ಡಾ| ಚಿಮೂಗೆ ಭಾವಪೂರ್ಣ ನಮನ
ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟಇಳಿ ವಯಸ್ಸಿನಲ್ಲೂ ದಣಿವರಿಯದ ಸಂಶೋಧಕ
Team Udayavani, Jan 12, 2020, 1:07 PM IST
ಸಿಂದಗಿ: ಕನ್ನಡದ ಖ್ಯಾತ ಸಾಹಿತಿ, ಸಂಶೋಧಕ, ಸಾಂಸ್ಕೃತಿಕ ಲೋಕದ ರತ್ನ ಡಾ| ಎಂ.ಚಿದಾನಂದ ಮೂರ್ತಿ ನಮ್ಮನ್ನಗಲಿದ್ದು ಕನ್ನಡ ಸ್ವಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪದಗಳು ಒಂದೇ ಎನ್ನುವುದು ಮತ್ತು ವಚನ ಸಾಹಿತ್ಯ ಸಂಶೋಧನೆ ಲೇಖನಗಳಲ್ಲಿ ಸಮರ್ಪಕವಾಗಿ ಬಿಂಬಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ, ಸ್ಥಾನಮಾನ ಸಿಗಲು ಕಾರಣರಾಗಿದ್ದರು. ಹೀಗೆ ತಮ್ಮ ಇಳಿ ವಯಸ್ಸಿಯನಲ್ಲೂ ಕ್ರೀಯಾಶೀಲ, ಸೃಜನಾತ್ಮಕ, ಸಾಹಿತ್ಯ ಸಂಶೋಧನಾ ಕಾರ್ಯಗಳಲ್ಲಿ ನಿರಂತರವಾಗಿ ಮಾತನಾಡುತ್ತಿದ್ದು
ಶ್ಲಾಘನೀಯ ಸಂಗತಿಯಾಗಿದೆ.
ಭಗವಂತನು ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಡಾ| ಚನ್ನಪ್ಪ ಕಟ್ಟಿ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಹಿತ್ಯ ಋಷಿ ಮತ್ತು ಸಂಶೋಧಕರಲ್ಲಿಯೇ ಸಂಶೋಧಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹುಟ್ಟಿಗೆ ಕಾರಣರಾದವರು. ಅವರು ನಮ್ಮನ್ನಗಲಿದ್ದು ಸಾಹಿತ್ಯ ಲೋಕದ ಕೊಂಡಿ ಕಳಚಿದಂತಾಗಿದೆ. ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಪರಿಪಾಲಿಸೋಣ ಎಂದರು.
ಹಿರಿಯ ಸಂಶೊಧಕ ಡಾ| ಎಂ.ಎಂ. ಪಡಶೆಟ್ಟಿ, ಎಂ.ಎಸ್. ಹೈಯಾಳಕರ, ವಿ.ಡಿ. ವಸ್ತ್ರದ, ಅಶೋಕ ವಾರದ, ಡಾ| ಎಂ.ವಿ. ಗಣಾಚಾರಿ, ಡಾ| ವಿ.ವಿ. ಸಾಲಿಮಠ, ಬಿ.ಎಂ. ಗೋಟಕಿಂಡಿಮಠ, ಪ್ರಾಚಾರ್ಯ ಆರ್.ಎಸ್. ಭೂಶೆಟ್ಟಿ, ಎಸ್.ಸಿ. ಸಣ್ಣಳ್ಳಿ, ಪಿ.ವಿ. ಮಹಲಿನಮಠ, ಡಾ| ನಾಗರಾಜ ಮುರಗೋಡ, ಆರ್.ಎಂ. ಪಾಟೀಲ, ಬಸಯ್ಯ ಗೋಲಗೇರಿಮಠ, ಎಸ್.ಬಿ. ಗೌಡಪ್ಪಗೌಡರ, ವಿ.ಡಿ. ಪಾಟೀಲ, ವಿ.ವಿ. ಜಿರ್ಲಿ, ಬಿ.ಬಿ. ಜಮಾದಾರ, ಸಂಗಮೇಶ ಚಾವರ, ಎನ್.ಎಂ. ಶೆಳ್ಳಗಿ, ಎನ್.ಎನ್. ಕುಂದಗೋಳ, ವಿ.ಪಿ. ನಂದಿಕೋಲ ಸೇರಿದಂತೆ ಇನ್ನಿತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ