ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕ ಶವವಾಗಿ ಪತ್ತೆ
Team Udayavani, Sep 13, 2020, 9:23 AM IST
ವಿಜಯಪುರ: ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿಯಲ್ಲಿ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಸೇತುವೆ ಕೆಳಗೆ ಪತ್ತೆಯಾದ ಶವ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಯುವಕ ರಮೇಶ ಬಸರಗಿ (25) ಎಂದು ಗುರುತಿಸಲಾಗಿದೆ.
ಚಡಚಣ ತಾಲೂಕಿನ ಹತ್ತಳ್ಳಿ ಬಳಿ ಭೀಮಾ ನದಿ ತುಂಬಿ ಹರಿಯುತ್ತಿದೆ. ಮಹಾರಾಷ್ಟ್ರ ರಾಜ್ಯದ ಹಳ್ಳಿಯಿಂದ ಉಮರಾಣಿ – ಲವಗಿ ಬ್ಯಾರೇಜ್ ಬೈಕ್ ಮೂಲಕ ಗ್ರಾಮಕ್ಕೆ ಮರಳಲು ನದಿ ದಾಟುವಾಗ ನದಿ ಹರಿವಿನ ರಭಸಕ್ಕೆ ರಮೇಶ ಕೊಚ್ಚಿ ಹೋಗಿದ್ದ.
ಇದನ್ನೂ ಓದಿ: ಹುಣಸೂರು: ಬಸ್ -ಬೈಕ್ ಮುಖಾಮುಖಿಯಲ್ಲಿ ಸವಾರರಿಬ್ಬರು ಸಾವು
ನುರಿತ ಈಜುಗಾರರ ನೆರವಿನಿಂದ ಗ್ರಾಮದ ಜನರು ರಮೇಶಗಾಗಿ ಶೋಧ ನಡೆಸಿದ್ದರು. ಭಾನುವಾರ ಶವ ಪತ್ತೆಯಾಗಿದ್ದು, ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ