Vijayapura; ವೃದ್ಧನ ಸಜೀವ ದಹನಕ್ಕೆ ಯತ್ನಿಸಿದ ಮೂವರ ಬಂಧನ; ಮೂವರು ಪರಾರಿ
Team Udayavani, Mar 21, 2024, 6:03 PM IST
ವಿಜಯಪುರ: ತನ್ನ ಜಮೀನಿನಲ್ಲಿ ಕಬ್ಬಿನ ತ್ಯಾಜ್ಯಕ್ಕೆ ಹಚ್ಚಿದ ಬೆಂಕಿ ಪಕ್ಕದ ಜಮೀನಿನಲ್ಲಿದ್ದ ಮೇವಿನ ಬಣವೆಗೆ ತಾಗಿದ್ದು, ಇದರಿಂದ ಸಿಟ್ಟಿಗೆದ್ದವರು ವೃದ್ಧನ ಸಜೀವ ದಹನಕ್ಕೆ ಯತ್ನಿಸಿದ ಘಟನೆ ಬಬಲೇಶ್ವರ ತಾಲೂಕಿನಲ್ಲಿ ಜರುಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ 70 ವರ್ಷದ ವೃದ್ಧ ದುಂಡಪ್ಪ ಹರಿಜನ ಎಂಬಾತನೇ ಸಜೀವ ದಹನ ಕೃತ್ಯದಲ್ಲಿ ತೀವ್ರ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರ್ಚ 15 ರಂದು ಜರುಗಿರುವ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ದುಂಡಪ್ಪನಿಗೆ ಬೆನ್ನು, ಕೈಗಳಿಗೆ ಸುಟ್ಟ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಕಾರಜೋಳ ಗ್ರಾಮದವರೇ ಆದ ಮಲ್ಲಪ್ಪ ಆಸಂಗಿ, ಹನುಮಂತ ಮಲಘಾಣ, ಸಂಗಪ್ಪ ವಾಲೀಕಾರ, ಲಕ್ಷ್ಮಣ ವಾಲೀಕಾರ, ಸರಸ್ವತಿ ಆಸಂಗಿ ಹಾಗೂ ಪವನ ಆಸಂಗಿ ವಿರುದ್ಧ ದೂರು ದಾಖಲಾಗಿದ್ದು, ಹನುಮಂತ ಮಲಘಾಣ, ಲಕ್ಷ್ಮಣ ವಾಲಿಕಾರ, ಪವನ ಆಸಂಗಿ ಇವರನ್ನು ಬಂಧಿಸಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆಗಿದ್ದೇನು?: ದುಂಡಪ್ಪ ಹರಿಜನ ತನ್ನ ಜಮೀನಿನಲ್ಲಿ ಕಬ್ಬಿನ ಕಟಾವಿನ ಬಳಿಕ ಉಳಿದ ತ್ಯಾಜ್ಯಕ್ಕೆ ಬೆಂಕಿಹಚ್ಚಿ ಸುಡಲು ಮುಂದಾಗಿದ್ದರು. ಈ ಹಂತದಲ್ಲಿ ಬೆಂಕಿಯ ಕಿಡಿ ಪಕ್ಕದ ಜಮೀನಿನಲ್ಲಿ ಮಲ್ಲಪ್ಪ ಆಸಂಗಿ ಅವತಿಗೆ ಸೇರಿದ ಮೇವಿನ ಬಣವೆಗೂ ತಾಗಿ, ಬವಣೆ ಸುಟ್ಟು ಕರಕಲಾಗಿತ್ತು.
ಇದರಿಂದ ಸಿಟ್ಟಿಗೆದ್ದ ಮಲ್ಲಪ್ಪ ಆಸಂಗಿ ಹಾಗೂ ಇತರೆ ಆರೋಪಿಗಳು ದುಂಡಪ್ಪ ಅವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದರು. ಆಕಸ್ಮಿಕವಾಗಿ ಆಗಿರುವ ಹಾನಿಗೆ ನಷ್ಟ ಭರಿಸಿಕೊಡುತ್ತೇನೆ ಎಂದು ದುಂಡಪ್ಪ ಒಪ್ಪಿಕೊಂಡಿದ್ದ. ನಷ್ಟವಾದಷ್ಟು ಪ್ರಮಾಣದ ಮೇವು ಕೊಡಿಸುತ್ತೇನೆ ಎಂದು ಹೇಳಿದರೂ ಆರೋಪಿಗಳು ಕೇಳಿರಲಿಲ್ಲ.
ಉದ್ದೇಶ ಪೂರ್ವಕವಾಗಿ ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದು, ನಿನ್ನನ್ನೂ ಅದೇ ಬೆಂಕಿಯಲ್ಲಿ ಸುಟ್ಟು ಹಾಕುತ್ತೇವೆ ಎಂದು ದುಂಡಪ್ಪ ಹರಿಜನನನ್ನು ಹೊತ್ತಿ ಉರಿಯುತ್ತಿದ್ದ ಬಣವೆಗೆ ಎಸೆದಿದ್ದರು.
ಈ ಕುರಿತು ಬಬಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಿಎಸ್ಪಿ ಜಿ.ಜಿ.ತಳಕಟ್ಟಿ ಹಾಗೂ ವಿಜಯಪುರ ಗ್ರಾಮೀಣ ವಲಯದ ಸಿಪಿಐ ಆನಂದರಾವ್ ನೇತೃತ್ವದ ಪೊಲೀಸರು ತಂಡ ತನಿಖೆ ಆರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ