ಬಡವರು-ಕಾರ್ಮಿಕರ ಹಸಿವು ತಣಿಸಿದ ಶಾಸಕ ನಡಹಳ್ಳಿ

ಲಾಕ್‌ಡೌನ್‌ ಆದಾಗಿನಿಂದ 25,433 ದಿನಸಿ ಕಿಟ್‌ ವಿತರಣೆ

Team Udayavani, May 6, 2020, 3:30 PM IST

5-May-17

ಮುದ್ದೇಬಿಹಾಳ: ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಮಂಗಳವಾರದವರೆಗೆ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಮ್ಮ ಸ್ವಂತ 1.50 ಕೋಟಿ ಹಣದಲ್ಲಿ ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರಗಳ ಬಡ ಕುಟುಂಬಗಳ ಹಸಿವು ತಣಿಸುವ ಪ್ರಯತ್ನ, ಕೊರೊನಾ ವಾರಿಯರ್ಸ್‌ ಸುರಕ್ಷತೆಗೆ ಕೈಗೊಂಡ ಕ್ರಮಗಳ ಮಾಹಿತಿಯನ್ನು ಶಾಸಕರ ಕಾರ್ಯಾಲಯ ಮಂಗಳವಾರ ಬಿಡುಗಡೆಗೊಳಿಸಿದೆ.

ಮಂಗಳವಾರ ಸಂಜೆವರೆಗೆ 25,433 ಆಹಾರಸಾಮಗ್ರಿ ಕಿಟ್‌, 1085 ಎನ್‌-95 ಗುಣಮಟ್ಟದ ಮಾಸ್ಕ್, 20 ಪಿಪಿಇ ಕಿಟ್‌, ಜನಸಂದಣಿ ಹೆಚ್ಚಿರುವ ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ರೋಗಿಗಳು, ಸಹಾಯಕರು, ಬಸ್‌ ನಿಲ್ದಾಣಕ್ಕೆ ಆಗಮಿಸಿದ ವಲಸೆ ಕಾರ್ಮಿಕರು ಸೇರಿ ಅಂದಾಜು 65000 ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿದ್ದಾಗಿ ದಾಖಲೆಗಳು ತಿಳಿಸುತ್ತವೆ.

ಕಿಟ್‌ ವಿವರ: ಮುದ್ದೇಬಿಹಾಳ-6832, ತಾಳಿಕೋಟೆ‌-5815, ನಾಲತವಾಡ-2842, ದೇವರಹಿಪ್ಪರಗಿ-3582 ದಿನಸಿ ಕಿಟ್‌ ವಿತರಿಸಲಾಗಿದೆ. ಇನ್ನು ವಿಜಯಪುರ ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಪತ್ರಿಕೆ ಹಂಚುವವರಿಗೆ-800, ಎರಡೂ ಮತಕ್ಷೇತ್ರಗಳ ಪೊಲೀಸ್‌, ಅಗ್ನಿಶಾಮಕ ಸಿಬ್ಬಂದಿಗೆ-300, ಆಶಾ, ವೈದ್ಯಕೀಯ ಸಿಬ್ಬಂದಿಗೆ-1070, ಮುದ್ದೇಬಿಹಾಳ, ತಾಳಿಕೋಟೆ, ಪುರಸಭೆ, ನಾಲತವಾಡ, ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ-305, ತೃತೀಯ ಲಿಂಗಿ, ನಿರ್ಗತಿಕರಿಗೆ-47, ಆಲಮಟ್ಟಿ ರಸ್ತೆ ಪಕ್ಕದ ಗುಡಿಸಲು ವಾಸಿಗಳಾದ ಆಂಧ್ರ ಮೂಲದ ಒಳಚರಂಡಿ ಕಾರ್ಮಿಕರಿಗೆ-50, ಮುದ್ದೇಬಿಹಾಳ ಬಸ್‌ನಿಲ್ದಾಣಕ್ಕೆ ಬಂದು ತಮ್ಮೂರಿಗೆ ತೆರಳುವ ವಿವಿಧ ಜಿಲ್ಲೆ, ತಾಲೂಕುಗಳ ವಲಸೆ ಕೂಲಿ ಕಾರ್ಮಿಕರಿಗೆ-2300 (ಇದಿನ್ನೂ ಪ್ರಗತಿಯಲ್ಲಿದೆ) ಕಿಟ್‌ ಒದಗಿಸಲಾಗಿದೆ. ಇದಲ್ಲೇ ಶಾಸಕರ ಮನೆಗೆ 1,490 ಜನ ಬಂದು ದಿನಸಿ ಕಿಟ್‌ ತೆಗೆದುಕೊಂಡು ಹೋಗಿದ್ದಾರೆ.

ಮಾಸ್ಕ್, ಪಿಪಿಇ ಕಿಟ್‌: ಮುದ್ದೇಬಿಹಾಳ, ತಾಳಿಕೋಟೆ ಪೊಲೀಸರಿಗೆ 120, ಖಾಸಗಿ ವೈದ್ಯರಿಗೆ 100, ಮುದ್ದೇಬಿಹಾಳ, ವಿಜಯಪುರ ಪತ್ರಿಕಾ ಮಾಧ್ಯಮದವರಿಗೆ 280, ಆಶಾ, ಆರೋಗ್ಯ ಕಾರ್ಯಕರ್ತರು, ನರ್ಸ್‌ಗಳಿಗೆ 315, ಆ್ಯಂಬುಲೆನ್ಸ್‌ ಸಿಬ್ಬಂದಿಗೆ 20, ಜನರೊಂದಿಗೆ ಬೆರೆತು ಕಿಟ್‌ ಹಂಚುವ ಕಾರ್ಯಕರ್ತರು, ಬಿಜೆಪಿ ಮುಖಂಡರು, ಅಧಿಕಾರಿಗಳಿಗೆ 250 ಸೇರಿ ಈವರೆಗೆ 1085 ಎನ್‌-95 ಗುಣಮಟ್ಟದ ಮಾಸ್ಕ್, ಖಾಸಗಿ ವೈದ್ಯರಿಗೆ 20 ಪಿಪಿಇ ಕಿಟ್‌ ಹಂಚಿಕೆ ಮಾಡಲಾಗಿದೆ. ಇದಲ್ಲದೆ ಆಸ್ಪತ್ರೆಗಳಿಗೆ ಬರುವ ರೋಗಿಗಳು, ಅವರ ಸಹಾಯಕರು, ಬಸ್‌ ನಿಲ್ದಾಣಕ್ಕೆ ಬರುತ್ತಿರುವ ವಲಸೆ ಕಾರ್ಮಿಕರು ಸೇರಿ ಇದುವರೆಗೆ 65000 ಜನ ಅನ್ನದಾಸೋಹದ ಸೇವೆ ಪಡೆದಿದ್ದಾರೆ.

ಕಿಟ್‌ ನಲ್ಲಿ ಏನೇನಿದೆ ?
ಸಾಮಾನ್ಯ ಕಿಟ್‌ಗಳಲ್ಲಿ ತಲಾ 1 ಕೆಜಿ ಸಕ್ಕರೆ, ರವಾ, ತೊಗರಿಬೇಳೆ, ಅಡುಗೆಎಣ್ಣೆ, ಆಲೂಗಡ್ಡೆ, 2 ಕೆಜಿ ಈರುಳ್ಳಿ ಹಾಗೂ ಅರಿಷಿಣಪುಡಿ, ಖಾರಪುಡಿ, ಸಾಸಿವೆ, ಜೀರಗಿ, ಚಹಾಪುಡಿ ಸೇರಿ 1250 ಗ್ರಾಮ್‌ ಪ್ಯಾಕೆಟ್‌. ವಿಜಯಪುರ ನಗರದ ಪತ್ರಿಕೆ ಹಂಚುವ 225 ಹುಡುಗರಿಗೆ ಹೆಚ್ಚುವರಿಯಾಗಿ 5ಕೆಜಿ ಅಕ್ಕಿ, ತಲಾ 1ಕೆಜಿ ಸಕ್ಕರೆ, ರವಾ, ತೊಗರಿಬೇಳೆ, ವಲಸೆ ಕಾರ್ಮಿಕರಿಗೆ ಹೆಚ್ಚುವರಿಯಾಗಿ 5 ಕೆಜಿ ಗೋದಿ  ಹಿಟ್ಟು, ಶುದ್ಧ ಕುಡಿವ ನೀರಿನ ಬಾಟಲಿಗಳು, ಬೇಕರಿ ಪದಾರ್ಥ ಒದಗಿಸಲಾಗಿದೆ. ಬಸ್‌ ನಿಲ್ದಾಣದಲ್ಲೇ ಕಾರ್ಮಿಕರಿಗೆ ಊಟದ ಸೌಲಭ್ಯ ಕಲ್ಪಿಸಲಾಗಿದೆ.

ಟಾಪ್ ನ್ಯೂಸ್

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.