Vijaypura: ಖಡ್ಗದಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ; ಎಚ್ಚರಿಕೆ ನೀಡಿದ ಪೊಲೀಸರು
ಸಾಥ್ ನೀಡಿದ ರೌಡಿಶೀಟರ್ ; ವಿಡಿಯೋ ವೈರಲ್
Team Udayavani, Jan 15, 2024, 10:50 PM IST
ವಿಜಯಪುರ : ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಯುವಕನೊಬ್ಬ ಖಡ್ಗದಿಂದ ಕೇಕ್ ಕತ್ತರಿಸಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ನಗರದ ಪೇಟಿಬಾವಡಿ ಪ್ರದೇಶದ ನಿವಾಸಿ ಅಮನ್ ಲೋಣಿ ಎಂಬ ಯುವಕ ತನ್ನ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಖಡ್ಗದಿಂದ ಕೇಕ್ ಕತ್ತರಿಸಿದ್ದಾನೆ. ಖಡ್ಗದಿಂದ ಕೇಕ್ ಕತ್ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಮನ್ ಖಡ್ಗದಿಂದ ಕೇಕ್ ಕತ್ತರಿಸುವ ವರ್ತನೆಗೆ ರೌಡಿಶೀಟರ್ ಮಹ್ಮದ್ ಸಾಜಿದ್ ಇನಾಮದಾರ ಸಾಥ್ ನೀಡಿದ್ದಾನೆ. ಸದರಿ ವಿಷಯ ಇದೀಗ ವಿಜಯಪುರ ನಗರದಲ್ಲಿ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.ಖಡ್ಗದಿಂದ ಕೇಕ್ ಕತ್ತರಿಸುವ ವರ್ತನೆ ಹಾಗೂ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿರುವ ಅಮನ್ ವರ್ತನೆ ಸಮಾಜದಲ್ಲಿ ಕಾನೂನು ವಿಷಯದಲ್ಲಿ ನಕಾರಾತ್ಮಕ ಸಂದೇಶ ರವಾನಿಸುತ್ತದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಸಾರ್ವಜನಿಕವಾಗಿ ಖಡ್ಗದಿಂದ ಕೇಕ್ ಕತ್ತರಿಸುವ ವಿಡಿಯೋ ಹರಿದಾಡುತ್ತಲೇ ಕೇಕ್ ಕತ್ತರಿಸಿದ ಅಮನ್ ಹಾಗೂ ಇದಕ್ಕೆ ಸಾಕ್ಷಿಯಾದ ರೌಡೀಶೀಟರ್ ಇಬ್ಬರನ್ನೂ ಗೋಲಗುಂಬಜ ಠಾಣೆ ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್