ಚುನಾವಣೆಗೆ ತಡೆಯಾಜ್ಞೆ ಸಿಗುತ್ತೆ: ಅನರ್ಹ ಶಾಸಕ ಸುಧಾಕರ್
Team Udayavani, Sep 21, 2019, 2:18 PM IST
ಚಿಕ್ಕಬಳ್ಳಾಪುರ: ನಮ್ಮನ್ನು ಅರ್ನಹಗೊಳಿಸಿರುವ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ವಿಚಾರಣೆಗೆ ಬಂದಿಲ್ಲ. ಆದ್ದರಿಂದ ಚುನಾವಣೆ ಘೋಷಣೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡುವ ವಿಶ್ವಾಸ ಇದೆಯೆಂದು ಅರ್ನಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಅರ್ನಹಗೊಳಿಸಿರುವುದು ಕಾನೂನು ಬಾಹಿರ. ಸ್ಪೀಕರ್ ಆದೇಶ ಪ್ರಶ್ನೆಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದೇವೆ. ಸೋಮವಾರ ಅರ್ಜಿ ವಿಚಾರಣೆಗೆ ಬರಲಿದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ತೆರವಾದ ಕ್ಷೇತ್ರಗಳಲ್ಲಿ ಆರು ತಿಂಗಳಲ್ಲಿ ಚುನಾವಣೆ ನಡೆಯಬೇಕು. ಆದಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ, ಆದರೆ ಇನ್ನೂ ಆದಿಸೂಚನೆ ಹೊರಡಿಸಿಲ್ಲ ಎಂದರು.
ಬೆಂಗಳೂರಿಗೆ ಹೊರಟ ಸುಧಾಕರ್
ಅತ್ತ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಪಿಕಾರ್ಡ ಬ್ಯಾಂಕ್ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದ ಸುಧಾಕರ್ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಟರು.