ಅಭಿವೃದ್ಧಿ ವಿಷಯದಲ್ಲಿ ಬೇಡ ರಾಜಕೀಯ
Team Udayavani, Jun 27, 2018, 3:30 PM IST
ನಾಲತವಾಡ: ಪಟ್ಟಣದಲ್ಲಿ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರು ಸಹಕಾರ ಹಾಗೂ ಒಮ್ಮತದ ಮೂಲಕ ನಮ್ಮನ್ನು ನಂಬಿದ ಜನತೆಗೆ 24 ತಾಸು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸೋಣ, ನನ್ನೊಂದಿಗೆ ಕೈಜೋಡಿಸಿ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಶಾಸಕರಾಗಿ ಮೊದಲ ಬಾರಿಗೆ ಪಪಂ ಸಾಮಾನ್ಯ ಸಭೆಗೆ ಆಗಮಿಸಿದ ಅವರು, ಅಧ್ಯಕ್ಷ ಪೃಥ್ವಿರಾಜ್ ನಾಡಗೌಡ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜನ ಪ್ರತಿನಿಧಿಗಳಾದ ನಾವು ಜನರ ಸೇವೆ ಮಾಡೋಣ. ಕಳೆದ ಹಲವು ದಿನಗಳಿಂದ ನಿಮ್ಮಲ್ಲಿದ್ದ ವೈಯಕ್ತಿಕ ತಿಕ್ಕಾಟ ಬದಿಗೊತ್ತಬೇಕು. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸೋಣ. ಕ್ರಿಯಾಯೋಜನೆ ಸಿದ್ಧಪಡಿಸುವ ಸಮಯದಲ್ಲಿ ರಾಜಕೀಯ ಬದಿಗೊತ್ತಿ ಸಹಕಾರದಿಂದ ಸಿದ್ದಪಡಿಸಿ ಎಂದರು.
ಕಳೆದ ಹಲವು ವರ್ಷಗಳಿಂದ ಪಟ್ಟಣದ ಕೆಲವು ಕುಟುಂಬಗಳ ಸ್ಥಿತಿಗತಿ ಅರಿತಿದ್ದೇನೆ. ನಿಜವಾದ ಕುಟುಂಬಗಳಿಗೆ ಸೂರು ಸಿಗುತ್ತಿಲ್ಲ, ಮುಂದಿನ ದಿನಗಳಲ್ಲಿ ಹೀಗಾಗಬಾರದು ಎನ್ನುವ ಉದ್ದೇಶದಿಂದ ನಾನು ಈಗಾಗಲೇ ಸೂರು ವಂಚಿತರ ಸಮೀಕ್ಷೆ ಮಾಡಿಸಿದ್ದೇನೆ. ಅಂತಹವರಿಗೆ ಆಸರೆಯಾಗೋಣ ಎಂದರು. ಎಲ್ಲ ಸದಸ್ಯರು ತಮ್ಮ ವಾರ್ಡ್ನತ್ತ ಗಮನ ಹರಿಸಿ ಪ್ರಮುಖವಾಗಿ ಸ್ವತ್ಛತೆಗೆ ಆದ್ಯತೆ ಕೊಡುವ ಮೂಲಕ ಚರಂಡಿ, ರಸ್ತೆಗಳನ್ನು ದುರಸ್ತಿಗೊಳಿಸಬೇಕು.
ವಿದ್ಯುತ್ ಕಂಬಗಳಲ್ಲಿ ದೀಪಗಳ ಅಳವಡಿಕೆ, ಪಡಿತರ ಸಮಸ್ಯೆ, ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಪ್ರಾರಂಭಗೊಂಡ ಚರಂಡಿ, ಕುಡಿಯುವ ನೀರಿನ ಸಂಪರ್ಕ ಹಾಗೂ ರಸ್ತೆಗಳು ಕಳಪೆಯಾಗದಂತೆ ನಿಗಾವಹಿಸಿ ಹೆಚ್ಚಿನ ಅನುದಾನ ಅವಶ್ಯವಿದ್ದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ನನಗೆ ಒಪ್ಪಿಸಿ ಎಂದರು.
ಪಪಂನಲ್ಲಿ ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಶೀಘ್ರವೇ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಈಗಾಗಲೇ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅವರವರ ಕೆಲಸಗಳನ್ನು ಚಾಚು ತಪ್ಪದೇ ಮಾಡುವಂತೆ ಸಿಒ ನಿಗಾವಹಿಸಬೇಕು. ಪಟ್ಟಣದ ಹಲವು ವಾರ್ಡ್ಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ, ತಾತ್ಕಾಲಿಕ ಕುಡಿಯುವ ನೀರಿನ ಟ್ಯಾಂಕ್ ಮೂಲಕ ಪೂರೈಸಬೇಕಿತ್ತು ಎಂದು ಸಿಒ ಅವರನ್ನು ಪ್ರಶ್ನಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಬೇಜವಾಬ್ದಾರಿ ಆಡಳಿತ ಸಹಿಸಲ್ಲ ಎಂದು ಎಚ್ಚರಿಸಿದರು.
ಅಧಿಕಾರಿಗಳು ಸೇರಿದಂತೆ ಸದಸ್ಯರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಟ್ಟಣದ 14 ವಾರ್ಡ್ಗಳಲ್ಲಿ 7 ಶುದ್ಧ ನೀರಿನ ಘಟಕ ನಿರ್ಮಿಸಬೇಕು. ನನ್ನ ಅಧಿಕಾರ ಅವಧಿಯಲ್ಲಿ ಯಾರೂ ನನಗೆ ಆಶ್ರಯ ಮನೆಗಳಿಲ್ಲ ಎಂದು ಅಂಗಲಾಚಿಕೊಳ್ಳಬಾರದು. ಈ ನಿಟ್ಟಿನಲ್ಲಿ ಎಲ್ಲ ಸದದಸ್ಯರ ಕಾರ್ಯಪ್ರವೃತ್ತರಾಗಿ ಎಂದು ಹೇಳಿದರು.
ಆರೋಪ: ಸಭೆ ನೆಡೆಯುತ್ತಿದ್ದಂತೆಯೇ ಸದಸ್ಯರಾದ ಸುಮಾ ಗಂಗನಗೌಡ, ಲತಾ ಕಟ್ಟಿಮನಿ ಹಾಗೂ ಭೀಮಣ್ಣ ಗುರಿಕಾರ ಮಧ್ಯಪ್ರವೇಶಿಸಿ ಪಪಂನ ನಮ್ಮ ವಾರ್ಡ್ಗಳಿಗೆ ಮಲತಾಯಿ ಧೋರಣೆ ಮಾಡಲಾಗುತ್ತಿದ್ದು, ಇದುವರೆಗೂ ಆಶ್ರಯ ಮನೆಗಳ ಹಂಚಿಕೆ, ರಸ್ತೆ, ಚರಂಡಿ ಕಾಮಗಾರಿಗಳ ಕ್ರಿಯಾಯೋಜನೆಗಳನ್ನು ನಮ್ಮನ್ನು ಒಮ್ಮತಕ್ಕೆ ಪಡೆಯದೇ ಸಿದ್ದಪಡಿಸುತ್ತಿದ್ದು ಈ ಅವ್ಯವಸ್ಥೆಗೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ಈ ಹಿಂದೆ ತಿಕ್ಕಾಟದ ಪ್ರಸಂಗಗಳನ್ನು ನೆನಪಿಸಿಕೊಂಡು ಮತ್ತೆ ತಿಕ್ಕಾಟಕ್ಕೆ ಆಸ್ಪದ ಕೊಡಬೇಡಿ ಎಂದು ಶಾಸಕ ನಡಹಳ್ಳಿ ಅವರು ಆರೋಪಿಸಿದ ಸದಸ್ಯರಿಗೆ ತಿಳಿ ಹೇಳಿದರು.
ಈ ವೇಳೆ ಪಪಂ ಉಪಾಧ್ಯಕ್ಷ ವೀರೇಶ ಚಲವಾದಿ, ಶಿವಶೇಖರಯ್ಯ ಹಿರೇಮಠ, ಕಾಶಿಮಸಾಬ್ ಚಿಲಮಕೋರ, ಹನುಮಂತ ಕಾನೀಕೇರಿ, ಮೈಬೂಬ ಬಾಗವಾನ, ದಸ್ತಗೀರಸಾಬ್ ಆರೇಶಂಕರ, ಭೀಮಣ್ಣ ಗುರಿಕಾರ, ಸಲ್ಮಾಬೇಗಂ ನಾಡದಾಳ, ಲಕ್ಷ್ಮೀಬಾಯಿ ಕ್ಷತ್ರಿ, ಬಸಲಿಂಗಮ್ಮ ಮಸ್ಕಿ, ಸಂಗಮ್ಮ ಗಂಗನಗೌಡ, ಲತಾ ಕಟ್ಟಿಮನಿ, ಸುಮಾ ಗಂಗನಗೌಡ, ಸಿಒ ಮಾರುತಿ ನಡುವಿನಕೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್