ಮಣ್ಣಿನ ಮಡಕೆಗಳಿಗೆ ಭಾರಿ ಬೇಡಿಕೆ
200-300 ರೂ.ಗೆ ಮಾರಾಟಮಾರುಕಟ್ಟೆಗೆ ಲಗ್ಗೆ ಯಿಟ್ಟ ಮಣ್ಣಿನ ಮಡಕೆಗಳು
Team Udayavani, Mar 16, 2020, 12:03 PM IST
ಸಿಂದಗಿ: ಬೇಸಿಗೆ ಬಿಸಿಲ ಝಳ ದಿನೇ ದಿನೇ ಏರುತ್ತಿದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ತಂಪು ಪಾನೀಯ, ಹಣ್ಣುಗಳ ಖರೀದಿಗೆ ಮುಂದಾಗಿರುವುದು ಸಾಮಾನ್ಯವಾಗಿದೆ. ಜೊತೆಗೆ ಮಣ್ಣಿನ ಮಡಕೆಗಳ ಖರೀದಿ ಭರಾಟೆ ಜೋರಾಗಿದೆ.
ಪಟ್ಟಣದ ಗೋಲಗೇರಿ ರಸ್ತೆ ಬದಿ ತಹಶೀಲ್ದಾರ್ ಕಚೇರಿ ಕಾಂಪೌಂಡ್ಗೆ ಹತ್ತಿ ಹೊರ ಆವರಣದ ರಸ್ತೆಗೆ ಹೊಂದಿಕೊಂಡು ಸಿದ್ದಪ್ಪ ಯಮನಪ್ಪ ಕುಂಬಾರ ಕುಟುಂಬ ಸದಸ್ಯರು ಮಾರಾಟ ಮಾಡುತ್ತಿರುವ ಮಣ್ಣಿನ ಮಡಕೆಗಳ ಖರೀದಿಯಲ್ಲಿ ಜನರು ತಲ್ಲೀನರಾಗಿರುವುದು ಸಾಮಾನ್ಯವಾಗಿದೆ.
ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಪಡೆದಿರುವ ಮಣ್ಣಿನ ಮಡಕೆಗಳು ಹಿಂದೆ ಎಲ್ಲರ ಮನೆಗಳನ್ನು ಕಂಡು ಬರುತ್ತಿದ್ದವು. ಸ್ಥಳೀಯವಾಗಿಯೇ ತಯಾರಾಗುತ್ತಿದ್ದವು. ಫ್ರಿಡ್ಜ್ ಗಳು ಮನೆ ಸೇರಿಕೊಂಡ ನಂತರ ಮಡಕೆಗಳಿಗೆ ಬೇಡಿಕೆ ಕುಂಠಿತಗೊಂಡಿದ್ದರಿಂದ ಇದರ ಉದ್ದಿಮೆ ಕ್ಷೀಣಿಸಿದೆ ಎನ್ನುತ್ತಾರೆ ಸಂತೋಷ ಕುಂಬಾರ.
ದಶಕದ ಹಿಂದೆ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲೇ ಮಣ್ಣಿನ ಮಡಕೆ ತಯಾರಿಸುತ್ತಿದ್ದೇವು. ಈಗ ಮಡಕೆ ಮಾಡಲು ಸ್ಥಳೀಯವಾಗಿ ಮಣ್ಣು ಸಿಗುತ್ತಿಲ್ಲ. ಮಣ್ಣು ಸಿಕ್ಕರೆ ಮಡಕೆ ಮಾಡಲು ಸಾಕಷ್ಟು ಸ್ಥಳದ ಅವಕಾಶವಿಲ್ಲದ ಕಾರಣ ಮತ್ತು ಅವರ ಕುಟುಂಬ ಸದಸ್ಯರು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ ಕಾರಣ ತಯಾರಿಕೆಯನ್ನು ನಿಲ್ಲಿಸಿದ್ದೇವೆ. ಆದರೆ ಮಾರಾಟ ಮಾಡುವುದನ್ನು ಮುಂದುವರಿಸುವ ಮೂಲಕ ಕುಟುಂಬದ ಹಿರಿಯರ ವೃತ್ತಿಯಲ್ಲೇ ಸಂತೃಪ್ತಿ ಕಾಣುತಿದ್ದೇವೆ ಎಂದು ಸಿದ್ದಪ್ಪ ಯಮನಪ್ಪ ಕುಂಬಾರ ಹೇಳಿಕೊಳ್ಳುತ್ತಾರೆ.
ಪ್ರತಿ ವರ್ಷ ಬೇಸಿಗೆ ಆರಂಭವಾಗುತಿದ್ದಂತೆ ಆಂಧ್ರಪ್ರದೇಶದಿಂದ ಮಡಕೆಗಳನ್ನು ತರಿಸಿಕೊಳ್ಳುತ್ತೇವೆ. ನಮ್ಮಲ್ಲಿ ಕೆಂಪು ಮಡಕೆಗಳು ಲಭ್ಯವಿದೆ. ಜನರು ಕೆಂಪು ಮಣ್ಣಿನ ಮಡಕೆಗಳನ್ನು ಹೆಚ್ಚಾಗಿ ಕೇಳುತ್ತಾರೆ. ಹೀಗಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ.
ಆಕಾರಕ್ಕೆ ತಕ್ಕಂತೆ ಮಡಕೆಗಳನ್ನು 200 ರೂ.ದಿಂದ 300 ರೂ.ವರೆಗೆ ಮಾರಾಟ ಮಾಡುತ್ತಿದ್ದೇವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಜನರು ಖರೀದಿಗೆ ಮುಂದಾಗಿದ್ದಾರೆ. ಒಂದು ಮಡಕೆ ಮಾರಾಟ ಮಾಡಿದರೆ 20-50 ರೂ. ಲಾಭ ಸಿಗುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಮಾರಾಟವಾಗುವುದರಿಂದ ಉತ್ತಮ ಲಾಭ ಸಿಗುವ ನಿರೀಕ್ಷೆ ಇದೆ. ನಾನು ಮಾಡುವ ಕಾರ್ಯವನ್ನು ಗುರುತಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಅವರು ಶ್ರಮ ಸನ್ಮಾನ ಪ್ರಶಸ್ತಿ-2020 ಪುರಸ್ಕಾರ ಮಾಡಿ ಗೌರವಿಸಿ ಪ್ರೋತ್ಸಾಹ ನೀಡಿದ್ದು ಸಂತಸ ತಂದಿದೆ ಎಂದು ಸಿದ್ದಪ್ಪ ಕುಂಬಾರ ಉದಯವಾಣಿಗೆ ತಿಳಿಸಿದರು.
ಫ್ರಿಡ್ಜ್ನಲ್ಲಿನ ತಂಪು ನೀರಿಗಿಂತ ಮಡಕೆ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಹೀಗಾಗಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಮಡಕೆ ಖರೀದಿಸುತ್ತೇವೆ.
ರಾಜಶೇಖರ ಹಿರೇಕುರಬರ,
ಶರಣು ಗೋರ್ಜಿ ಗ್ರಾಹಕರು
ಕುಂಬಾರಿಕೆ ಕೆಲಸಕ್ಕೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಒಂದೊಂದು ಎಕರೆ ಜಮೀನು ನೀಡಿ ಪ್ರೋತ್ಸಾಹಿಸುತ್ತಿದೆ. ಅದೆ ರೀತಿಯಾಗಿ ಮಡಕೆ ತಯಾರಿಸಲು ರಾಜ್ಯ ಸರಕಾರ ಕುಂಬಾರ ಜನಾಂಗಕ್ಕೆ ಸ್ಥಳ ನೀಡಿ ಕುಂಬಾರಿಕೆ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು.
ಸಿದ್ದಪ್ಪ ಯಮನಪ್ಪ ಕುಂಬಾರ,
ಮಡಕೆ ಮಾರಾಟಗಾರ
ರಮೇಶ ಪೂಜಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ