ಬಿಳಿಗಿರಿ ರಂಗನ ದೇಗುಲದಲ್ಲಿ ಅರಸರ ಫೋಟೋ ತೆರವು: ಆಕ್ರೋಶ
ನಂತರ ಕೋವಿಡ್ 2ನೇ ಅಲೆ ಜಿಲ್ಲೆಯಲ್ಲಿ ಇಲ್ಲಿಂದಲೇ ಆರಂಭಗೊಂಡಿತ್ತು.
Team Udayavani, Sep 13, 2021, 5:51 PM IST
ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದಲ್ಲಿ ದೇವಾಲಯದ ಆವರಣದಲ್ಲಿ ಮೈಸೂರು ಮಹಾರಾಜರ ಫೋಟೋಗಳನ್ನು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಯೊಬ್ಬರ ಸೂಚನೆ ಯಿಂದ ಕಳೆದ ತಿಂಗಳ ಹಿಂದೆ ತೆರವುಗೊಳಿಸಲಾಗಿದೆ ಎಂದು ದೇಗುಲದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ದೇಗುಲ: ಸಾವಿರಾರು ವರ್ಷಗಳ ಪಾರಂಪರಿಕ ಹಿನ್ನೆಲೆಯುಳ್ಳ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಕಟ್ಟಡಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ. ಇದಕ್ಕೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿಗೆ ರಸ್ತೆ ನಿರ್ಮಾಣ, ದೇಗುಲದ ನಿರ್ಮಾಣ ಮಾಡಿ ದವರು ಮೈಸೂರು ಅರಸರೇ ಎಂದು ಇತಿಹಾಸ ಹೇಳುತ್ತದೆ. ಇದರೊಂದಿಗೆ ಇಲ್ಲಿನ ರಂಗನಾಥ ಸ್ವಾಮಿ, ಅಲಮೇಲು ರಂಗನಾಯಕಿ ಹಾಗೂ ಇದರ ತಳಭಾಗದ ಗಂಗಾಧರೇಶ್ವರ ಸ್ವಾಮಿಗೆ ಲಕ್ಷಾಂತರ ರೂ. ಮೌಲ್ಯದ ರತ್ನಖಚಿತ ಚಿನ್ನಾಭರಣಗಳನ್ನುಮೈಸೂರಿನ ಅರಸರು ನೀಡಿದ್ದಾರೆ.
ದೇವಸ್ಥಾನ ಶಿಥಿಲಗೊಂಡ ಹಿನ್ನೆಲೆ 2017 ಮಾರ್ಚ್ನಲ್ಲಿ ಪುರಾತತ್ವ ಇಲಾಖೆ ವತಿಯಿಂದ 2.40 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಯನ್ನು ಶಿವಮೊಗ್ಗದ ಪರಂಪರಾ ಕನ್ಸಟ್ರಕ್ಷನ್ ವತಿಯಿಂದ ಆರಂಭಿಸಲಾಗಿತ್ತು. 20 ತಿಂಗಳ ಒಳಗೆಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತಾದರೂ ಸುಮಾರು 4 ವರ್ಷದ ತರುವಾಯ ಅಂದರೆ ಇದೇ ವರ್ಷದ ಮಾ.29ರಿಂದಏ.2ರವರೆಗೆ ಕಾಮಗಾರಿಪೂರ್ಣ ಗೊಳಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡ
ಲಾಗಿತ್ತು. ನಂತರ ಕೋವಿಡ್ 2ನೇ ಅಲೆ ಜಿಲ್ಲೆಯಲ್ಲಿ ಇಲ್ಲಿಂದಲೇ ಆರಂಭಗೊಂಡಿತ್ತು.
ವಿಶಿಷ್ಟ ಭಾವಚಿತ್ರ: ಇಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ರ ಭಾವಚಿತ್ರವೂ ತೈಲವರ್ಣ ಚಿತ್ರಗಳಾಗಿದ್ದು ಇದಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಇದು ದೇಗುಲಕ್ಕೆ ಯಾರು ನೀಡಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನು ಯಾವ ಕೋನದಲ್ಲಿ ನೋಡಿದರು. ಇಬ್ಬರು ಅರಸರು ನಮ್ಮನ್ನೇ ನೋಡುತ್ತಿರುವಂತೆ ಇದನ್ನು ಚಿತ್ರಿಸಲಾಗಿದೆ. ಈ ಚಿತ್ರಗಳನ್ನು ಅಳವಡಿಸಿದ್ದ ದೇಗುಲದ ಆಡಳಿತ ವರ್ಗ ಇದಕ್ಕಿದ್ದಂತೆಯೇ ತೆರವುಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮತ್ತೆ ಭಾವಚಿತ್ರ ಅಳವಡಿಸಿದ ಆಡಳಿತವರ್ಗ:
ಈ ಸುದ್ದಿ ವ್ಯಾಪಿಸುತ್ತಿದ್ದಂತೆಯೇ ದೇಗುಲದ ಆಡಳಿತ ವರ್ಗ ಎಚ್ಚೆತ್ತು ಮತ್ತೆ ಇದನ್ನು ಅಲ್ಲೇ ಅಳವಡಿಸಿದ್ದಾರೆ. ಈ ಬಗ್ಗೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿ, ಇಲ್ಲಿನ ಕಲ್ಲಿನ ಕಂಬಗಳಿಗೆ ಮೈಸೂರು ಅರಸರ ಭಾವಚಿತ್ರದ ಫೋಟೋ ಅಳವಡಿಸಬೇಕಾಗಿದೆ. ಬಿಟ್ನಲ್ಲಿ ಕಲ್ಲು ಕೊರೆದು ಇದಕ್ಕೆ ಮೊಳೆ ಹಾಕಿ ಇದನ್ನು ಶಾಶ್ವತವಾಗಿ ಇಲ್ಲೇ ಇರುವಂತೆ ಮಾಡುವ ಸಲುವಾಗಿ ತೆರವುಗೊಳಿಸಲಾಗಿತ್ತು ಹೊರತು ಬೇರೆ ಯಾರ ಒತ್ತಡದಿಂದ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ