“ಕನ್ನಡದ ಜಗದ್ಗುರು”ವಾದ ಸಿಂದಗಿಯ ಸಿದ್ದರಾಮ


Team Udayavani, Oct 21, 2018, 6:10 AM IST

181020kpn57.jpg

ವಿಜಯಪುರ: ಕನ್ನಡದ ಜಗದ್ಗುರು ಎಂದೇ ಖ್ಯಾತಿ ಪಡೆದಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ಸಿದ್ದಲಿಂಗ ಶ್ರೀಗಳು ಬಸವೈಕ್ಯರಾದ ಸುದ್ದಿ ತಿಳಿಯುತ್ತಲೇ ಶ್ರೀಗಳ ತವರು ಜಿಲ್ಲೆ ವಿಜಯಪುರದಲ್ಲಿ ಶೋಕ ಮಡುಗಟ್ಟಿದೆ. ಹುಟ್ಟೂರು ಸಿಂದಗಿ ಪಟ್ಟಣದ ಹಿರೇಮಠದಲ್ಲಿ ದುಃಖದ ಕಟ್ಟೆ ಒಡೆದಿದೆ.

1949ರ ಫೆ.21ರಂದು ಸಿಂದಗಿಯ ಹಿರೇಮಠದ ಮರಯ್ಯ ಹಾಗೂ ಶಂಕರಮ್ಮ ಅವರ ದ್ವಿತೀಯ ಪುತ್ರನಾಗಿ ಜನಿಸಿದ್ದ ಸಿದ್ದರಾಮ ಎಂಬ ಮಗು ಭವಿಷ್ಯದಲ್ಲಿ ಕನ್ನಡ ನಾಡೇ ಕನ್ನಡದ ಜಗದ್ಗುರು ಎಂದು ಕರೆಯುವ ಮಟ್ಟಿಗೆ ಬೆಳೆದು ನಿಂತಿದ್ದನ್ನು ತವರಿನ ಜನ ಸ್ಮರಿಸುತ್ತಾರೆ. ಹೆತ್ತವರ ಊರು ಸಿಂದಗಿ ಪಟ್ಟಣವಾದರೂ, ಗರ್ಭಿಣಿಯಾಗಿದ್ದ ತಾಯಿ ಶಂಕರಮ್ಮ ಅವರು ತಮ್ಮ ಅಕ್ಕ ಶಿವಬಯಿ ಅವರ ಊರು ಕೋರವಾರಕ್ಕೆ ಹೋದಾಗ ಸಿದ್ದರಾಮರ ಹೆರಿಗೆ ಆಗಿತ್ತು. ಹೀಗಾಗಿ, ಕೋರವಾರದ ಜನರು ಶ್ರೀಗಳು ನಮ್ಮೂರಲ್ಲಿ ಜನ್ಮ ಪಡೆದ ಪುಣ್ಯಭೂಮಿ ಎಂದು, ಇದನ್ನೇ ಅವರ ಹುಟ್ಟೂರು, ತವರು ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಸಿದ್ದರಾಮರು ಮಲ್ಲಿಕಾರ್ಜುನ ಎಂಬ ಅಣ್ಣ, ಕುಮಾರಸ್ವಾಮಿ, ಪತ್ರಕರ್ತ ಶಾಂತು ಹಿರೇಮಠ, ಸಿಂದಗಿ-ಹಾವೇರಿ ಮಠದ ಪೀಠಾಧಿಪತಿ ಶಿವಾನಂದ ಶ್ರೀಗಳು ಹಾಗೂ ಗಂಗಾಬಾಯಿ ಮತ್ತು ನಿರ್ಮಲಾ ಎಂಬ ಸಹೋದರಿಯರನ್ನು ಹೊಂದಿದ್ದ ದೊಡ್ಡ ಕುಟುಂಬದಿಂದ ಬಂದವರು.

ಸಿಂದಗಿ ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಲೇ ಎಸ್‌.ಎಂ.ಮಣೂರ ಅವರ ಮೆಚ್ಚಿನ ಶಿಷ್ಯನಾಗಿ ಹೊರ ಹೊಮ್ಮಿದ್ದ ಸಿದ್ದರಾಮರು, ಶಿಕ್ಷಣದ ಪಠ್ಯ ಪುಸ್ತಕವನ್ನೆಲ್ಲ ಬಾಯಿ ಪಾಠ ಮಾಡಿ ನಿರರ್ಗಳವಾಗಿ ಹೇಳುವ ಛಾತಿ ಹೊಂದಿದ್ದರು. ನಂತರ, ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಶ್ರೀಗಳ ಕೃಪೆಯಲ್ಲಿ ಉನ್ನತ ಶಿಕ್ಷಣ ಪಡೆದು, ಕನ್ನಡದಲ್ಲಿ ಪ್ರಾವೀಣ್ಯತೆ ಪಡೆದರು. ಅಷ್ಟರಲ್ಲಾಗಲೇ ಅವರು ಸಿಂದಗಿ ಊರಿನ ಹಿರೇಮಠದ ಶಾಂತವೀರ ಶ್ರೀಗಲು ಲಿಂಗೈಕ್ಯರಾದ ಕಾರಣ ಪಟ್ಟಾ ಧಿಕಾರಕ್ಕೆ ನಿಯೋಜಿತರಾಗಿದ್ದರು.

ಆದರೆ, ಸಿದ್ದರಾಮರು ಶಿಸ್ತು, ಸಂಯಮ, ಬದ್ಧತೆ, ಆಧ್ಯಾತ್ಮಿಕ ಚಿಂತನೆ, ಸಾಹಿತ್ಯ ಅಧ್ಯಯನದ ಗೀಳು, ವಿಜ್ಞಾನ, ಮನೋವಿಜ್ಞಾನ, ಭೂಗರ್ಭ, ಗಣಿತ, ವಚನ ಸಾಹಿತ್ಯದ ಸಂಶೋಧನೆಯಲ್ಲಿ ಆಳವಾದ ಅರಿವು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಹುಚ್ಚು ಹಿಡಿದವರಂತೆ ಅದ್ಭುತ ಪ್ರತಿಭೆ ಸಂಪಾದಿಸಿದ್ದರು. ಇವರಲ್ಲಿನ ಪ್ರತಿಭೆಯನ್ನು ಗುರುತಿಸಿದ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರರು, ಸಿದ್ದರಾಮ ದೇವರನ್ನು ಸಿದ್ದಲಿಂಗ ಮಹಾಸ್ವಾಮಿಗಳೆಂದು ನಾಮಕರಣ ಮಾಡಿ ಗದಗ ತೋಂಟದಾರ್ಯ ಮಠಕ್ಕೆ ಪೀಠಾಧಿಕಾರಿಗಳನ್ನಾಗಿ ನೇಮಿಸಿದರು.

ನಿಯೋಜಿತ ಸಿಂದಗಿ ಹಿರೇಮಠದ ಬದಲಾಗಿ ಗದಗ ತೋಂಟದಾರ್ಯ ಮಠಕ್ಕೆ ಪಟ್ಟಾಧಿಕಾರಕ್ಕೆ ನೇಮಿಸಿದಾಗ ಸಿಂದಗಿ ಹಿರೇಮಠದ ಭಕ್ತರು ಸಿಂದಗಿ ಮಠವನ್ನು ಅನಾಥವಾಗಿ ಮಾಡಿದಿರಿ ಎಂದು ಮರುಗಿದರು. ಬಳಿಕ, ಶ್ರೀಗಳ ಪೂರ್ವಾಶ್ರಮದ ತಮ್ಮ ಶಿವಾನಂದ ಶ್ರೀಗಳನ್ನು ಸಿಂದಗಿ-ಹಾವೇರಿ ಮಠಕ್ಕೆ ಪೀಠಕ್ಕೆ ನೇಮಿಸಲಾಯಿತು. ಗದಗ-ಡಂಬಳ ಮಠಕ್ಕೆ ಪೀಠಾ ಧೀಕಾರಕ್ಕೆ ಬರುತ್ತಲೇ ಶ್ರೀಗಳಲ್ಲಿದ್ದ ವೈಚಾರಿಕ ಪ್ರಜ್ಞೆ ಜಗತ್ತಿಗೆ ಪರಿಚಯವಾಗತೊಡಗಿತು. ಕನ್ನಡದಲ್ಲಿ ಅದರಲ್ಲೂ, ವಚನ ಸಾಹಿತ್ಯದ ವೈಚಾರಿಕ ವಿಷಯಗಳನ್ನು ವೈಜ್ಞಾನಿಕ ಪ್ರಜ್ಞೆ ಮೂಲಕ ವಿಶ್ಲೇಷಿಸುವ ಪರಿ ನಾಡಿನ ಕನ್ನಡ ಸಾಹಿತ್ಯ ವಲಯದ ಗಣ್ಯರನ್ನೂ ಹುಬ್ಬೇರಿಸುವಂತೆ ಮಾಡಿತು.

ತಮ್ಮ ಪ್ರವಚನದಿಂದ ಬಂದ ಹಣವನ್ನು ಮಠಕ್ಕೆ ಖರ್ಚು ಮಾಡದೆ, ಅಪ್ರಕಟಿತ ವಚನ ಸಾಹಿತ್ಯ ಮುದ್ರಣಕ್ಕೆ ವಿನಿಯೋಗಿಸಿದರು. ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಸ್ಟ್‌ ರಚಿಸಿ ಅದರ ಮೂಲಕ ಸಾಹಿತ್ಯದ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡರು. ಪರಿಣಾಮ ಡಾ| ದ.ರಾ.ಬೇಂದ್ರೆ, ಬೀಚಿ, ಕಾರಂತ ಅವರಂಥ ನಾಡಿನ ದಿಗ್ಗಜ ಸಾಂಸ್ಕೃತಿಕ ಅತಿರಥ-ಮಹಾರಥರು ಇವರ ಒಡನಾಟಕ್ಕೆ ಬಂದರು.

ಸಿದ್ದಲಿಂಗ ಜಗದ್ಗುರುಗಳಿಗೆ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪದವಿ ನೀಡಿ ಹಿರಿಮೆ ಹೆಚ್ಚಿಸಿಕೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ನಾಡಿನ ಜನತೆ ಡಾ| ಸಿದ್ದಲಿಂಗ ಶ್ರೀಗಳನ್ನು ಕನ್ನಡದ ಜಗದ್ಗುರು ಎಂದೇ ಪ್ರೀತಿ, ಅಭಿಮಾನದಿಂದ ಕರೆದರು.

– ಜಿ.ಎಸ್‌. ಕಮತರ

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.