Kottigehara: ವಾಹನ ಸವಾರರಿಂದ ಕಲುಷಿತಗೊಳ್ಳುತ್ತಿದೆ ಹೇಮಾವತಿ ನದಿ…
Team Udayavani, Mar 12, 2024, 3:50 PM IST
ಕೊಟ್ಟಿಗೆಹಾರ: ಕಾಫಿನಾಡಿನ ಮಡಿಲಲ್ಲಿ ಅನೇಕ ಕೆರೆಗಳು, ನದಿಗಳು ಹರಿಯುವ ತಾಣವಾಗಿದ್ದು ಇಲ್ಲಿ ಹೇಮಾವತಿ ನದಿ ರೈತರ ಪಾಲಿಗೆ ಜೀವಜಲವಾಗಿದೆ. ಹೇಮಾವತಿ ನೀರಿನ ಹರಿವು ಮಳೆಯ ಕೊರತೆಯಿಂದ ಕ್ಷೀಣಿಸಿರುವುದರಿಂದ ಜೀವ ಜಲಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಬಣಕಲ್ ನಲ್ಲಿ ಸಂಗಮವಾಗುವ ಹೇಮಾವತಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದು ಜನರಿಗೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಲಿದೆ. ಇದರ ನಡುವೆ ಬತ್ತಿದ ನೀರಲ್ಲಿ ಬಣಕಲ್ ಸಮೀಪದ ಹೇಮಾವತಿ ನದಿಯಲ್ಲಿ ವಾಹನ ಸವಾರರು ಸಾಲುಗಟ್ಟಿ ತಮ್ಮ ವಾಹನಗಳನ್ನು ತೊಳೆಯುತ್ತಿರುವುದರಿಂದ ರಾಸಾಯನಿಕಯುಕ್ತ ಪದಾರ್ಥಗಳು ನೀರಿಗೆ ಸೇರಿ ಕಲುಷಿತಗೊಂಡು ಮಾನವನಾದಿಯಾಗಿ ನೀರಿನ ಆಶ್ರಯ ಪಡೆಯುತ್ತಿರುವ ಜಲಚರಗಳು, ಜೀವ ಸಂಕುಲ ಕೂಡ ಸಂಕಷ್ಟಕ್ಕೆ ಸಿಲುಕಿವೆ. ಪ್ರತಿನಿತ್ಯ ಕಾಫಿನಾಡಲ್ಲಿ ಹೇಮಾವತಿ ನದಿ ಬತ್ತುವ ಹಂತಕ್ಕೂ ತಲುಪಿದ್ದರಿಂದ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಇದರ ಮಧ್ಯೆ ವಾಹನ ಸವಾರರ ಹುಚ್ಚಾಟದಿಂದ ಜನರಿಗೆ ರೋಗಗಳಿಗೂ ಆಹ್ವಾನ ನೀಡಿದಂತಾಗಿದೆ. ಮಳೆಯ ಅಭಾವದಿಂದ ಕಾಫಿನಾಡು ಕಾದ ಹೆಂಚಂತಾಗಿದೆ. ಬಿಸಿಲ ನಡುವೆಯೂ ಸುಡುವ ನೆಲದಲ್ಲಿ ಹಸಿರಿಲ್ಲದೇ ಜಾನುವಾರುಗಳು ಕೂಡ ಮೇವಿನ ಕೊರತೆ ಎದುರಿಸುತ್ತಿವೆ. ವರ್ಷ ಕಳೆದಂತೆ ಮಲೆನಾಡಿನ ತಾಪಮಾನ ವಿಪರೀತ ಎನ್ನುವಂತೆ 28ರಿಂದ 32ಡಿಗ್ರಿಗೆ ಏರಿದ್ದು ಇದು ಪಕ್ಕದ ಬಯಲು ಸೀಮೆ ನಾಚಿಸುವಷ್ಟು ವಾತಾವರಣ ಮಲೆನಾಡಿನಲ್ಲಿ ಬಿಸಿಬಿಸಿಯಾಗಿ ಬದಲಾಗುತ್ತಿರುವುದು ಕಳವಳಕ್ಕೆ ಎಡೆಮಾಡಿದಂತಾಗಿದೆ.
‘ಹೇಮಾವತಿ ನದಿಯಲ್ಲಿ ವಾಹನ ತೊಳೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದನ್ನು ತಡೆಯಲು ಆ ದಾರಿಯಲ್ಲಿ ಸೂಚನಾ ಫಲಕ ಅಳವಡಿಸಿ ನದಿಗೆ ತೆರಳದಂತೆ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿದರೆ ದಂಡ ವಿಧಿಸಲಾಗುವುದು’.
– ಅತಿಕಾಭಾನು, ಬಣಕಲ್ ಗ್ರಾ.ಪಂ.ಅಧ್ಯಕ್ಷೆ.
‘ವಾಹನ ಸವಾರರು ನದಿಯಲ್ಲಿ ವಾಹನ ತೊಳೆಯುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದು ಹಲವು ವಾಹನಗಳಿಗೆ ದಂಡ ವಿಧಿಸಲಾಗಿದೆ’.
-ಮಧುಕುಮಾರ್, ಸದಸ್ಯ, ಬಣಕಲ್ ಗ್ರಾ.ಪಂ.
– ಸಂತೋಷ್ ಅತ್ತಿಗೆರೆ
ಇದನ್ನೂ ಓದಿ: Humanity: ಕೈ ಮುರಿದುಕೊಂಡ ಕೋತಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ