರು ವರ್ಷದ ಮಗ ಸಾತ್ವಿಕ್ ವಿಜಯೇಂದ್ರ ಅವರ ಕಾಲಿಗೆ ನಮಸ್ಕರಿಸಿ, “ಮುತ್ಯಾರು (ಯಡಿಯೂರಪ್ಪ ಅಜ್ಜ) ಆರಾಮ ಅದಾರು… ಕೇಳಿದ್ಯಾ ಅಂತ ಹೇಳ್ರಿ” ಎಂದು ಕೈ ಕುಲುಕಿದ.
ಇದನ್ನೂ ಓದಿ:ಕಿತ್ತೂರಿನಲ್ಲಿ ಮನಸೂರೆಗೊಂಡ ಜನಪದ ಕಲಾವಾಹಿನಿ
ಮಗು ಸಾತ್ವಿಕ್ ನ ಈ ಅನಿರೀಕ್ಷಿತ ಮಾತನಿಂದ ಭಾವುಕರಾದ ವಿಜಯೇಂದ್ರ, “ಅರೋಗ್ಯವಾಗಿದ್ದಾರೆ. ನೀನು ಕೇಳಿದೆ ಎಂದು ಹೇಳುತ್ತೇನೆ” ಎಂದು ಸಾತ್ವಿಕನನ್ನು ತಬ್ಬಿ ಮುತ್ತಿಟ್ಟರು.
ಓರ್ವ ಪುಟ್ಟ ಬಾಲನೂ ಯಡಿಯೂರಪ್ಪ ಅವರ ಯೋಗಕ್ಷೇಮ ವಿಚಾರಿಸುತ್ತಾನೆ ಎಂದಾರೆ, ಇದು ಯಡಿಯೂರಪ್ಪ ಅವರ ಜನಪ್ರಿಯತೆಗೆ ಸಾಕ್ಷಿ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.
ಈ ಅನಿರೀಕ್ಷಿತ ಘಟನೆಯಿಂದ ನೆರೆದ ಕಾರ್ಯಕರ್ತರು ಕೂಡ ಅಚ್ಚರಿಯಿಂದ ನಗುವಿನಲ್ಲಿ ಮುಳುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ