ರಾಕೇಶ್ ಸಿಂಗ್ ಟಿಕಾಯತ್ ಮೇಲೆ ದಾಳಿಗೆ ಖಂಡನೆ
Team Udayavani, Jun 1, 2022, 4:06 PM IST
ಚಿಕ್ಕಬಳ್ಳಾಪುರ: ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ಸಿಂಗ್ ಟಿಕಾಯತ್ ಮತ್ತುಯುದುವೀರ ಸಿಂಗ್ ಮುಂತಾದ ನಾಯಕರ ಮೇಲೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಕೂಡಲೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶವ್ಯಾಪ್ತಿಯಾಗಿ ಮತ್ತು 13 ತಿಂಗಳುಗಳ ಕಾಲ ದೆಹಲಿ ಸುತ್ತಮುತ್ತ ಸುಧೀರ್ಘವಾಗಿ ನಡೆದ ಲಕ್ಷಾಂತರ ರೈತಕುಟುಂಬಗಳ ಸಮರಶೀಲ ಐತಿಹಾಸಿಕ ಚಳುವಳಿಯು ಲೂಟಿಕೋರ ಕಾಪೋìರೇಟ್ ಕಂಪನಿಗಳ ಪರವಾದಮತ್ತು ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನುವಾಪಸ್ಸು ಪಡೆದು ಜಗತ್ತಿನ ಮುಂದೆ ಪ್ರಧಾನಮಂತ್ರಿ ಮಂಡಿಯೂರಿ ಕ್ಷಮೆ ಕೇಳುವಂತೆ ಮಾಡಿತು ಎಂದರು.
ಇದೇ ವೇಳೆ ಎಸಿ ಕಚೇರಿಯ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿದರು, ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಬಿಎನ್ ಮುನಿಕೃಷ್ಣಪ್ಪ, ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮೀ ನಾರಾಯಣರೆಡ್ಡಿ, ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ, ಉಪಾಧ್ಯಕ್ಷ ಟಿ.ಕೆ. ಅರುಣ್ ಕುಮಾರ್,ರಾಜ್ಯ ವಿಭಾಗೀಯ ಉಪಾಧ್ಯಕ್ಷಯಾಖುಬ್ ಶರೀಫ್, ಶಿಡ್ಲಘಟ್ಟ ರವಿಪ್ರಕಾಶ್, ತಾಲೂಕು ಅಧ್ಯಕ್ಷ ಯರ್ರಪ್ಪ, ನಂದಿಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ವಾಣಿ ಇತರರಿದ್ದರು.