ಶ್ರೀರಾಮನವಮಿ-ಸರಳ ರಾಮೋತ್ಸವ
Team Udayavani, Apr 22, 2021, 6:02 PM IST
ಶೃಂಗೇರಿ: ತಾಲೂಕಿನ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ಶ್ರೀ ರಾಮೋತ್ಸವ ಬುಧವಾರ ನಡೆಯಿತು. ಪಟ್ಟಣದ ಶ್ರೀ ಚಪ್ಪರದಾಂಜನೇಯ ಸ್ವಾಮಿ ದೇವಸ್ಥಾನ, ಬಾಕುರ್ಡಿ ಶ್ರೀ ಪರಶುರಾಮ ದೇವಸ್ಥಾನ, ವಿದ್ಯಾರಣ್ಯಪುರದ ಶ್ರೀ ರಾಮದೇವಸ್ಥಾನ, ಭಟ್ಟರಕೊಡಿಗೆ ಶ್ರೀ ರಾಮದೇವಸ್ಥಾನ, ಬೇಗಾರಿನ ಶ್ರೀ ರಾಮದೇವಸ್ಥಾನ ಮತ್ತಿತರ ಕಡೆ ರಾಮನವಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಶ್ರೀಮಠದಲ್ಲಿ ರಾಮನವಮಿ ಅಂಗವಾಗಿ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ಗುರುಭವನದಲ್ಲಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.