ಸೋದರ ಮಾವನ ಕೃಪೆಯಿಂದ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ : ಲಲಿತಾಬಾಯಿ
Team Udayavani, Oct 31, 2022, 8:34 AM IST
ವಿಜಯಪುರ: ಅನಕ್ಷರಸ್ಥೆಯಾದ ನನ್ನನ್ನು ಸೋದರಮಾವ ದೇವಪ್ಪ ದಶವಂತ ರಂಗ ಕಲೆಯ ಗುರುವಾಗಿ ಮಾರ್ಗದರ್ಶನ ಮಾಡಿದ್ದೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ.
ಹೀಗಂತ ಸಂಭ್ರಮದಿಂದ ಪ್ರತಿಕ್ರಿಯಿಸಿದ್ದು 67 ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಬಸವನಾಡಿನ ರಂಗಕರ್ಮಿ ಲಲಿತಾಬಾಯಿ ಚನ್ನದಾಸರ ಉರ್ಫ ದಶವಂತ.
ಪ್ರಶಸ್ತಿ ಪ್ರಕಟವಾದ ಸುದ್ದಿ ತಿಳಿಯುತ್ತಲೇ ಲಲಿತಾಬಾಯಿ ಕುಟುಂಬದಲ್ಲಿ ಸಂತಸದ ಸಂಭ್ರಮದ ಬುಗ್ಗೆ ಹರಿಯುತ್ತಿದೆ.
ಊರೂರು ಅಲೆದು ರಂಗಪ್ರದರ್ಶನ ನೀಡಿದ ಅರ್ಧ ಶತಮಾನಕ್ಕೂ ಹೆಚ್ವು ಕಾಲದ ಕಲಾ ಸರಸ್ವತಿ ಸೇವೆಗೆ ಸಂದ ಪ್ರಶಸ್ತಿ ಸಹಜವಾಗಿ ಖುಷಿ ನೀಡಿದೆ ಎನ್ನುತ್ತಾರೆ ಲಲಿತಾಬಾಯಿ.
ಕರ್ನಾಟಕದ ಗಡಿಭಾಗವಾದ ಇಂಡಿ ತಾಲೂಕಿನ ಚೌಡಿಹಾಳ ಮೂಲದ ಲಲಿತಾಬಾಯಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಕನ್ನಡದ ಗ್ರಾಮಗಳಲ್ಲಿ ರಂಗಸಜ್ಜಿಕೆಗಳಲ್ಲಿ ತಮ್ಮ ಪ್ರತಿಭಾವಂತಿಕೆ ಮೆರೆದಿದ್ದಾರೆ.
ಬಾಲ್ಯದಲ್ಲಿ ನನ್ನಲ್ಲಿದ್ದ ರಂಗಾಸಕ್ತಿಯನ್ನು ಕಂಡ ನಮ್ಮ ತಂದೆ ಲಾಲಪ್ಪ ಅವರು, ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಸೋದರಮಾವ ದೇವಪ್ಪ ಅವರ ಬಳಿ ನನ್ನನ್ನು ಕಳಿಸಿದರು. ಸೋದರಮಾವ ಕಲಿಸಿದ ರಂಗವಿದ್ಯೆ ರಂಗಭೂಮಿಯ ಮೂಲಕ ನನಗೆ ಎಲ್ಲವನ್ನೂ ಕೊಟ್ಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಡತನ ಮರೆಸಿ, ಹಸಿವ ನೀಗಿಸಿ, ಗೌರವಯುತ ಜೀವನಕ್ಕೆ ದಾರಿ ಕಲ್ಪಿಸಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲಲಿತಾಬಾಯಿ.
ಕಳೆದ ಎರಡು ವರ್ಷಗಳ ಹಿಂದೆ ನಾಟಕ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ರಂಗ ಕಲೆ ಇದೀಗ, ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವ ಹಂತಕ್ಕೆ ನನ್ನನ್ನು ಕರೆತಂದು ನಿಲ್ಲಿಸಿದೆ. ಇದು ನನ್ನ ವೃತ್ತಿ ಜೀವನದ ಸಾರ್ಥಕ ಹಾಗೂ ಆಜೀವ ಸ್ಮರಣೀಯ ಕ್ಷಣ ಎನಿಸಿದೆ ಎಂದು ಸಂತೃಪ್ತಿ ವ್ಯಕ್ತಪಡಿಸುತ್ತಾರೆ ಲಲಿತಾಬಾಯಿ.
ಇದನ್ನೂ ಓದಿ : ನವೀಕರಣಗೊಂಡ ನಾಲ್ಕೇ ದಿನಕ್ಕೆ ಕುಸಿದು ಬಿದ್ದ ಸೇತುವೆ :132 ಮಂದಿ ಸಾವು, 177 ಮಂದಿಯ ರಕ್ಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ