ಮುತಾಲಿಕ್ ಸೇರಿ ನಾಲ್ವರಿಗೆ ಜಾಮೀನು ಮಂಜೂರು
Team Udayavani, Jul 28, 2017, 7:50 AM IST
ಚಿಕ್ಕಮಗಳೂರು: ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದ ಗುಹೆಯೊಳಗೆ ಪ್ರತಿಭಟನೆ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ನಾಲ್ವರಿಗೆ ಜಾಮೀನು ದೊರಕಿದೆ.
ಕಳೆದ ವರ್ಷ ಶ್ರೀರಾಮಸೇನೆ ಆಯೋಜಿಸಿದ್ದ ದತ್ತಮಾಲಾ ಅಭಿಯಾನದ ವೇಳೆ ನಾಗಾಸಾಧುಗಳಿಗೆ ದತ್ತಪೀಠದಲ್ಲಿ ದತ್ತಪಾದುಕೆಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡದ್ದನ್ನು ಖಂಡಿಸಿ ಶ್ರೀರಾಮಸೇನೆ ಕಾರ್ಯಕರ್ತರು ಗುಹೆಯೊಳಗೆ
ಪ್ರತಿಭಟನೆ ನಡೆಸಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ
ನ್ಯಾಯಾಧೀಶ ಶ್ರೀರಾಮ ಹೆಗಡೆ ಅವರು, ಮುತಾಲಿಕ್ ಸೇರಿ ನಾಲ್ವರಿಗೂ ಜಾಮೀನು ನೀಡಿ, ವಿಚಾರಣೆಯನ್ನು
ಅ.26ಕ್ಕೆ ಮುಂದೂಡಿದರು.