BJP: ಸೋತಿದ್ದು ಮಾತ್ರವಲ್ಲ, ಗೆದ್ದು ಮಂತ್ರಿಯಾಗಿದ್ದೂ ಹೇಳಿ; ಸೋಮಣ್ಣಗೆ ಜೀವರಾಜ್ ಟೀಕೆ
Team Udayavani, Oct 10, 2023, 4:57 PM IST
ಚಿಕ್ಕಮಗಳೂರು: ಬಿಜೆಪಿಗೆ ಬಂದು ನಾಲ್ಕು ಬಾರೀ ಸೋತ್ತಿದ್ದೇನೆ ಎಂದು ವಿ.ಸೋಮಣ್ಣ ಹೇಳಿಕೆ ನೀಡಿದ್ದು, ನಾನು ಬಿಜೆಪಿಯಲ್ಲಿದ್ದು ನಾಲ್ಕು ಬಾರೀ ಸೋತ್ತಿದ್ದೇನೆ ಎಂದು ಹೇಳಲು ಆಗುತ್ತಾ?, ಸೋತ್ತಿದ್ದು ಮಾತ್ರ ಹೇಳುವುದಲ್ಲ, ಮೂರು ಬಾರಿ ಗೆಲ್ಲಿಸಿ, ಮಂತ್ರಿ ಮಾಡಿದ್ದೂ ಹೇಳಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವಿಸೋಮಣ್ಣ ಅವರು ಎರಡು ಬಾರೀ ಸೋತಾಗಲೂ ಮಂತ್ರಿ ಮಾಡಲಾಗಿದೆ. ನಾನು ಶಾಸಕನಾಗಿ ಸೋಮಣ್ಣ ಅವರಿಗೆ ಮತ ಹಾಕಿದ್ದೇನೆ. ಬರೀ ಸೋತಿದ್ದು ಹೇಳಬಾರದು ಮಂತ್ರಿ ಮಾಡಿ ದ್ದು ಹೇಳಬೇಕು. ಹೋದ ಎಲ್ಲಾ ಪಕ್ಷದಲ್ಲೂ ಅಧಿಕಾರ ಮಾಡುತ್ತೇವೆಂಬ ಮನೋಸ್ಥಿತಿ ಸರಿಯಲ್ಲ. ಕೇವಲ ಅಧಿಕಾರವನ್ನು ಬಯಸದೆ, ಇರುವ ಪಕ್ಷಕ್ಕೆ ನಿಷ್ಠೆ ತೋರಬೇಕು. ಪಕ್ಷಕ್ಕೆ ಸೋಲಾದಾಗ ಜೊತೆಯಲ್ಲಿರಬೇಕು ಎಂದರು.
ಇಸ್ರೇಲ್-ಹಮಾಸ್ ಯುದ್ಧ ಸಂಬಂಧ ಪ್ರತಿಕ್ರಿಯಿಸಿದ ಅವರು, ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ದ ಘೋಷಿಸಿದಾಗ ನೀವು ದುರ್ಗಿಯ ಅವತಾರ ತಾಳಿ, ದೇಶ ಕಾಪಾಡಿ ಎಂದು ವಾಜಪೇಯಿ ಹೇಳಿದ್ದರು. ಇದು ವಿರೋಧ ಪಕ್ಷ ಮಾಡಬೇಕಾದ ಕೆಲಸ ದೇಶವೊಂದು ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಮತ್ತೊಂದು ತೀರ್ಮಾನ ಮಾಡುತ್ತದೆ. ರಾಜಕಾರಣ, ಮತಬ್ಯಾಂಕ್ ಗಾಗಿ ಕಾಂಗ್ರೆಸ್ ಪ್ಯಾಲಸ್ತೇನ್ ಪರ ನಿಲ್ಲುತ್ತಿದೆ ಅನಿಸುತ್ತಿದೆ. ದೇಶದೊಳಗೆ ರಾಜಕೀಯವಾಗಿ ಹೋರಾಡೋಣ ಆದರೆ, ದೇಶ, ಭದ್ರತೆ ವಿಚಾರ ಬಂದಾಗ ಕಾಂಗ್ರೆಸ್ ವಿಪಕ್ಷವಾಗಿ ನಿಲ್ಲಬಾರದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ