ಅರಣ್ಯ ಭೂಮಿ ಬಿಟ್ಟು ಕದಲದ ನಿವೇಶನ ರಹಿತರು!
Team Udayavani, Dec 4, 2019, 1:29 PM IST
ಚಿಕ್ಕಮಗಳೂರು: ಅರಿಶಿನಗುಪ್ಪೆ ಸಮೀಪದ ಲಕ್ಷ್ಮೀಪುರದ ನಿವೇಶನ ರಹಿತರನ್ನು ಅರಣ್ಯ ಭೂಮಿಯಿಂದ ತೆರವುಗೊಳಿಸುವ ಕಾರ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಗ್ರಾಮದ 60ಕ್ಕೂ ಹೆಚ್ಚು ಮಂದಿ ದಲಿತರು ತಮಗೆ ಭೂಮಿ ನೀಡದೇ ಇರುವುದಕ್ಕೆ ಬೇಸತ್ತು ಲಕ್ಷ್ಮೀಪುರ ತುರ್ಚೆ ಗುಡ್ಡದ ಸರ್ವೆ ನಂಬರ್ 52ರಲ್ಲಿ ಅಧಿಸೂಚಿತ ಅರಣ್ಯ ಎಂದು ಘೋಷಿತವಾಗಿರುವ ಪ್ರದೇಶದಲ್ಲಿ ಗುಡಾರ ಹಾಕಿಕೊಂಡು, ಅಂಬೇಡ್ಕರ್ ಪ್ರತಿಮೆ ಇಟ್ಟು, ಭೂಮಿ ನೀಡುವವರೆಗೂ ಹೊರಬರುವುದಿಲ್ಲವೆಂದು ಧರಣಿ ಆರಂಭಿಸಿದ್ದರು.
ಸೋಮವಾರ ಅಧಿಕಾರಿಗಳು ನಡೆಸಿದ ಸಂಧಾನ ಫಲ ನೀಡಲಿಲ್ಲ. ಮಂಗಳವಾರ ಸಹ ಅಲ್ಲಿಗೆ ತೆರಳಿ ಅವರನ್ನು ಅರಣ್ಯ ಭೂಮಿಯಲ್ಲಿ ಜಮೀನು ಮಂಜೂರು ಸಾಧ್ಯವಿಲ್ಲವೆಂದು ತಿಳಿಸಿದರೂ ಅಲ್ಲಿಂದ ಹೊರಬರಲು ಒಪ್ಪಲಿಲ್ಲ. ಮಂಗಳವಾರ ಪ್ರತಿಭಟನಾನಿರತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಊದಿನಕಡ್ಡಿ ಬೆಳಗಿ ಪ್ರಾರ್ಥನೆ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂಬಂಧ ಬುಧವಾರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಈ ಪ್ರದೇಶ ಅಧಿಸೂಚಿತ ಅರಣ್ಯವೆಂದು ಕಾಯ್ದೆ 4ರಂತೆ ಘೋಷಿತವಾಗಿರುವುದರಿಂದ ಅದನ್ನು ಮಂಜೂರು ಮಾಡಲು ಸಾಧ್ಯವಿಲ್ಲವೆಂದು ತಿಳಿಸುವ ಸಂಭವವಿದೆ.
ಅರಣ್ಯ ಇಲಾಖೆ ಈಗಾಗಲೇ 15 ಮಂದಿಯ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಿದೆ. ಆದರೆ, ಈವರೆಗೂ ಒತ್ತುವರಿ ಮಾಡಿದ ಆರೋಪದ ಮೇಲೆ ಯಾರನ್ನೂ ಬಂಧಿಸಿಲ್ಲ ಹಾಗೂ ಬಲವಂತವಾಗಿ ತೆರವುಗೊಳಿಸುವ ಕಾರ್ಯಕ್ಕೂ ಮುಂದಾಗಿಲ್ಲ.
ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಈ ಭೂಮಿ ಅರಣ್ಯ ಇಲಾಖೆಗೆ ಸೇರಿರುವುದರಿಂದ ಹಾಗೂ ಒಮ್ಮೆ ಇದು ಅಧಿಸೂಚಿತ ಅರಣ್ಯ ಎಂದು ಕಾಯ್ದೆ 4ರ ಅಡಿ ಘೋಷಿತವಾಗಿದ್ದಲ್ಲಿ, ಅದನ್ನು ಮಂಜೂರು ಮಾಡುವ ಅಧಿಕಾರ ಯಾರಿಗೂ ಇಲ್ಲ. ಹಾಗಾಗಿ, ಸ್ಥಳಕ್ಕೆ ತಹಶೀಲ್ದಾರರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತೆರಳಿ ತಿಳಿಸಿದ್ದಾರೆ.
ಅರಣ್ಯಕ್ಕೆ ಸೇರಿದ ಭೂಮಿಯನ್ನು ಎಷ್ಟೇ ದಿನ ಅಲ್ಲಿ ಕುಳಿತರೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಬಂದು ಮಾತನಾಡಿದಲ್ಲಿ ಅವರಿಗೆ ಕಾನೂನನ್ನು ವಿವರಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ