ಜಾತೀಯತೆ ಬಗ್ಗೆ ಮಾತಾಡಿದೆ‹ ಟಿಂಗಲ್ ಮಾಡ್ತಾರೆ
Team Udayavani, Jul 12, 2018, 7:00 AM IST
ನಿಡಗುಂದಿ: ರಾಜಕಾರಣದಲ್ಲಿ ಜಾತೀಯತೆ ನಡೆಯುತ್ತಿದೆ. ಟಿಕೆಟ್ ನಿಂದ ಹಿಡಿದು ಉನ್ನತ ಸ್ಥಾನ ಪಡೆಯುವವರೆಗೂ ಜಾತಿ ಆಧಾರದ ಮೇಲೆ ನಡೆದಿದೆ. ಈ ಕುರಿತು ಮಠಾಧೀಶರು ಧ್ವನಿ ಎತ್ತಿದರೆ ಟಿಂಗಲ್ ಮಾಡುತ್ತಾರೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಒಡೆದಿದ್ದರಿಂದಲೇ ಕಾಂಗ್ರೆಸ್ ಹಿನ್ನಡೆಯಾಗಿದೆ
ಎಂಬುದನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಈ ಬುದ್ದಿ ಚುನಾವಣೆ ಪೂರ್ವದಲ್ಲೇ ಬಂದಿದ್ದರೆ ಒಳ್ಳೆಯದಾಗುತ್ತಿತ್ತು.
ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಮಠಾಧಿಧೀಶರು ಕೂಡಿಕೊಂಡು ಹೋರಾಡಬೇಕಿದೆ. ಚುನಾವಣೆ ವೇಳೆ ವೀರಶೈವ,ಲಿಂಗಾಯತ ಎರಡೂ ಒಂದೇ ಎಂದು ಸಮಗ್ರತೆ ಕಾಪಾಡಿಕೊಂಡು ಬಂದಿದ್ದಕ್ಕೆ ಎಷ್ಟು ಕೊಂಡಾಡಿದರೂ ಕಡಿಮೆ. ಧರ್ಮ ಬೆಳೆಸುವುದು, ಒಗ್ಗಟ್ಟು ಮೂಡಿಸುವುದು ನಮ್ಮ ಕೆಲಸ. ಬಸವಣ್ಣನವರು ಛಿದ್ರವಾಗಿದ್ದನ್ನು ಒಂದುಗೂಡಿಸಲು ಪ್ರಯತ್ನಿಸಿದರು. ಆದರೆ ಅವರು ಒಂದುಗೂಡಿಸಿದ್ದನ್ನು ಇವರು ಛಿದ್ರಗೊಳಿಸಲು ಪ್ರಯತ್ನಿಸಿದ್ದು ತಪ್ಪು ಎಂದರು.
ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ದಕ್ಷಿಣ
ಭಾಗ ಹೆಚ್ಚು ಸಮೃದಟಛಿವಾಗಿದೆ. ಇಲ್ಲಿನ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪ್ರದೇಶವಾರು ತಾರತಮ್ಯ ಮಾಡಬಾರದು. ಸಾಲ ಮನ್ನಾ ಕುರಿತು ಸ್ಪಷ್ಟ ಚಿತ್ರ ಸಿಕ್ಕಿಲ್ಲ. ಸಾಲ ಮನ್ನಾ ಮಾಡಿದರೆ ರೈತರ ಆತ್ಮಹತ್ಯೆ ತಪ್ಪಿಸಬಹುದು. ಇಂಧನ, ವಿದ್ಯುತ್ ದರ ಹೆಚ್ಚಳದಿಂದ ಸಾಮಾನ್ಯ ಜನರಿಗೆ ಬದುಕಲು ಕಷ್ಟವಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್