ಹನೂರು: ಬೈಕ್ ನಲ್ಲಿ ಅಕ್ರಮ ಗಾಂಜಾ ಸಾಗಣೆ; ಆರೋಪಿ ಬಂಧನ
Team Udayavani, Apr 11, 2022, 4:50 PM IST
ಹನೂರು: ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ನಾರಾಯಣ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದಾನೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರ ತಂಡ ಬಿದರಹಳ್ಳಿ-ಮಾರ್ಟಳ್ಳಿ ಮಾರ್ಗಮಧ್ಯದ ಕೀನಪ್ಪನದೊಡ್ಡಿ ಕ್ರಾಸ್ ಬಳಿ ಆರೋಪಿಯನ್ನು ವಶಪಡಿಸಿಕೊಂಡು ಪರಶೀಲನೆ ನಡೆಸಿದಾಗ 95 ಗ್ರಾಂ ಒಣಗಾಂಜಾ ಪತ್ತೆಯಾಗಿದೆ.
ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ದ್ವಿಚಕ್ರ ವಾಹನ ಮತ್ತು ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ದಾಳಿಯಲ್ಲಿ ಪೇದೆಗಳಾದ ನಾಗೇಂದ್ರ, ರಂಗಸ್ವಾಮಿ,ರವೀಂದ್ರ, ರಾಜಿಯಾಬಾಯ್ ಇನ್ನಿತರರು ಹಾಜರಿದ್ದರು.