2 ವರ್ಷದ ಪುನೀತ್ಗೆ ಮದ್ರಾಸ್ನಲ್ಲಿ ಲಿಂಗದೀಕ್ಷೆ!
Team Udayavani, Oct 30, 2021, 5:52 AM IST
ಸಿಂದಗಿ: ಪವರ್ಸ್ಟಾರ್ ಪುನೀತ್ ರಾಜಕುಮಾರ ಕುಟುಂ ಬಕ್ಕೂ ವಿಜಯಪುರ ಜಿಲ್ಲೆಯ ಸಿಂದಗಿಗೂ ಎಲ್ಲಿಲ್ಲದ ನಂಟು.
ಗದುಗಿನ ಲಿಂ|ಪುಟ್ಟರಾಜ ಗವಾಯಿಗಳು ಸಂಗೀತ ಸಮಾ ರಂಭಕ್ಕಾಗಿ 1977ರಲ್ಲಿ ಮದ್ರಾಸ್ಗೆ ತೆರಳಿದ್ದ ಸಂದರ್ಭ ಅವರ ಜತೆ ಸಿಂದಗಿ ಪಟ್ಟಣದ ಊರನ ಹಿರಿಯ ಮಠದ (ಹಾವೇ ರಿಯ ಸಿಂದಗಿ ಮಠ) ಪೀಠಾಧಿಪತಿಗಳಾಗಿದ್ದ ಲಿಂ|ಶಾಂತವೀರ ಪಟ್ಟಾಧ್ಯಕ್ಷರು ಇದ್ದರು. ಪುಟ್ಟರಾಜ ಗವಾಯಿಗಳ ಶಿಷ್ಯರಾದ ವೀರೇಶ ಮದರಿ ಎನ್ನುವವರು ಕನ್ನಡ ಚಿತ್ರರಂಗದ ಗೀತೆಗಳಿಗಾಗಿ ವಯಲಿನ್ ನುಡಿಸುತ್ತಿದ್ದರು.
ಅವರು ಮೇರುನಟ ಡಾ|ರಾಜಕುಮಾರ ಅವರಿಗೆ ನಿಮ್ಮ ಮನೆಗೆ ಪುಟ್ಟರಾಜ ಗವಾಯಿಗಳನ್ನು ಊಟಕ್ಕೆ ಕರೆದುಕೊಂಡು ಬರುತ್ತಿರುವೆ ಎಂದು ವಿನಂತಿಸಿಕೊಂಡಿದ್ದರು. ಆಗ ಡಾ|ರಾಜ್ ಅವರು ನಿಸ್ಸಂಕೋಚವಾಗಿ ಕರೆದುಕೊಂಡು ಬನ್ನಿ ಎಂದಿದ್ದರು.
ಇದನ್ನೂ ಓದಿ:ಚುನಾವಣಾ ಆಯೋಗದ “ಐಕಾನ್’ ಆಗಿದ್ದ ಪುನೀತ್
ಆದರೆ, ಪುಟ್ಟರಾಜ ಗವಾಯಿಗಳು ಲಿಂಗದೀಕ್ಷೆ ತೆಗೆದುಕೊಳ್ಳ ದವರ ಮನೆಯಲ್ಲಿ ಉಪಾಹಾರ-ಊಟ ಸೇವನೆ ಇಲ್ಲ ಎಂಬ ಪದ್ಧತಿ ಅನುಸರಿಸುತ್ತಿದ್ದರು. ಈ ಸಂಗತಿ ಗೊತ್ತಾದ ಬಳಿಕ ಅವರ ಜೊತೆಯಲ್ಲಿಯೇ ಇದ್ದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಡಾ|ರಾಜಕುಮಾರ ಕುಟುಂಬಕ್ಕೆ ಲಿಂಗದೀಕ್ಷೆ ನೀಡಿದ್ದರು. ಬಳಿಕ ಡಾ|ರಾಜ್ಕುಮಾರ ಮನೆಯಲ್ಲಿ ಪುಟ್ಟರಾಜ ಗವಾಯಿಗಳು, ಶಾಂತವೀರ ಪಟ್ಟಾಧ್ಯಕ್ಷರು ಅವರ ಶಿಷ್ಯ ಬಳಗ ಊಟ ಸೇವಿಸಿ ದ್ದರು. ಆಗ ಪುನೀತ್ ಎರಡು ವರ್ಷದವರಾಗಿದ್ದರು ಎನ್ನುವು ದನ್ನು ಸ್ಥಳೀಯ ಊರನ ಮಠದ ಪೀಠಾಧಿ ಪತಿಗಳಾದ ಶಿವಾ ನಂದ ಶಿವಾಚಾರ್ಯರು ತಿಳಿಸಿದ್ದಾರೆ. ಇದಾದ ಬಳಿಕ ಗಜಲ್ ಗಾಯಕ ದಿ| ರವೀಂದ್ರ ಹಂದಿಗನೂರ ಅವರು ಶಾಂತವೀರ ಪಟ್ಟಾಧ್ಯಕ್ಷರು ಅವರ ಹೆಸರಿನ ಮೇಲೆ ಹಾಡುಗಳನ್ನು ಹಾಡು ವಂತೆ ಡಾ| ರಾಜಕುಮಾರಗೆ ತಿಳಿಸಿದಾಗ ಅವರು ಎರಡು ಗೀತೆಗಳನ್ನು ಹಾಡಿದ್ದರು. ಹೀಗಾಗಿ ಪುನೀತ್ ರಾಜಕುಮಾರ ಕುಟುಂಬಕ್ಕೂ ಸಿಂದಗಿಗೂ ಎಲ್ಲಿಲ್ಲದ ನಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ