ಕೋಡಿ ಹರಿದ ಅಮಾನಿಬೈರಸಾಗರ ಕೆರೆ

ಕೋಡಿ ನೀರಲ್ಲಿ ಮಿಂದೆದ್ದ ಜನ „ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆ

Team Udayavani, Oct 9, 2021, 3:31 PM IST

ಕೋಡಿ ಹರಿದ ಅಮಾನಿಬೈರಸಾಗರ ಕೆರೆ

Representative Image used

ಗುಡಿಬಂಡೆ: ತಾಲೂಕಿನ ಜೀವನಾಡಿ ಅಮಾನಿಬೈರಸಾಗರ ಕೆರೆ ರಾತ್ರಿ ಬಿದ್ದ ಮಳೆಯಿಂದಾಗಿ ತುಂಬಿ ಕೋಡಿ ಹರಿದಿದ್ದು, ಜನರ ಮನದಲ್ಲಿ ಸಂತಸ ಮನೆ ಮಾಡಿದೆ. ನೀರು ನೋಡಲು ಜಾತ್ರೆಯಂತೆ ಜನ ಸೇರುತ್ತಿದ್ದಾರೆ.

2017ರಲ್ಲಿ ಕೋಡಿ ಹರಿದಿದ್ದ ಅಮಾನಿಬೈರಸಾಗರ ಕೆರೆ ಅಂದಿನಿಂದಲೂ 3 ಅಡಿ ಬಾಕಿ ಇರುವಷ್ಟರ ಮಟ್ಟಕ್ಕೆ ಬಂದು, ಮಳೆಕೊರತೆಯಿಂದಾಗಿ ಕೋಡಿ ಹರಿಯದೆ ನಿಲ್ಲುತ್ತಿತ್ತು, ಇದರ ಜೊತೆಗೆ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಹರಾಜು ಟೆಂಡರ್‌ದಾರರು ಪ್ರತಿ ಕೆರೆ ತುಂಬುವ ಮಟ್ಟಕ್ಕೆ ನೀರು ಬರುತ್ತಿದ್ದಂತೆ, ಸುತ್ತಲೂ ಮೀನುಗಳು ಹೊರಗಡೆ ಬಾರದಂತೆ ಫೆನ್ಸಿಂಗ್‌ ಹಾಕುತ್ತಿದ್ದರು. ಈ ಬಾರಿ ಕೆರೆ ತುಂಬುವ ಮಟ್ಟಕ್ಕೆ ನೀರು ಬರುತ್ತಿದ್ದಂತೆ ಜನರ ಒತ್ತಾಯದಿಂದ ಅಧಿಕಾರಿಗಳು ಫೆನ್ಸಿಂಗ್‌ ಹಾಕಲು ತಡೆನೀಡಿದ್ದರು. ಗುರುವಾರ ರಾತ್ರಿ ಬಿದ್ದ ಭಾರೀ ಮಳೆಯಿಂದ ಕೆರೆ ಕೋಡಿ ಹರಿದು ತಾಲೂಕಿನ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಜಾತ್ರೆ ವಾತಾವರಣ: ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಬಿದ್ದ ತಕ್ಷಣ ತಾಲೂಕಿನ ಜನರೆಲ್ಲೂ ಕೆರೆಯ ಬಳಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸೇರಿ ಅಲ್ಲಿ ಆಡವಾಡುತ್ತಾ, ನೀರಿನಲ್ಲಿ ಕುಣಿದು ಕುಪ್ಪಳಸಿ ಸಂಭ್ರಮಿಸುತ್ತಿದ್ದಾರೆ.

ಅಂತರ್ಜಲ ವೃದ್ಧಿ: ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಹರಿಯುವ ನೀರಿನಿಂದ 40ಕ್ಕೂ ಹೆಚ್ಚು ಸಣ್ಣ ಪುಟ್ಟ ಕೆರೆ ತುಂಬಿ, ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗುತ್ತದೆ.

ಪ್ರವಾಸಿ ತಾಣವಾದ ಕೆರೆ: ಗುಡಿಬಂಡೆ ಬೆಂಗಳೂರಿನಿಂದ 95 ಕಿ. ಮೀ ದೂರದಲ್ಲಿದ್ದು, ಬೆಂಗಳೂರಿಗೆ 100 ಕಿ.ಮೀ ಅಂತರ ಒಳಗಿನ ಒಂದು ದಿನದ ಪ್ರವಾಸಕ್ಕೆ ನಂದಿ ನಂತರದ ಪ್ರವಾಸಿ ತಾಣವಾಗಿ ಗುಡಿಬಂಡೆ ತಾಲೂಕಿನ ಸುರಸದ್ಮಗಿರಿ ಬೆಟ್ಟ, ಆವುಲಬೆಟ್ಟ, ಹತ್ತಿರದ ವಾಟದಹೊಸಹಳ್ಳಿ ಕೆರೆ ಹಾಗೂ ಅಮಾನಿಬೈರಸಾಗರ ಕೆರೆಯೂ ಸೇರ್ಪಡೆಗೊಂಡು, ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಭೇಟಿ ನೀಡುತ್ತಿದ್ದಾರೆ.

ರೈತರಿಗಿಲ್ಲ ಉಪಯೋಗ: 20 ವರ್ಷಗಳ ಹಿಂದೆ ಅಮಾನಿಬೈರ ಸಾಗರ ಕೆರೆ ತುಂಬಿದರೆ, ಕೆರೆಯ ನೀರನ್ನು ಅಚ್ಚುಕಟ್ಟಿನ ರೈತರ ಜಮೀನಿಗೆ ಹರಿಸಲಾಗುತ್ತಿತ್ತು. ಇದರಿಂದ ತಾಲೂಕಿನ ಯಾವುದೇ ಕೆಲಸವಿಲ್ಲದ ಜನರಿಗೆ ಕೃಷಿಯಿಂದಾದರೂ ಒಂದಷ್ಟು ಆದಾಯ ಪಡೆಯಬಹುದು. ಆದರೆ, ಇತ್ತೀಚಿಗೆ ಇಲ್ಲಿನ ಅಧಿಕಾರಿವರ್ಗದವರ ಬೇಜವಾಬ್ದಾರಿತನದಿಂದ ಕೆರೆಯ ನೀರನ್ನು ಬೆಳೆಗಳಿಗೆ ಬಿಡದೆ ರೈತರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ.

 ಬಾಗಿನ ಅರ್ಪಿಸಿದ ಸುಬ್ಬಾ ರೆಡ್ಡಿ

ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದ ಕನ್ಯಕಾಪರಮೇಶ್ವರಿಗೆ ದಸರಾ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಗೇಪಲ್ಲಿ ತಾಲೂಕಿನ ಕಟ್ಟಕಿಂದ ವೀರಭದ್ರಸ್ವಾಮಿಗೆ ದಸರಾ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.

ನವರಾತ್ರಿ ಪ್ರಯುಕ್ತ ಗೌರಿಬಿದನೂರು ನಗರ ಮಧುಗಿರಿ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಜಗತøಸೂತಿಕ ಅಲಂಕಾರವನ್ನು ಮಾಡಲಾಗಿತ್ತು.ಬಾಗೇಪಲ್ಲಿ ತಾಲೂಕಿನ ಕುಂಟ್ಲಪಲ್ಲಿಯಲ್ಲಿ ನಡೆದ ಲಸಿಕಾ ಆಂದೋಲನದಲ್ಲಿ ಆರೋಗ್ಯ ಸಹಾಯಕಿ ಲಕ್ಷ್ಮೀದೇವಿ ಲಸಿಕೆ ಹಾಕಿದರು. ಪಿ.ಎಸ್‌.ಅರುಣಾ, ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು. ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲಸಿಕಾ ಆಂದೋಲನಲ್ಲಿ ಆರೋಗ್ಯ ಸಹಾಯಕಿ ಲಸಿಕೆ ಹಾಕಿದರು. ಡಾ.ಐಶ್ವರ್ಯ, ಕರ ವಸೂಲಿಗಾರ ಶ್ರೀನಿವಾಸರೆಡ್ಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮಳೆಗೆ ಏಳು ಮನೆಗಳು ಧರೆಗೆ

ಮುಳಬಾಗಿಲು: ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧ ಕಡೆಗಳಲ್ಲಿ 7 ಮನೆಗಳು ಬಿದ್ದಿದ್ದು, ರಸ್ತೆಗಳು ಕೆಸರುಗದ್ದೆಗಳಾಗಿ ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳಬಾಗಿಲು ನಗರದಲ್ಲಿ 89 ಮಿ.ಮೀ., ದುಗ್ಗಸಂದ್ರ 70.4 ಮಿ.ಮೀ., ಗೋಕುಂಟೆ 26.2 ಮಿ.ಮೀ., ನಂಗಲಿ 12.ಮಿ.ಮೀ., ಆವಣಿ 69 ಮಿ.ಮೀ., ಬೈರಕೂರು 31 ಮಿ.ಮೀ., ತಾಯಲೂರು 108 ಮಿ.ಮೀ. ಮಳೆಯಾಗಿದೆ. ಆದ್ದರಿಂದ ಆವಣಿ ಹೋಬಳಿ ವರದಗಾನಹಳ್ಳಿ ಗ್ರಾಮದಲ್ಲಿ ವೆಂಕಟನಾರಾಯಣಗೌಡ ಮತ್ತು ಬಾಬು ಸೇರಿ 5 ಮನೆ ಮತ್ತು ಬೊಮ್ಮಸಂದ್ರ

ಗ್ರಾಮದಲ್ಲಿ ಒಂದು ಮನೆ ಬಿದ್ದು ಹೋಗಿದೆ. ಎಸ್‌.ಚದುಮನಹಳ್ಳಿ ಗ್ರಾಮದ ರೈತ ಶ್ರೀನಿವಾಸ್‌ಗೆ ಸೇರಿದ ಒಂದು ಎಕರೆರಾಗಿ ಬೆಳೆ ಜಲಾವೃತವಾಗಿದೆ. ಅತಿಯಾದ ಮಳೆ ನೀರಿನಿಂದ ಆವಣಿ, ಗಂಜಿಗುಂಟೆ ನಡುವಿನ ರಸ್ತೆಯು ನೀರಿನಲ್ಲಿ ಮುಳುಗಿದ್ದು, ಜನರ ಓಡಾಟಕ್ಕೆ

ಇದನ್ನೂ ಓದಿ;- ಕೋವಿಡ್ ಗೆ ಬಲಿಯಾದ ತಂದೆಯ ಪಿಎಚ್ ಡಿ ಪದವಿ ಸ್ವೀಕರಿಸಿದ 14ರ ಪುತ್ರ!!

ಅಡ್ಡಿಯುಂಟಾಗಿದೆ. ಅದೇ ರೀತಿ ಎಸ್‌.ಚದುಮನಹಳ್ಳಿ ಮತ್ತು ಪದಕಾಸ್ಟಿ ರಸ್ತೆಯೂ ಇದೇ ರೀತಿ ನೀರಿನಲ್ಲಿ ಮುಳುಗಿದ್ದು, ಜನರ ಸಂಚಾರಕ್ಕೆ ತೊಂದರೆಯುಂಟಾಗಿದೆ. ಮುಳಬಾಗಿಲು ತಾಲೂಕಿನಲ್ಲಿ ಬಿದ್ದ ಧಾರಾಕಾರ ಮಳೆಯಿಂದ ಆವಣಿ, ಗಂಜಿಗುಂಟೆ ನಡುವಿನ ರಸ್ತೆಯು ನೀರಿನಲ್ಲಿ ಮುಳುಗಿದ್ದು, ಜನರ ಓಡಾಟಕ್ಕೆ ಅಡ್ಡಿ ಆಗಿದೆ.

ರೈತ ಪರ ಕಾರ್ಯಕ್ರಮ ಯಶಸ್ವಿ: ಕೆಂಪರಾಜು

ಗೌರಿಬಿದನೂರು: ತಾಲೂಕಿನಲ್ಲಿ ಬಡರೈತರಿಗೆ ಉಳುಮೆ ಮಾಡಿಕೊಟ್ಟ ಸಂದರ್ಭಕ್ಕೆ ತಕ್ಕಂತೆ ಸಕಾಲಕ್ಕೆ ಉತ್ತಮ ಮಳೆಯಾಗಿ, ಬೆಳೆಯೂ ಕೈಗೆ ಬಂದಿರುವುದು ಸಂತೋಷ ತಂದಿದೆ ಎಂದು ಕೆ.ಆರ್‌.ಸ್ವಾಮಿ ವಿವೇಕಾನಂದ ಫೌಂಡೇಷನ್‌ನ ಅಧ್ಯಕ್ಷ ಡಾ.ಕೆ.ಕೆಂಪರಾಜು ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಹಾಲಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗಾಂಧಿನಗರ ಗ್ರಾಮದ ರುದ್ರಯ್ಯ ಎಂಬ ಬಡರೈತ ಬೆಳೆದಿರುವ ಬೆಳೆಯನ್ನು ವೀಕ್ಷಿಸಿದ ನಂತರ ಮಾತನಾಡಿ, ರೈತರಿಗೆ ಸೇವೆ ಮಾಡುತ್ತಿರುವುದು ಅವರಿಗೆ ಸಂಪೂರ್ಣವಾಗಿ ತಲುಪುತ್ತಿದೆ. ಕುಡಿಯುವ ನೀರು, ಉಚಿತ ಮಣ್ಣು ಪರೀಕ್ಷೆ ಮಾಡಿಸುವುದು, ಆ ಮೂಲಕ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಅವರೇ ನಿರ್ಧರಿಸಿದಂತಾದಾಗ ಅವರು ಲಾಭದಾಯಕ ಕೃಷಿ ಮಾಡಿ ಸ್ವಾವಲಂಬಿಗಳಾಗುತ್ತಾರೆ ಎಂಬುದು ನನ್ನ ದೂರದೃಷ್ಟಿ ಚಿಂತನೆಯಾಗಿದೆ ಎಂದು ಹೇಳಿದರು.

ಅದರ ಜೊತೆಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಟೈಲರಿಂಗ್‌ ಸೇರಿ ಹಲವು ಕುಲಕಸುಬುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ನಮ್ಮ ಫೌಂಡೇಷನ್‌ನಿಂದ ನೇಮಿಸಿರುವ ಪ್ರತಿನಿಧಿಗೆ ತಿಳಿಸಿ ಎಂದು ಹೇಳಿದರು. ಪ್ರತಿನಿತ್ಯ ಬಡ ರೋಗಿಗಳ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಸೇವೆ ನಿರಂತರವಾಗಿ ನಡೆಯುತ್ತಿದೆ.

ಬಡರೋಗಿಗಳಿಗೆ ಯಾವುದೇ ರೀತಿಯ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ವಿಫ‌Çವಾಗಿದೆ ಎಂದರು. ಪಂಚಾಯ್ತಿ ವ್ಯಾಪ್ತಿಯ ಮುಖಂಡರು ಉಪಸ್ಥಿತರಿದ್ದರು. ಗೌರಿಬಿದನೂರು ತಾಲೂಕು ಗಾಂಧಿನಗರ ಗ್ರಾಮದ ರುದ್ರಯ್ಯ ಬೆಳೆದಿರುವ ಮಿಶ್ರಬೆಳೆಯನ್ನು ಕೆ.ಆರ್‌.ಸ್ವಾಮಿ ವಿವೇಕಾನಂದ ಫೌಂಡೇಷನ್‌ ಅಧ್ಯಕ್ಷ ಡಾ.ಕೆ.ಕೆಂಪರಾಜು ವೀಕ್ಷಿಸಿದರು.

ಚಿಕ್ಕಬಳ್ಳಾಪುರದ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ 1988ರ ಮೋಟಾರು ವಾಹನಗಳ ಕಾಯ್ದೆ ಮತ್ತು ಗ್ರಾಹಕರ ಕಾನೂನು ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾ.ಲಕ್ಷಿ$¾àಕಾಂತ್‌ ಜಾನಕಿ ಮಿಸ್ಕಿನ್‌ ಉದ್ಘಾಟಿಸಿದರು. ಗುಡಿಬಂಡೆ ಅಮಾನಿಬೈರ ಸಾಗರ ಕೆರೆ ಕೋಡಿ ಹರಿಯುತ್ತಿರುವ ನೀರಲ್ಲಿ ಮಿಂದು ಜನರು ಸಂಭ್ರಮಪಟ್ಟರು.

ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಹೋಗಿದ್ದರಿಂದ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತಿದೊಡ್ಡ ಕೆರೆಯಾದ ಅಮಾನಿಬೈರಸಾಗರವು ತುಂಬಿರುವುದು ಸಂತಸ ತಂದಿದೆ ಎಂದು ಹೇಳಿದರು. ಪೂರ್ವಜರು ಕೆರೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರು, ಒಂದು ಕೆರೆಯು ತುಂಬಿದರೆ, ಅದರ ನೀರು ಪೋಲು ಆಗದಂತೆ, ಮತ್ತೂಂದು ಕೆರೆಗೆ ಹೋಗುವಂತೆ ಮಾಡಿ ರಾಜ ಕಾಲುವೆಗಳನ್ನು ನಿರ್ಮಾಣ ಮಾಡಿದ್ದಾರೆ.

ಈಗ ಹಲವು ಕೆರೆಗಳು ಒತ್ತುವರಿಯಾಗಿ, ಮುಚ್ಚಿರುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ ಎಂದು ಹೇಳಿದರು.  ತಹಶೀಲ್ದಾರ್‌ ಸಿಗ್ಬತುಲ್ಲಾ, ಇಒ ರವೀಂದ್ರ, ಕಾಂಗ್ರೆಸ್‌ ಮುಖಂಡರಾದ ಕೃಷ್ಣೇಗೌಡ, ಬಾಲಕೃಷ್ಣಾರೆಡ್ಡಿ, ಪ್ರಕಾಶ್‌, ಪಪಂ ನೂತನ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.