ಕೋವಿಡ್ ನಡುವೆ ಆರೋಗ್ಯ ಉಪಕೇಂದ್ರ ಬಂದ್
Team Udayavani, May 29, 2021, 6:10 PM IST
ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡುಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ಕಳೆದ 20ದಿನಗಳಿಂದ ಶ್ರುಶೂಷಕಿ(ನರ್ಸ್) ಗೈರಾದ ಹಿನ್ನೆಲೆಆಸ್ಪತ್ರೆ ಬಾಗಿಲು ಮುಚ್ಚಲಾಗಿದೆ.ಭೀಮನಬೀಡು ಗ್ರಾಮದಲ್ಲಿ 5 ಸಾವಿರಕ್ಕಿಂತಹೆಚ್ಚು ಜನಸಂಖ್ಯೆಯಿದ್ದು, ಉಪಕೇಂದ್ರ ಶುರುವಾದಾಗಿನಿಂದಲೂ ಯಾವೊಬ್ಬ ವೈದ್ಯರೂ ಭೇಟಿ ನೀಡಿಲ್ಲ.
ಪಾಳು ಬೀಳುವ ಹಂತ ತಲುಪಿದ್ದಆರೋಗ್ಯ ಕೇಂದ್ರವು ಗ್ರಾಪಂ ಅಧ್ಯಕ್ಷರ ಕಾಳಜಿಯಿಂದ ಕಳೆದ ಕೆಲ ತಿಂಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಗ್ರಾಮಸ್ಥರ ಒತ್ತಾಸೆ ಮೇರೆಗೆ ಓರ್ವನರ್ಸ್ ನೇಮಿಸಲಾಗಿತ್ತು. ಇದೀಗ ಅವರು ಕರ್ತವ್ಯಕ್ಕೆ ಗೈರಾದ ಹಿನ್ನೆಲೆ ಆಸ್ಪತ್ರೆ ಬಂದ್ ಆಗಿದೆ.ಕೊರೊನಾ 2ನೇ ಅಲೆ ಹೆಚ್ಚಳದಿಂದ ಗ್ರಾಮ ದಲ್ಲಿಅಧಿಕ ಮಂದಿಗೆ ಪಾಸಿಟಿವ್ ಕಾಣಿಸಿ ಕೊಂಡುಹಲವು ಮಂದಿ ಹೋಂ ಐಷೋಲೇಷನ್ ಪಡೆದಿದ್ದಾರೆ.
ಇವರ ಆರೋಗ್ಯ ತಪಾಸಣೆಯನ್ನು ಆಶಾಕಾರ್ಯಕರ್ತೆಯರು ಮಾಡುತ್ತಿದ್ದರೂ ಅವರಿಗೆಸೂಚನೆ ನೀಡುವವರು ಯಾರು ಇಲ್ಲ ದಂತಾಗಿದೆ.ಜೊತೆಗೆ ಸಾಮಾನ್ಯವಾಗಿ ಜನರಿಗೆ ಕಾಣಿಸಿಕೊಳ್ಳುವಜ್ವರ, ನೆಗಡಿ, ತಲೆ ನೋವಿಗೂ ಚಿಕಿತ್ಸೆಸಿಗದಂತಾಗಿದೆ.ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಶೇ.95ರಷ್ಟುಜನರು ಮೊದಲ ಹಂತದ ಲಸಿಕೆ ಪಡೆದಿದ್ದಾರೆ.ಇದೀಗ 2ನೇ ಡೋಸ್ ಪಡೆಯಬೇಕಿದ್ದು, ಅವರಿಗೆಲಸಿಕೆ ನೀಡಲು ಸಿಬ್ಬಂದಿ ಇಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಭೀಮನಬೀಡುಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಆರೋಗ್ಯಉಪ ಕೇಂದ್ರವನ್ನು ದುರಸ್ತಿ ಪಡಿಸಲಾಗಿದೆ. ಆದರೆಇಲ್ಲಿಗೆ ನೇಮಕವಾದ ನರ್ಸ್ ಕಳೆದ 20 ದಿನದಿಂದಗೈರಾಗಿದ್ದಾರೆ.
ಕೂಡಲೇ ವೈದ್ಯರು ಹಾಗೂ ಶ್ರುಶೂಷಕಿನೇಮಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ಕೊರೊನಾ ಪರಿಸ್ಥಿತಿಯಲ್ಲಿ ಜನರ ಆರೋಗ್ಯಬಿಗಡಾಯಿಸದಂತೆ ತಡೆಯಲು ಈ ಉಪ ಆರೋಗ್ಯಕೇಂದ್ರದಲ್ಲಿ ಕಾಯಂ ವೈದ್ಯ ಕೀಯ ಸಿಬ್ಬಂದಿನೇಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್ ಇದ್ದಂತೆ…
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ