ವಿಜಯಪುರ: ಸಿಡಿಲಿಗೆ ಜೋಡೆತ್ತು ಬಲಿ; ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ
Team Udayavani, Jun 1, 2022, 11:45 AM IST
ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಸಂದರ್ಭದಲ್ಲಿ ಸಿಡಿಲಿಗೆ ಜೋಡೆತ್ತು ಹಾಗೂ ಬಿರುಗಾಳಿಗೆ ಬಾಳೆ ಬೆಳೆ ನೆಲಕ್ಕುರುಳಿ ಹಾನಿಯಾದ ಘಟನೆಗಳು ವರದಿಯಾಗಿವೆ.
ಸಿಡಿಲಿಗೆ ಜೋಡೆತ್ತು ಬಲಿ :
ಸಿಡಿಲು ಬಡಿದು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಖಾನಿಕೇರಿ ಗ್ರಾಮದ ಗದ್ಯಪ್ಪ ಬಸನಗೌಡ ಪಾಟೀಲ ಎಂಬವರಿಗೆ ಸೇರಿದ ಜೋಡೆತ್ತು, ಮೃತಪಟ್ಟುವೆ. ಈ ಎರಡು ಎತ್ತುಗಳ ಸಾವಿನಿಂದ ರೈತ ಗದ್ಯಪ್ಪ ಅವರಿಗೆ ಸುಮಾರು 80 ಸಾವಿರ ರೂ. ನಷ್ಟವಾಗಿದೆ.
ಸ್ಥಳಕ್ಕೆ ಕಂದಾಯ ನಿರೀಕ್ಷಕ ಎನ್.ಬಿ ದೂರೆ, ಎಎಸ್ಐ ಎ.ಎಸ್. ನ್ಯಾಮಣ್ಣವರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಲಕ್ಷಾಂತರ ಮೌಲ್ಯದ ಬಾಳೆ ಹಾನಿ :
ಕಳೆದ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ರೈತ ಈರಪ್ಪ ಮಲ್ಲಪ್ಪ ಕಸಬೇಗೌಡರ ಇವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕ್ಕೆ ಉರುಳಿ, ಭಾರಿ ನಷ್ಟವಾಗಿದೆ.
ಒಂದೂವರೆ ಎಕರೆ ತೋಟದಲ್ಲಿ ರೈತ ಈರಪ್ಪ ಕಸಬೇಗೌಡರ ಸುಮಾರು 350 ಬಾಳೆ ಬೆಳೆದಿದ್ದರು. ಇನ್ನು 2-3 ವಾರಗಳಲ್ಲಿ ಕೊಯ್ಲಿಗೆ ಬರಲಿದ್ದ ಬಾಳೆ ಇದೀಗ ನೆಲಕ್ಕೆ ಉರಳಿದೆ.
ಸಂಪೂರ್ಣ ಬಾಳೆ ನೆಲಕ್ಕುರುಳಿದ ಕಾರಣ ಹತ್ತಾರು ಸಾವಿರ ರೂ. .ಖರ್ಚು ಮಾಡಿ ಬೆಳದ ಬಾಳೆಯಿಂದ ಲಕ್ಷಾಂತರ ರೂ.ಆದಾಯದ ನಿರೀಕ್ಷೆಯಲ್ಲಿದ್ದ ಸಂಕಷ್ಟ ಎದುರಾಗಿದೆ.
ಪರಿಹಾರಕ್ಕೆ ಆಗ್ರಹ :
ಸರ್ಕಾರ ವಿಳಂಬ ಮಾಡದೇ ಜೋಡೆತ್ತು ಕಳೆದುಕೊಂಡಿರುವ ಗದ್ಯಪ್ಪ ಪಾಟೀಲ, ಬಾಳೆ ಬೆಳೆ ಹಾನಿಯಿಂದ ನಷ್ಟ ಅನುಭಸಿರುವ ಈರಪ್ಪ ಕಸಬೇಗೌಡರ ಇವರಿಗೆ ಪ್ರಕೃತಿ ವಿಕೋಪ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ