ಬೆತ್ತಲಾಗಿ ತಿರುಗಿದ ಪಬ್ ಜಿ ವ್ಯಸನಿ: ಬಾಂಬ್ ಎಸೆಯುವ ರೀತಿ ಮನೆಗಳಿಗೆ ಕಲ್ಲೆಸೆದ ಯುವಕ
Team Udayavani, Jan 21, 2020, 3:30 PM IST
ವಿಜಯಪುರ: ಪಬ್ ಜೀ ಗೇಮ್ ವ್ಯಸನಿ ಯುವಕ ಮಾನಸಿಕ ಅಸ್ವಸ್ಥನಾಗಿ ನಗರದಲ್ಲಿ ಅರೆ ಬೆತ್ತಲೆ ತಿರುಗುತ್ತ ಕಲ್ಲು ತೂರಾಟ ನಡೆಸಿ ಅವಾಂತರ ಸೃಷ್ಟಿಸಿದ ಘಟನೆ ಜರುಗಿದೆ.
ಪಬ್ ಜೀ ಗೇಮ್ ನಿಂದ ಮಾನಸಿಕ ಸಮತೋಲನ ಕಳೆದುಕೊಂಡ ಯುವಕ ನಗರದ ಮನಗೂಳಿ ಅಗಸಿ ಬಳಿ ಅರೆ ಬೆತ್ತಲೆಯಾಗಿ ಓಡಾಡುತ್ತ ಕಲ್ಲು ತೂರಾಟ ಆರಂಭಿಸಿದ್ದ. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರ್, ಬೈಕ್ ವಾಹನಗಳು ಜಖಂಗೊಂಡಿವೆ. ಪಬ್ ಜೀ ಆಟವಾಡುವ ಮಾದರಿಯಲ್ಲಿ ಬೆತ್ತಲೆ ಯುವಕ ಮನೆಗಳಿಗೆ ಬಾಂಬ್ ಎಸೆಯುವ ಮಾದರಿಯಲ್ಲಿ ಕಲ್ಲು ಎಸೆಯುತ್ತಿದ್ದ.
ಯುವಕನ ಅಟಾಟೋಪ ಹೆಚ್ಚಾಗುತ್ತಲೇ ಸ್ಥಳೀಯರು ಹಗ್ಗದಿಂದ ಯುವಕನ ಕೈ-ಕಾಲು ಕಟ್ಟಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಜಲನಗರ ಠಾಣೆ ಪೊಲೀಸರು ಅಂಬ್ಯುಲೆನ್ಸ್ ಯುವಕನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆತ್ತಲೆಯಾಗಿ ಓಡಾಡುತ್ತ ಪಬ್ ಜೀ ಮಾದರಿಯಲ್ಲಿ ಕಲ್ಲು ಎಸೆದು ಸಾರ್ವಜನಿಕವಾಗಿ ಭಯ ಸೃಷ್ಟಿಸಿದ ಯುವಕ ಎಲ್ಲಿಯವ , ಹೆಸರು ವಿಳಾಸ ಏನೆಂದು ತಿಳಿದು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ