ಗಡಿ ಕಲಾವಿದರ ಸಾಧನೆಗೆ ಸಿಗ್ತಿಲ್ಲ ಮನ್ನಣೆ
Team Udayavani, Jul 1, 2020, 3:24 PM IST
ಶೃಂಗೇರಿ: ಮಲೆನಾಡ ರಂಗಕರ್ಮಿ ಉಮೇಶ್ ಕಾಸರವಳ್ಳಿ ಅವರಿಗೆ ಭಾರತೀ ತೀರ್ಥ ಸಾಂಸ್ಕೃತಿಕ ಪ್ರತಿಷ್ಠಾನದ ಸಿಜಿಕೆ ರಂಗ ಪ್ರಶಸ್ತಿ ನೀಡಲಾಯಿತು
ಶೃಂಗೇರಿ: ಗಡಿ ಭಾಗದಲ್ಲಿ ವಾಸಿಸುವ ಕಲಾವಿದರು ಪ್ರಾದೇಶಿಕ ಆಯ್ಕೆಯ ಕಾರಣಕ್ಕೆ ಅತಂತ್ರರಾಗಿ ತಮ್ಮ ಸಾಧನೆಗೆ ತಕ್ಕ ಮನ್ನಣೆ ಪಡೆಯುವಲ್ಲಿ ವಂಚಿತರಾಗುತ್ತಾರೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಎಲ್. ರವಿಕುಮಾರ್ ಹೇಳಿದರು.
ಕಾಸರವಳ್ಳಿಯಲ್ಲಿ ಬೆಂಗಳೂರಿನ ಬೀದಿ ನಾಟಕ ಅಕಾಡೆಮಿ, ಬೆಂಗಳೂರು ಆರ್ಟ್ ಫೌಂಡೇಶನ್, ಅವಿರತ ಪುಸ್ತಕ ಮತ್ತು ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಟ್ರಸ್ಟ್ ನೀಡಿದ ಸಿಜಿಕೆ ರಂಗ ಪ್ರಶಸ್ತಿಯನ್ನು ಮಲೆನಾಡ ಹಿರಿಯ ಮತ್ತು ರಂಗ ಕಲಾವಿದ ಉಮೇಶ್ ಕಾಸರವಳ್ಳಿ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶವಾದ ಕಮ್ಮರಡಿಯಲ್ಲಿ ಕಳೆದ 4 ದಶಕಗಳಿಂದ ರಂಗಭೂಮಿಯ ವಿವಿಧ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿರುವ ಉಮೇಶ್ ಕಾಸರವಳ್ಳಿ ಅವರು ಈ ಭಾಗದ ರಂಗಭೂಮಿ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ ಎಂದರು.
ಉಮೇಶ್ ಕಾಸರವಳ್ಳಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂ.ಕೆ.ಶ್ರೀನಿ , ಕೃಷಿಕ ಅಗಲಿ ನಾಗರಾಜರಾವ್, ಮಾಲತಿ ಕಾಸರವಳ್ಳಿ ಉಪಸ್ಥಿತರಿದ್ದರು. ಸಂಘಟಕ ರಮೇಶ್ ಬೇಗಾರ್ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ