ಆದಿನಾರಾಯಣಸ್ವಾಮಿ ಮಠಕ್ಕೆ ಸೂಕ್ತ ರಸ್ತೆ ಸೌಲಭ್ಯ ಒದಗಿಸಿ
Team Udayavani, Sep 10, 2021, 3:29 PM IST
ಪಾತಪಾಳ್ಯ: ಬಾಗೇಪಲ್ಲಿ ತಾಲೂಕಿನ ಸುಜ್ಞಾನಂಪಲ್ಲಿ ಬಳಿ ಇರುವ ಅವಧೂತ ಆದಿನಾರಾಯಣಸ್ವಾಮಿ ಮಠಕ್ಕೆ ಸೂಕ್ತ ರಸ್ತೆ ಸೌಲಭ್ಯ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಪಂ ವ್ಯಾಪ್ತಿಯ ಆವಧೂತ ಆದಿನಾರಾಯಣಸ್ವಾಮಿ ಮಠ ಕಳ್ಳಿಪಲ್ಲಿಗೆ 2 ಕಿ.ಮೀ. ದೂರದಲ್ಲಿದೆ. ಮಠಕ್ಕೆ
ಹೋಗಲು ಸೂಕ್ತ ರಸ್ತೆ ಇಲ್ಲ. ಬೆಟ್ಟಗುಡ್ಡಗಳ ಮಧ್ಯೆ ಇರುವ ಮಠಕ್ಕೆ ಪ್ರತಿದಿನ 100ಕ್ಕೂ ಹೆಚ್ಚು ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ.
ರಸ್ತೆಗೆ ಹಾಕಿದ್ದ ಮಣ್ಣು ಕೊಚ್ಚಿ ಹೋಗಿದ್ದು, ಓಡಾಡಲು ಕಷ್ಟವಾಗಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಂಬಂಧಪಟ್ಟ ಇಲಾಖೆಯವರು ಮಠಕ್ಕೆ ಸೂಕ್ತ ರಸ್ತೆ ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬೆಳ್ಳುಳ್ಳಿ ಬೆಲೆ ಅರ್ಧಕ್ಕರ್ಧ ಕುಸಿತ, ಬೆಳೆಗಾರರು ಕಂಗಾಲು
ಆವಧೂತ ಆದಿನಾರಾಯಣಸ್ವಾಮಿ ಮಠಕ್ಕೆ ರಸ್ತೆಕಲ್ಪಿಸಲು ಗ್ರಾಮ ಪಂಚಾಯ್ತಿಅಧಿಕಾರಿಗಳ ಗಮನಕ್ಕೆ ತರಲಾಗಿದೆ.
– ವೇಣುಗೋಪಾಲ, ಗ್ರಾಪಂ ಸದಸ್ಯ, ಸುಜ್ಞಾನಂಪಲ್ಲಿ
ನರೇಗಾಯೋಜನೆಯಲ್ಲಿ ಸುಜ್ಞಾನಂಪಲ್ಲಿ ಬಳಿ ಇರುವಅವಧೂತಆದಿರಾಯಣಸ್ವಾಮಿ ಮಠಕ್ಕೆ ರಸ್ತೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಬಂದ ತಕ್ಷಣರಸ್ತೆ ನಿರ್ಮಾಣಮಾಡಲಾಗುವುದು
– ಕೆ.ವಿ.ನಾರಾಯಣಸ್ವಾಮಿ, ಪಿಡಿಒ, ತೋಳ್ಳಪಲ್ಲಿ ಗ್ರಾಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ