ಜಿಲ್ಲೆಯಾದ್ಯಂತ ಸಂಭ್ರಮದ ಕಾರಹುಣ್ಣಿಮೆ


Team Udayavani, Jun 29, 2018, 11:32 AM IST

bid-2.jpg

ವಿಜಯಪುರ: ಜಿಲ್ಲೆಯ ರೈತರ ಮೊಗದಲ್ಲಿ ಎಲ್ಲಿಲ್ಲದ ಸಂಭ್ರಮ. ಮೋಡ ಕವಿದ ತುಂತುರು ಮಳೆಯ ತಣ್ಣನೆಯ ವಾತಾವರಣದಲ್ಲಿ ಗುರುವಾರ ತಮ್ಮ ನೆಚ್ಚಿನ ಎತ್ತು-ಹೋರಿಗಳಿಂದ ಕರಿ ಹರಿಯುವ ಮೂಲಕ ಕಾರಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಕಾರಹುಣ್ಣಿಮೆ ಹಬ್ಬಕ್ಕಾಗಿ ಬೆಳಿಗ್ಗೆಯೇ ಎದ್ದು ರೈತರು ತಮ್ಮ ಆಕಳು, ಎತ್ತು, ಹೋರಿ, ಕರುಗಳನ್ನು ಮೈತೊಳೆದು ಕೊಂಬು, ಬೆನ್ನು-ಹೊಟ್ಟೆ ಬಾಲಕ್ಕೆ ಬಣ್ಣ ಹಚ್ಚಿ, ಕೊರಳಿಗೆ ಬಗೆ ಬಗೆಯ ಸದ್ದು ಮಾಡುವ ಗಂಟೆ, ದೊಡ್ಡ ಗೆಜ್ಜೆ ಕಟ್ಟಿದ್ದರೆ, ಕಾಲಿಗೆ ಗೆಜ್ಜೆಗಳ ಸರ ಕಟ್ಟಿ ಶೃಂಗಾರಗೊಳಿಸಿ ಪೂಜೆ ಸಲ್ಲಿಸಿದರು.
 
ನಗರದ ಕನಕದಾಸ ಬಡಾವಣೆ ವಿಶಾಲ ಮೈದಾನದಲ್ಲಿ ಗೋಧೂಳಿ ಸಂಜೆಯಲ್ಲಿ ಜೋಡು ಎತ್ತುಗಳ ಚಕ್ಕಡಿ,
ಒಂಟೆತ್ತಿನ ಚಕ್ಕಡಿ, ಎತ್ತು-ಕುದುರೆಗಳ ಚಕ್ಕಡಿ ಜೋಡಿ ಹೀಗೆ ವಿವಿಧ ರೀತಿಯಲ್ಲಿ ಎತ್ತುಗಳ ಓಟದ ಸ್ಪರ್ಧೆಯ
ಮೂಲಕ ಕಾರಹುಣ್ಣಿಮೆಯ ಕರಿ ಹರಿಯುವ ಹಬ್ಬವನ್ನು ಆಚರಿಸಿದರು. ಒಂದು ಎತ್ತು-ಒಂದು ಕುದುರೆ
ಕಟ್ಟಿ ಜೋಡೆತ್ತಿನ ಚಕ್ಕಡಿ ಸ್ಪರ್ಧೆಯಲ್ಲಿ ಪಾಲ್ಗೊಂಡ ರೈತರೊಬ್ಬರು ಗಮನ ಸೆಳೆದರು. ಮತ್ತೂಬ್ಬ ರೈತ ಜೋಡಿ
ಕುದುರೆ ಚಕ್ಕಡಿ ಓಡಿಸುವ ಮೂಲಕ ನೆರೆದ ಪ್ರೇಕ್ಷಕರ ಇಮ್ಮಡಿಗೊಳಿಸಿದರು.

ಮತ್ತೂಂದೆಡೆ ಎತ್ತುಗಳ ಮಾಲೀಕರ ಚಕ್ಕಡಿ ಸ್ಪರ್ಧೆಗಳಿಗೆ ನೆರೆದ ಪ್ರೇಕ್ಷಕರು ಕೇಕೆ ಹಾಕಿ, ಸಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ರೈತರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದರು. ಬಣ್ಣ-ಬಣ್ಣಗಳಿಂದ ಅಲಂಕೃತಗೊಂಡ ಎತ್ತುಗಳು
ಉತ್ಸಾಹದಲ್ಲಿ ಮಿಂದೆದ್ದು ಓಟದಲ್ಲಿ ತಲ್ಲೀನವಾಗಿದ್ದವು. ಈ ಓಟವನ್ನು ಅತ್ಯಂತ ರೋಚಕತೆಯಿಂದ ವೀಕ್ಷಿಸಲು
ಕೆಲವು ಯುವಕರಂತೂ ಸುತ್ತಮುತ್ತಲಿನ ಗಿಡ-ಮರವೇರಿ ರೋಮಾಂಚನ ಮೂಡಿಸುವ ಚಕ್ಕಡಿ ಕರಿ ಓಟದ ಸ್ಪರ್ಧೆ
ವೀಕ್ಷಿಸಿದರು. ಕಳೆದ ಹಲವಾರು ವರ್ಷಗಳಿಂದ ಕಾರಹುಣ್ಣಿಮೆಯಲ್ಲಿ ನನ್ನ ನೆಚ್ಚಿನ ಎತ್ತುಗಳೊಂದಿಗೆ ಪಾಲ್ಗೊಳ್ಳುತ್ತಿದ್ದೇನೆ. ರೈತರಿಗೆ ತನ್ನ ಜೀವಕ್ಕೆ ಜೀವ ಎನಿಸಿರುವ ಎತ್ತುಗಳಿಗೂ ಸಂತಸ ನೀಡುವ ಓಟದ ಸ್ಪರ್ಧೆ ಆಯೋಜಿಸುವ ಏಕೈಕ ಹಬ್ಬ ಕಾರಹುಣ್ಣಿಮೆ ಎಂದು ಜೋರಾಪುರ ಪೇಟೆಯ ರೈತ ತನ್ನ ಸಂತಸ ಹಂಚಿಕೊಂಡ.

ಸಂಭ್ರಮದ ಕಾರ ಹುಣ್ಣಿಮೆ: ವಿಜಯಪುರದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಕಾರ ಹುಣ್ಣಿಮೆ ಆಚರಿಸಿದರು. ಈ
ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿರುವ ರೈತ ಹೊಸ ಉತ್ಸಾಹದಿಂದ ಕಾರ ಹುಣ್ಣಿಮೆಯ ಸಂಭ್ರಮದಲ್ಲಿ
ತೊಡಗಿದರು.

ಚೈತ್ರ ಮಾಸದ ಮೊದಲ ದಿನ ಗುರುವಾರ ಜಿಲ್ಲೆಯಾದ್ಯಂತ ರೈತರು ಕಾರಹುಣ್ಣಿಮೆ ಕರಿ ಹರಿಯುವ
ಕೃಷಿಕರ ಸಾಂಪ್ರಾದಾಯಿಕ ಹಬ್ಬದ ಆಚರಣೆಗಾಗಿ ಎತ್ತುಗಳನ್ನು ಪೂಜಿಸಿ, ಸಿಂಗರಿಸಿ ಕರಿ ಹರಿಯುವ ಹಬ್ಬವನ್ನು
ಸಂಭ್ರಮಿಂದ ವಿಶಿಷ್ಟವಾಗಿ ಆಚರಿಸಿದರು. ಕೃಷಿ ಬದುಕಿನಲ್ಲಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು, ತಮ್ಮ ಸಂತಸ-ಸಂಕಷ್ಟಗಳನ್ನೆಲ್ಲ ಕಂಡಿರುವ ಜಾರುವಾರುಗಳು ಅದರಲ್ಲೂ ಎತ್ತು-ಹೋರಿಗಳನ್ನು ಕಾರಹುಣ್ಣಿಮೆ ದಿನ ಮೈತೊಳೆದು, ಸಿಂಗರಿಸಿ, ಪೂಜಿಸಿ, ಕರಿ ಹರಿಯುವ ಮೂಲಕ ರೈತರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಮುಂದಾದರು.

ಆಲಮೇಲದಲ್ಲಿ ಜೋಡೆತ್ತಿನ ಬಂಡಿಯಿಂದ ಕರಿ ಹರಿಯುವ ಸಂಭ್ರಮ 
ಆಲಮೇಲ: ರೈತರ ವರ್ಷದ ಮೊದಲನೇ ಹಬ್ಬ ಕಾರಹುಣ್ಣಿಮೆಯನ್ನು ರೈತರು ಸಂಭ್ರಮ ಸಡಗರದಿಂದ ಜೋಡೆತ್ತಿನ
ಬಂಡಿ ಓಡಿಸುವ ಮೂಲಕ ಆಚರಣೆ ಮಾಡಿದರು.

ಕಾರಹುಣ್ಣಿಮೆ ಪ್ರಯುಕ್ತ ಪಟ್ಟಣದಲ್ಲಿ ಪಂಚ ಲೋಹಗಳ ಬಂಡಿಗಳು ಓಡಿಸಿ ಕರಿ ಹರಿಯುವ ಆಚರಣೆ ನಡೆಯುತ್ತಿದೆ.
ಎರಡು ಬಂಡಿಗಳು 5 ಸುತ್ತು ಸುರಳಿತವಾಗಿ ಕರಿ ಹರಿದರೆ ಗ್ರಾಮಕ್ಕೆ ಮತ್ತು ರೈತರಿಗೆ ಮಳೆ ಬೆಳೆ ಉತ್ತಮವಾಗಿ ಆಗುತ್ತದೆ ಎಂದು ಇಲ್ಲಿನ ಜನರ ನಂಬಿಕೆ. ಆಲಮೇಲದಲ್ಲಿ ನಡೆಯಲಿರುವ ಕಾರಹುಣ್ಣಿಮೆಯ ಕರಿಹರಿಯು
ಸಾಂಪ್ರದಾಯವನ್ನು ಇಲ್ಲಿನ ಪ್ರಮುಖ ಮನೆತನಗಳಾದ ದೇಶಮುಖ ಮತ್ತು ದೇಶಪಾಂಡೆಯವರ ಮನೆತನದ
ಸಹೋದರಿಯರ ಲಕ್ಷ್ಮೀ ಬಂಡಿಗಳ ಮೂಲಕ ಕರಿ ಹರಿಯುವ ಆಚರಣೆ ಇಲ್ಲಿನ ಸಂಪ್ರದಾಯ. ಪೀರ ಗಾಲೀಬ
ಸಾಬ ದರ್ಗಾದ ಎದುರು ಮೈದಾನದಲ್ಲಿ 5 ಸುತ್ತು ಓಡಿಸಿ ನಂತರ ಮನೆಗೆ ಹೋಗುವಾಗ ಗ್ರಾಮದ ದಕ್ಷಿಣ ದಿಕ್ಕಿನ
ದೇವರ ಅಗಸಿ ಬಾಗಿಲಿನಲ್ಲಿ ಸಾಂಕೇತಿಕ ಕರಿ ಹರಿಯಲಾಯಿತು.

ಪ್ರಮುಖ ಎರಡು ಮನೆತನದ ಒಡೆಯರುಗಳು ಆಗಮಿಸಿ ಬಂಡಿ ಓಡಿಸಲು ಚಾಲನೆ ನೀಡಿದರು. ಈ ಎರಡು ಜೋಡಿ
ಎತ್ತಿನ ಬಂಡಿಗಳಿಗೆ ಗ್ರಾಮಸ್ಥರೆ ಎತ್ತುಗಳನ್ನು ಕಟ್ಟುತ್ತಾರೆ. ಈ ವರ್ಷ ದೇಶಮುಖರ ಮನೆತನದ ಲಕ್ಷ್ಮೀ ಬಂಡಿಗೆ ಚಂದ್ರಕಾಂತ ಜಮಾದಾರ ಎತ್ತುಗಳನ್ನು ಕಟ್ಟಿದ್ದಾರೆ. ದೇಶಪಾಂಡೆಯವರ ಬಂಡಿಗೆ ಗಾಲೀಬ ಚಂದ್ರಾಮ ಭೋವಿ ಅವರ ಎತ್ತುಗಳು ಕಟ್ಟಿದ್ದಾರೆ.

ಎರಡು ಬಂಡಿಗಳು ಮೆರವಣಿಗೆ ಮುಖಾಂತರ ದೇಶಮುಖರ ಮನೆಗೆ ಎತ್ತುಗಳನ್ನು ಕರೆ ತಂದು ನಂತರ ವಾಲೀಕಾರರು, ತಳವಾರರು, ಯಂಟಮಾನರು ಹಾಗೂ ಗ್ರಾಮಸ್ಥರು ಬಂಡಿ ಕಟ್ಟಿ ದುರಸ್ತಿಗೊಳಿಸಿದ ನಂತರ
ದೇಶಮುಖ ಮನೆತನದ ಲಕ್ಷ್ಮೀ ಬೆಳಗ್ಗೆ ಗ್ರಾಮದ ಹಳ್ಳಕ್ಕೆ ಹೋಗಿ ಸ್ನಾನ ಮಾಡಿಸಿಕೊಂಡು ಪೂರ್ವ ದಿಕ್ಕಿಗಿರುವ
ದೇವಣಗಾಂವ ರಸ್ತೆಗೆ ಹೊಂದಿರುವ ಅಗಸಿಯಲ್ಲಿ ಮೀಸಲು ಕರಿ ಹರಿಯುವ ಮುಖಾಂತರ ಆರಂಭಗೊಂಡಿತು. ಬೆಳಗ್ಗೆ
ಮೀಸಲು ಕರಿಹರಿದು ಬರುವಾಗ ಗ್ರಾಮದ ಪ್ರತಿ ಮನೆಯಿಂದಲು ಬಂಡಿಗೆ ಪೂಜೆ ಪುನಸ್ಕಾರ ಕೈಗೊಂಡರು. 

ಟಾಪ್ ನ್ಯೂಸ್

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

10-

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.