ಪ್ರಧಾನಿ ಮೋದಿ ಕೈ ಬಲಪಡಿಸಲು ಶಹಾಪುರ ಮನವಿ
Team Udayavani, Apr 30, 2018, 4:30 PM IST
ಕಲಕೇರಿ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿಯೊಂದೇ ಪರ್ಯಾಯವಾಗಿದ್ದು, ಪ್ರತಿಯೊಬ್ಬರು ಅಭಿವೃದ್ಧಿಗಾಗಿ ಬಿಜೆಪಿ
ಬೆಂಬಲಿಸಿ ಕರ್ನಾಟಕದಲ್ಲಿ ಪಕ್ಷದ ಬಾವೂಟ ಹಾರಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮನವಿ ಮಾಡಿದರು.
ರವಿವಾರ ದೇವರಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಡಿ ಜಗತ್ತೇ ಮೆಚ್ಚುವಂತ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರದಂತೆ ರಾಜ್ಯದಲ್ಲಿಯೂ ಯಡಿಯೂರಪ್ಪನವರ
ನೇತೃತ್ವದ ಸರ್ಕಾರ ರಚಿಸಲು ಪ್ರತಿಯೊಬ್ಬರು ಬಿಜೆಪಿಗೆ ಬೆಂಬಲಿಸಬೇಕು. ದೇವರಹಿಪ್ಪರಗಿ ಕ್ಷೇತ್ರದ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಅತ್ಯಂತ ಒಳ್ಳೆ ವ್ಯಕ್ತಿಗಳಾಗಿದ್ದು, ರಾಜಕೀಯ ಮನೆತನದಿಂದ ಬಂದವರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕನಸು ಹೊತ್ತು ಚುನಾವಣೆ ಎದುರಿಸುತ್ತಿದ್ದು ಎಲ್ಲರೂ ಸಹಕಾರ ನೀಡಿ ಬಿಜೆಪಿ ಗೆಲ್ಲಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಸುಮಾರು ವರ್ಷಗಳಿಂದ ಕ್ಷೇತ್ರದ ನಿರಂತರ ಸಂಪರ್ಕ ಹೊಂದಿದ್ದು, ಬಿಜೆಪಿ ಅಲೆ ಜೋರಾಗಿದೆ. ಇಡೀ ಕ್ಷೇತ್ರದ ಯುವ ಜನಾಂಗವೆಲ್ಲ ಬಿಜೆಪಿ ಬೆಂಬಲಕ್ಕೆ ನಿಂತಿದ್ದು, ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ದೂರ ಮಾಡಲು ಬಿಜೆಪಿಗೆ ಬೆಂಬಲಿಸಬೇಕು. ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪಕ್ಷಗಳ ಮುಖಂಡರು, ಯುವಕರು ಬಿಜೆಪಿ ಸೇರ್ಪಡೆಗೊಂಡರು ನಂತರ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಸಿದ್ದು ಬುಳ್ಳಾ,ಪ್ರಭುಗೌಡ ಬಿರಾದಾರ ಅಸ್ಕಿ,ಸೋಮನಗೌಡ ಯಾಳವಾರ, ವೀರಪ್ಪ ಝಳಕಿ, ಹನುಮಂತ ಸಂದಿಮನಿ, ವಿಶ್ವನಾಥ ಸಬರದ, ಶಿವಕುಮಾರ ಮಾಡಗಿ, ಶಂಕರ ಗುಂಡಕನಾಳ, ಸೋಮನಗೌಡ ಗಬಸಾವಳಗಿ, ಸಾಹೇಬಗೌಡ ಪಾಟೀಲ, ಮುಕುಂದ ದೇಸಾಯಿ, ಷಡಕ್ಷರಿ ಚಿಕ್ಕಮಠ, ಗೋಪಾಲ ಮೋಪಗಾರ, ರಾಜು ದೇಸಾಯಿ, ಮಲಕು ವಡ್ಡರ, ಸಂಗಮೇಶ ಜಾಲಹಳ್ಳಿಮಠ, ರವಿ ಹಿರೇಮಠ, ಸಂಗಮೇಶ ಸಗರ, ಕಾಶೀನಾಥ ವಿರಕ್ತಮಠ, ಗೌಡಪ್ಪ ದೇಸಾಯಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ